ಧಾರವಾಡ : ಎಲ್ಲರೂ ಕೂಡಿ ಬಾಳುವ, ಬೆಳೆಯುವ, ಬೆಳೆಸುವ ಉದಾತ್ತ ಚಿಂತನೆ ಸಹಕಾರಿ ಕ್ಷೇತ್ರದಲ್ಲಿರಬೇಕು. ಧಾರವಾಡ ಜಿಲ್ಲೆಯನ್ನು ಭಾರತದ ಸಹಕಾರಿ ಚಳುವಳಿಯ ತೊಟ್ಟಿಲು ಎಂದು ಕರೆದಿರುವುದು ಔಚಿತ್ಯಪೂರ್ಣವಾಗಿದೆ ಎಂದು ಸಹಕಾರಿ ಸಂಘಗಳ ಅಪರ ನಿಬಂಧಕ ಶಿವಾ ಕುಲಕರ್ಣಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ದಿ.ಎಸ್.ಎಂ.ಹೊಳೆಯಣ್ಣವರ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ 'ಸಹಕಾರ-ಪ್ರಸ್ತುತತೆ' ವಿಷಯದ ಕುರಿತು ಅವರು ಮಾತನಾಡಿದರು.
ಬಹುಜನ ಸುಖಾಯ, ಬಹುಜನ ಹಿತಾಯವು ಸಹಕಾರದ ಬೀಜಮಂತ್ರ. ಭಾರತದ ಸಂಸ್ಕೃತಿಯ ಧ್ಯೇಯವಾದ ಸರ್ವೇಜನ: ಸುಖಿನೋಭವಂತು ಎಂಬುದು ನಮ್ಮ ಪ್ರಾಚೀನ ಭಾರತದಲ್ಲಿ ಸಹಕಾರದ ಪರಿಕಲ್ಪನೆ ಇತ್ತು ಎಂಬುದಕ್ಕೆ ಸ್ಪಷ್ಟತೆ ಇದೆ. ನಂದಿನಿ ಹಾಲು ಮತ್ತು ಹಾಲಿನ ಉತ್ಪಾದನೆ ಮತ್ತು ರೈತರ ಬಾಳಿನ ಆಶಾಕಿರಣವಾದ ಇಪ್ಕೋ ರಸಾಯನಿಕ ಗೊಬ್ಬರಗಳು ಸಹಕಾರಿ ಕ್ಷೇತ್ರದ ಅದ್ಭುತ ಕೊಡುಗೆಗಳಾಗಿವೆ ಎಂದು ಸ್ಮರಿಸಿದರು.
ಸಹಕಾರ ಕ್ಷೇತ್ರದಲ್ಲಿ ಲಾಭಕ್ಕಿಂತ ಸೇವೆ ಮುಖ್ಯ. ಇದು ಪ್ರಜಾತಾಂತ್ರಿಕ ವ್ಯವಸ್ಥೆ ಹೊಂದಿದ್ದರಿಂದ ಬಂದ ಲಾಭವು ಎಲ್ಲರಿಗೂ ಸಮನಾಗಿ ಹಂಚಿಕೆಯಾಗುತ್ತದೆ. ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಸಹಕಾರವು ನಮಗೊಂದು ಆಶಾಕಿರಣವಾಗಿದೆ. ನಾವೂ ಬಾಳಬೇಕು-ಇತರರೂ ಬಾಳುವುದಕ್ಕೆ ಅವಕಾಶ ಕಲ್ಪಿಸಬೇಕು. ಸಹಕಾರವು ಬಂಡವಾಳಶಾಹಿ ಹಾಗೂ ಸಮಾಜವಾದಿ ವ್ಯವಸ್ಥೆಗಳ ನಡುವಿನ ಸುವರ್ಣ ಮಾರ್ಗವಾಗಿದೆ. ಉಳಿತಾಯ, ಸ್ವಸಹಾಯ, ನೈತಿಕತೆಗಳು ಸಹಕಾರದ ಹೆಗ್ಗುರುತುಗಳಾಗಿದ್ದು, ನಾವು ಅದರಂತೆ ಜೀವನ ವಿಧಾನ ರೂಪಿಸಿಕೊಳ್ಳಬೇಕು ಎಂದರು.
ಅಧ್ಯಕ್ಷ ತೆ ವಹಿಸಿದ್ದ ಕುಮಾರೇಶ್ವರ ಗೃಹ ನಿರ್ಮಾಣ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಪ್ರೊ.ಎಸ್.ಎಸ್. ದೇಸಾಯಿ ಮಾತನಾಡಿ, ವ್ಯಕ್ತಿಗೆ ಒಂದು ಮುಖವಾದರೆ ವ್ಯಕ್ತಿತ್ವಕ್ಕೆ ಹಲವು ಮುಖಗಳು. ದಿ.ಎಸ್.ಎಂ. ಹೊಳೆಯಣ್ಣವರ ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ಅವರು ಭವಿಷ್ಯಕ್ಕೊಂದು ಭರವಸೆಯ ವ್ಯಕ್ತಿಗಳಾಗಿದ್ದರು, ನೊಂದವರಿಗೆ-ಬೆಂದವರಿಗೆ ಧ್ವನಿಯಾಗಿದ್ದರು ಎಂದರು.
ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಜೂನ್ ತಿಂಗಳ ದತ್ತಿ ಕಾರ್ಯಕ್ರಮಗಳ ಸಂಯೋಜಕಿ ವಿಶ್ವೇಶ್ವರಿ ಬ. ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ ತುರಮರಿ, ಶಾಂತೇಶ ಗಾಮನಗಟ್ಟಿ, ಡಾ.ಪಾರ್ವತಿ ಸುರೇಶ ಹಾಲಭಾವಿ ದಂಪತಿಗಳು, ವೀರಣ್ಣ ಒಡ್ಡೀನ, ಬಸವರಾಜ ತಾಳಿಕೋಟಿ, ಬಸಲಿಂಗಯ್ಯ ಹಿರೇಮಠ, ಜಿ.ಬಿ. ಹೊಂಬಳ, ಬಿ.ಕೆ.ಹೊಂಗಲ, ಶಿ.ಮ.ರಾಚಯ್ಯನವರ, ಪ್ರೊ.ಹರ್ಷ ಡಂಬಳ, ಡಾ.ವಿಶ್ವನಾಥ ಚಿಂತಾಮಣಿ ಹಾಗೂ ಕುಮಾರೇಶ್ವರ ಗೃಹ ನಿರ್ಮಾಣ ಅಭಿವೃದ್ಧಿ ಸಂಘದ ನಿರ್ದೇಶಕ ವಿ.ಬಿ.ಪಾಟೀಲ, ಎಸ್.ಬಿ.ಹೂಗಾರ, ಬಿ.ಬಿ. ಭೂಮನಗೌಡರ, ಪರಪ್ಪ ಕುಸುಗಲ್ಲ, ವಿ.ಬಿ.ಗೋಲಣ್ಣವರ, ಗದಿಗೆಪ್ಪ ಜಕ್ಕಣ್ಣವರ, ಆರ್.ವಿ.ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಜಯಶ್ರೀ ಗೌಳಿ ನಿರೂಪಿಸಿದರು. ಗಿರಿಜಾ ಹಿರೇಮಠ ವಂದಿಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ದಿ.ಎಸ್.ಎಂ.ಹೊಳೆಯಣ್ಣವರ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ 'ಸಹಕಾರ-ಪ್ರಸ್ತುತತೆ' ವಿಷಯದ ಕುರಿತು ಅವರು ಮಾತನಾಡಿದರು.
ಬಹುಜನ ಸುಖಾಯ, ಬಹುಜನ ಹಿತಾಯವು ಸಹಕಾರದ ಬೀಜಮಂತ್ರ. ಭಾರತದ ಸಂಸ್ಕೃತಿಯ ಧ್ಯೇಯವಾದ ಸರ್ವೇಜನ: ಸುಖಿನೋಭವಂತು ಎಂಬುದು ನಮ್ಮ ಪ್ರಾಚೀನ ಭಾರತದಲ್ಲಿ ಸಹಕಾರದ ಪರಿಕಲ್ಪನೆ ಇತ್ತು ಎಂಬುದಕ್ಕೆ ಸ್ಪಷ್ಟತೆ ಇದೆ. ನಂದಿನಿ ಹಾಲು ಮತ್ತು ಹಾಲಿನ ಉತ್ಪಾದನೆ ಮತ್ತು ರೈತರ ಬಾಳಿನ ಆಶಾಕಿರಣವಾದ ಇಪ್ಕೋ ರಸಾಯನಿಕ ಗೊಬ್ಬರಗಳು ಸಹಕಾರಿ ಕ್ಷೇತ್ರದ ಅದ್ಭುತ ಕೊಡುಗೆಗಳಾಗಿವೆ ಎಂದು ಸ್ಮರಿಸಿದರು.
ಸಹಕಾರ ಕ್ಷೇತ್ರದಲ್ಲಿ ಲಾಭಕ್ಕಿಂತ ಸೇವೆ ಮುಖ್ಯ. ಇದು ಪ್ರಜಾತಾಂತ್ರಿಕ ವ್ಯವಸ್ಥೆ ಹೊಂದಿದ್ದರಿಂದ ಬಂದ ಲಾಭವು ಎಲ್ಲರಿಗೂ ಸಮನಾಗಿ ಹಂಚಿಕೆಯಾಗುತ್ತದೆ. ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಸಹಕಾರವು ನಮಗೊಂದು ಆಶಾಕಿರಣವಾಗಿದೆ. ನಾವೂ ಬಾಳಬೇಕು-ಇತರರೂ ಬಾಳುವುದಕ್ಕೆ ಅವಕಾಶ ಕಲ್ಪಿಸಬೇಕು. ಸಹಕಾರವು ಬಂಡವಾಳಶಾಹಿ ಹಾಗೂ ಸಮಾಜವಾದಿ ವ್ಯವಸ್ಥೆಗಳ ನಡುವಿನ ಸುವರ್ಣ ಮಾರ್ಗವಾಗಿದೆ. ಉಳಿತಾಯ, ಸ್ವಸಹಾಯ, ನೈತಿಕತೆಗಳು ಸಹಕಾರದ ಹೆಗ್ಗುರುತುಗಳಾಗಿದ್ದು, ನಾವು ಅದರಂತೆ ಜೀವನ ವಿಧಾನ ರೂಪಿಸಿಕೊಳ್ಳಬೇಕು ಎಂದರು.
ಅಧ್ಯಕ್ಷ ತೆ ವಹಿಸಿದ್ದ ಕುಮಾರೇಶ್ವರ ಗೃಹ ನಿರ್ಮಾಣ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಪ್ರೊ.ಎಸ್.ಎಸ್. ದೇಸಾಯಿ ಮಾತನಾಡಿ, ವ್ಯಕ್ತಿಗೆ ಒಂದು ಮುಖವಾದರೆ ವ್ಯಕ್ತಿತ್ವಕ್ಕೆ ಹಲವು ಮುಖಗಳು. ದಿ.ಎಸ್.ಎಂ. ಹೊಳೆಯಣ್ಣವರ ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ಅವರು ಭವಿಷ್ಯಕ್ಕೊಂದು ಭರವಸೆಯ ವ್ಯಕ್ತಿಗಳಾಗಿದ್ದರು, ನೊಂದವರಿಗೆ-ಬೆಂದವರಿಗೆ ಧ್ವನಿಯಾಗಿದ್ದರು ಎಂದರು.
ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಜೂನ್ ತಿಂಗಳ ದತ್ತಿ ಕಾರ್ಯಕ್ರಮಗಳ ಸಂಯೋಜಕಿ ವಿಶ್ವೇಶ್ವರಿ ಬ. ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ ತುರಮರಿ, ಶಾಂತೇಶ ಗಾಮನಗಟ್ಟಿ, ಡಾ.ಪಾರ್ವತಿ ಸುರೇಶ ಹಾಲಭಾವಿ ದಂಪತಿಗಳು, ವೀರಣ್ಣ ಒಡ್ಡೀನ, ಬಸವರಾಜ ತಾಳಿಕೋಟಿ, ಬಸಲಿಂಗಯ್ಯ ಹಿರೇಮಠ, ಜಿ.ಬಿ. ಹೊಂಬಳ, ಬಿ.ಕೆ.ಹೊಂಗಲ, ಶಿ.ಮ.ರಾಚಯ್ಯನವರ, ಪ್ರೊ.ಹರ್ಷ ಡಂಬಳ, ಡಾ.ವಿಶ್ವನಾಥ ಚಿಂತಾಮಣಿ ಹಾಗೂ ಕುಮಾರೇಶ್ವರ ಗೃಹ ನಿರ್ಮಾಣ ಅಭಿವೃದ್ಧಿ ಸಂಘದ ನಿರ್ದೇಶಕ ವಿ.ಬಿ.ಪಾಟೀಲ, ಎಸ್.ಬಿ.ಹೂಗಾರ, ಬಿ.ಬಿ. ಭೂಮನಗೌಡರ, ಪರಪ್ಪ ಕುಸುಗಲ್ಲ, ವಿ.ಬಿ.ಗೋಲಣ್ಣವರ, ಗದಿಗೆಪ್ಪ ಜಕ್ಕಣ್ಣವರ, ಆರ್.ವಿ.ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಜಯಶ್ರೀ ಗೌಳಿ ನಿರೂಪಿಸಿದರು. ಗಿರಿಜಾ ಹಿರೇಮಠ ವಂದಿಸಿದರು.