ಧಾರವಾಡ : ರಾಜ್ಯ ಬಿಜೆಪಿ ಸರಕಾರದ ಯಡ್ಡಿಯೂರಪ್ಪ ಸಂಪುಟದಲ್ಲಿ ಹು-ಧಾ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಗಾಂಧಿನಗರ ನಾಗರಿಕರ ವೇದಿಕೆಯ ಮಲ್ಲೇಶಪ್ಪ ಚಿಕ್ಕೇರಿ ಆಗ್ರಹಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ದೋಸ್ತಿ ಸರಕಾರ ಏಕ ಪಕ್ಷೀಯ ನಿರ್ಧಾರದ ಆಡಳಿತಕ್ಕೆ ಬೇಸತ್ತ ಜನತೆಗೆ ಬಿಜೆಪಿ ಸರಕಾರದಿಂದ ಹಮ್ಮಸಿನಲ್ಲಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಆಸೆಯಂತೆ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಯುವಕರಿಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಲ್ಲದ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದರು.
ಬೆಲ್ಲದ ಅವರು ರಸ್ತೆ ಸುಧಾರಣೆ, ಕಾಂಕ್ರಿಟ್ ರಸ್ತೆ ನಿರ್ಮಾಣ, ವಸತಿ ಹಾಗೂ ಒಳಚರಂಡಿ ನಿರ್ಮಾಣ ಮಾಡಿದ್ದಾರೆ. ಯುವ ಉತ್ಸಾಹಿಗಳಾದ ಅವರು ವಸತಿ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವ ಶಕ್ತಿ ಹೊಂದಿದ್ದಾರೆ. ನಿಸ್ವಾರ್ಥ ಹಾಗೂ ಕಳಂಕ ರಹಿತ ಆಡಳಿತ ಹೊಂದಿರುವ ಅವರು ಎಲ್ಲ ಜನಾಂಗವನ್ನು ಪ್ರೀತಿಯಿಂದ ಕಾಣುವ ಸಮಾಜಮುಖಿ ಚಿಂತನೆಯುಳ್ಳ ವ್ಯಕ್ತಿ. ಸರ್ವ ಸಮಾಜ ಒಗ್ಗೂಡಿಸುವ ನಾಯಕ. ಹೀಗಾಗಿ ಈ ಬಾರಿ ಜಿಲ್ಲೆಗೆ ಸಚಿವ ಸ್ಥಾನ ಸಿಗುವುದರಿಂದ ಅಭಿವೃದ್ಧಿ ಕೆಲಸಗಳು ಆಗಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗಾಂಧಿನಗರ ನಾಗರಿಕ ವೇದಿಕೆಯ ಶಂಕರ ಭಾವಿ, ಎಸ್.ಎಂ.ಬೆಟಗೇರಿ ಇತರರು ಇದ್ದರು.
ಸಂಪುಟ ದರ್ಜೆ ಸ್ಥಾನ ನೀಡಿ
ಧಾರವಾಡ : ಯಾವುದೇ ಸರಕಾರ ಬಂದಾಗಲೂ ರಾಜ್ಯ ಸಚಿವ ಸಂಪುಟದಲ್ಲಿ ಕೆಲ ವರ್ಷಗಳಿಂದ ಪಶ್ಚಿಮ ಕ್ಷೇತ್ರಕ್ಕೆ ಅನ್ಯಾಯವಾಗಿದೆ. ಹೀಗಾಗಿ ಪ್ರಸ್ತುತ ಬಿಜೆಪಿ ಸರಕಾರದಲ್ಲಿ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಬೇಕು ಎಂದು ಬಸವ ಬ್ರಿಗೇಡ್ ರಾಷ್ಟ್ರೀಯ ಅಧ್ಯಕ್ಷ ರವಿ ಹಂದಿಗೋಳ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರವಿಂದ ಬೆಲ್ಲದ ಅವರ ತಂದೆಯಂತೆ ಓರ್ವ ಸಜ್ಜನ ರಾಜಕಾರಣಿ, ನಾಯಕ, ವಿದ್ಯಾವಂತ, ದೂರದೃಷ್ಟಿಯುಳ್ಳ ವ್ಯಕ್ತಿ. ಅಭಿವೃದ್ಧಿ ಹರಿಕಾರ. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಧಾರವಾಡ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗುತ್ತಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಸವ ಬ್ರಿಗೇಡ್ನ ಪರಮೇಶ್ವರ ನಿಗದಿ, ಬಸವರಾಜ ಚಂದರಗಿ, ಶಿವಕಲ್ಲಪ್ಪ ಉಣಕಲ್, ಶಕುಂತಲಾ ನಂದಿಮಠ ಇದ್ದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ದೋಸ್ತಿ ಸರಕಾರ ಏಕ ಪಕ್ಷೀಯ ನಿರ್ಧಾರದ ಆಡಳಿತಕ್ಕೆ ಬೇಸತ್ತ ಜನತೆಗೆ ಬಿಜೆಪಿ ಸರಕಾರದಿಂದ ಹಮ್ಮಸಿನಲ್ಲಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಆಸೆಯಂತೆ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಯುವಕರಿಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಲ್ಲದ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದರು.
ಬೆಲ್ಲದ ಅವರು ರಸ್ತೆ ಸುಧಾರಣೆ, ಕಾಂಕ್ರಿಟ್ ರಸ್ತೆ ನಿರ್ಮಾಣ, ವಸತಿ ಹಾಗೂ ಒಳಚರಂಡಿ ನಿರ್ಮಾಣ ಮಾಡಿದ್ದಾರೆ. ಯುವ ಉತ್ಸಾಹಿಗಳಾದ ಅವರು ವಸತಿ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವ ಶಕ್ತಿ ಹೊಂದಿದ್ದಾರೆ. ನಿಸ್ವಾರ್ಥ ಹಾಗೂ ಕಳಂಕ ರಹಿತ ಆಡಳಿತ ಹೊಂದಿರುವ ಅವರು ಎಲ್ಲ ಜನಾಂಗವನ್ನು ಪ್ರೀತಿಯಿಂದ ಕಾಣುವ ಸಮಾಜಮುಖಿ ಚಿಂತನೆಯುಳ್ಳ ವ್ಯಕ್ತಿ. ಸರ್ವ ಸಮಾಜ ಒಗ್ಗೂಡಿಸುವ ನಾಯಕ. ಹೀಗಾಗಿ ಈ ಬಾರಿ ಜಿಲ್ಲೆಗೆ ಸಚಿವ ಸ್ಥಾನ ಸಿಗುವುದರಿಂದ ಅಭಿವೃದ್ಧಿ ಕೆಲಸಗಳು ಆಗಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗಾಂಧಿನಗರ ನಾಗರಿಕ ವೇದಿಕೆಯ ಶಂಕರ ಭಾವಿ, ಎಸ್.ಎಂ.ಬೆಟಗೇರಿ ಇತರರು ಇದ್ದರು.
ಸಂಪುಟ ದರ್ಜೆ ಸ್ಥಾನ ನೀಡಿ
ಧಾರವಾಡ : ಯಾವುದೇ ಸರಕಾರ ಬಂದಾಗಲೂ ರಾಜ್ಯ ಸಚಿವ ಸಂಪುಟದಲ್ಲಿ ಕೆಲ ವರ್ಷಗಳಿಂದ ಪಶ್ಚಿಮ ಕ್ಷೇತ್ರಕ್ಕೆ ಅನ್ಯಾಯವಾಗಿದೆ. ಹೀಗಾಗಿ ಪ್ರಸ್ತುತ ಬಿಜೆಪಿ ಸರಕಾರದಲ್ಲಿ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಬೇಕು ಎಂದು ಬಸವ ಬ್ರಿಗೇಡ್ ರಾಷ್ಟ್ರೀಯ ಅಧ್ಯಕ್ಷ ರವಿ ಹಂದಿಗೋಳ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರವಿಂದ ಬೆಲ್ಲದ ಅವರ ತಂದೆಯಂತೆ ಓರ್ವ ಸಜ್ಜನ ರಾಜಕಾರಣಿ, ನಾಯಕ, ವಿದ್ಯಾವಂತ, ದೂರದೃಷ್ಟಿಯುಳ್ಳ ವ್ಯಕ್ತಿ. ಅಭಿವೃದ್ಧಿ ಹರಿಕಾರ. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಧಾರವಾಡ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗುತ್ತಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಸವ ಬ್ರಿಗೇಡ್ನ ಪರಮೇಶ್ವರ ನಿಗದಿ, ಬಸವರಾಜ ಚಂದರಗಿ, ಶಿವಕಲ್ಲಪ್ಪ ಉಣಕಲ್, ಶಕುಂತಲಾ ನಂದಿಮಠ ಇದ್ದರು.