ಹುಬ್ಬಳ್ಳಿ : ಸ್ಥಳೀಯ ರಸ್ತೆ ಸಾರಿಗೆ ಪ್ರಾಧಿಕಾರ ನೀಡಿದ್ದ ಆದೇಶವನ್ನು ವಜಾಗೊಳಿಸಿರುವ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧೀಕರಣವು, ಬೇಂದ್ರೆ ನಗರ ಸಾರಿಗೆಯ 41 ಬಸ್ಗಳ ಓಡಾಟಕ್ಕೆ ಜುಲೈ 31ರವರೆಗೆ ತಾತ್ಕಾಲಿಕ ಅನುಮತಿ ನೀಡಿ ಸೋಮವಾರ ಆದೇಶ ನೀಡಿದೆ.
ಹು-ಧಾ ಮಧ್ಯೆ ಬಿಆರ್ಟಿಎಸ್ ಬಸ್ ಸಂಚಾರ ಪ್ರಾರಂಭವಾದ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಪ್ರಾಧಿಕಾರ 41 ಬಸ್ಗಳ ಪರಮಿಟ್ನ್ನು ನವೀಕರಣಗೊಳಿಸಿರಲಿಲ್ಲ. ಹೀಗಾಗಿ ಬೇಂದ್ರೆ ನಗರ ಸಾರಿಗೆ ಸಂಸ್ಥೆಯು ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿತ್ತು. ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಸಾರಿಗೆ ಮೇಲ್ಮನವಿ ನ್ಯಾಯಾಧೀಕರಣ ಇದೀಗ ತಾತ್ಕಾಲಿಕ ಅನುಮತಿ ನೀಡಿ ಆದೇಶ ನೀಡಿದೆ.
ಸೋಮವಾರದಿಂದ 15 ದಿನಗಳವರೆಗೆ ತಾತ್ಕಾಲಿಕ ಪರವಾನಗಿ ನೀಡಲಾಗಿದ್ದು, ಈ ಅವಧಿಯಲ್ಲಿ ಸ್ಥಳೀಯ ರಸ್ತೆ ಸಾರಿಗೆ ಪ್ರಾಧಿಕಾರದಿಂದ ಪರ್ಮಿಟ್ ನವೀಕರಣ ಮಾಡಿಸಿಕೊಳ್ಳಬೇಕೆಂದು ನಿರ್ದೇಶನ ನೀಡಿದೆ. ಸೋಮವಾರದಿಂದ 10 ಬಸ್ , ಮಂಗಳವಾರದಿಂದ 30 ಬೇಂದ್ರೆ ನಗರ ಸಾರಿಗೆ ಬಸ್ಗಳು ಹು-ಧಾ ಮಧ್ಯೆ ಬಸ್ಗಳು ಕಾರ್ಯಾಚರಣೆ ನಡೆಸಲಿವೆ.
2003 ಡಿಸೆಂಬರ್ 31ರಲ್ಲಿ ಸ್ಟೇಜ್ ಕ್ಯಾರೇಜ್ ಪ್ರಕಾರ ಬೇಂದ್ರ ನಗರ ಸಾರಿಗೆ ಬಸ್ಗಳ ಓಡಾಟಕ್ಕೆ ಸರಕಾರ ಅನುಮತಿ ನೀಡಿತ್ತು. ನಂತರ 2006ರಲ್ಲಿ ಸರಕಾರ ಈ ಆದೇಶವನ್ನು ಹಿಂಪಡೆದು 2010ರಲ್ಲಿ ತಿದ್ದುಪಡಿಗೊಳಿಸಿ ಪರ್ಮಿಟ್ ನವೀಕರಣ ಹಕ್ಕನ್ನು ಸರಕಾರ ತನ್ನ ಬಳಿ ಇಟ್ಟುಕೊಂಡು ಬಸ್ಗಳ ಓಡಾಟಕ್ಕೆ ಪರವಾನಗಿ ನೀಡಿತ್ತು. ಈ ಆದೇಶದನ್ವಯ ಬೇಂದ್ರೆ ನಗರ ಸಾರಿಗೆ ಹು-ಧಾ ಮಧ್ಯೆ ಕಾರ್ಯಾಚರಣೆ ಪ್ರಾರಂಭಿಸಿತ್ತು. ಆದರೀಗ ಬಿಆರ್ಟಿಎಸ್ ಬಸ್ಗಳ ಓಡಾಟ ಪ್ರಾರಂಭವಾಗಿದ್ದರಿಂದ ಬೇಂದ್ರೆ ನಗರ ಸಾರಿಗೆ ಪರ್ಮಿಟ್ನ್ನು ನವೀಕರಣ ಮಾಡಿರಲಿಲ್ಲ. ಈ ಬಗ್ಗೆ ಬೇಂದ್ರೆ ನಗರ ಸಾರಿಗೆ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಇದನ್ನು ಪರಿಶೀಲನೆ ನಡೆಸಿದ ನ್ಯಾಯಾಲಯವೂ 2019 ಜೂನ್ 27ರಂದು ಈ ವಿಚಾರವನ್ನು ಪರಿಶೀಲಿಸುವಂತೆ ಸೂಚಿಸಿತ್ತು.
ನ್ಯಾಯಾಲಯದ ಆದೇಶದಂತೆ ವಿಚಾರಣೆ ನಡೆಸಿದ ಸ್ಥಳೀಯ ರಸ್ತೆ ಸಾರಿಗೆ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ಎಂ.ದೀಪಾ ಪರ್ಮಿಟ್ ನವೀಕರಣಕ್ಕೆ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಬೇಂದ್ರೆ ನಗರ ಸಾರಿಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ಪರಿಶೀಲನೆ ನಡೆಸಿ ಜು. 31ರವರೆಗೆ ತಾತ್ಕಾಲಿಕ ಅನುಮತಿ ನೀಡಿದೆ.
ಹು-ಧಾ ಮಧ್ಯೆ ಬಿಆರ್ಟಿಎಸ್ ಬಸ್ ಸಂಚಾರ ಪ್ರಾರಂಭವಾದ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಪ್ರಾಧಿಕಾರ 41 ಬಸ್ಗಳ ಪರಮಿಟ್ನ್ನು ನವೀಕರಣಗೊಳಿಸಿರಲಿಲ್ಲ. ಹೀಗಾಗಿ ಬೇಂದ್ರೆ ನಗರ ಸಾರಿಗೆ ಸಂಸ್ಥೆಯು ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿತ್ತು. ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಸಾರಿಗೆ ಮೇಲ್ಮನವಿ ನ್ಯಾಯಾಧೀಕರಣ ಇದೀಗ ತಾತ್ಕಾಲಿಕ ಅನುಮತಿ ನೀಡಿ ಆದೇಶ ನೀಡಿದೆ.
ಸೋಮವಾರದಿಂದ 15 ದಿನಗಳವರೆಗೆ ತಾತ್ಕಾಲಿಕ ಪರವಾನಗಿ ನೀಡಲಾಗಿದ್ದು, ಈ ಅವಧಿಯಲ್ಲಿ ಸ್ಥಳೀಯ ರಸ್ತೆ ಸಾರಿಗೆ ಪ್ರಾಧಿಕಾರದಿಂದ ಪರ್ಮಿಟ್ ನವೀಕರಣ ಮಾಡಿಸಿಕೊಳ್ಳಬೇಕೆಂದು ನಿರ್ದೇಶನ ನೀಡಿದೆ. ಸೋಮವಾರದಿಂದ 10 ಬಸ್ , ಮಂಗಳವಾರದಿಂದ 30 ಬೇಂದ್ರೆ ನಗರ ಸಾರಿಗೆ ಬಸ್ಗಳು ಹು-ಧಾ ಮಧ್ಯೆ ಬಸ್ಗಳು ಕಾರ್ಯಾಚರಣೆ ನಡೆಸಲಿವೆ.
2003 ಡಿಸೆಂಬರ್ 31ರಲ್ಲಿ ಸ್ಟೇಜ್ ಕ್ಯಾರೇಜ್ ಪ್ರಕಾರ ಬೇಂದ್ರ ನಗರ ಸಾರಿಗೆ ಬಸ್ಗಳ ಓಡಾಟಕ್ಕೆ ಸರಕಾರ ಅನುಮತಿ ನೀಡಿತ್ತು. ನಂತರ 2006ರಲ್ಲಿ ಸರಕಾರ ಈ ಆದೇಶವನ್ನು ಹಿಂಪಡೆದು 2010ರಲ್ಲಿ ತಿದ್ದುಪಡಿಗೊಳಿಸಿ ಪರ್ಮಿಟ್ ನವೀಕರಣ ಹಕ್ಕನ್ನು ಸರಕಾರ ತನ್ನ ಬಳಿ ಇಟ್ಟುಕೊಂಡು ಬಸ್ಗಳ ಓಡಾಟಕ್ಕೆ ಪರವಾನಗಿ ನೀಡಿತ್ತು. ಈ ಆದೇಶದನ್ವಯ ಬೇಂದ್ರೆ ನಗರ ಸಾರಿಗೆ ಹು-ಧಾ ಮಧ್ಯೆ ಕಾರ್ಯಾಚರಣೆ ಪ್ರಾರಂಭಿಸಿತ್ತು. ಆದರೀಗ ಬಿಆರ್ಟಿಎಸ್ ಬಸ್ಗಳ ಓಡಾಟ ಪ್ರಾರಂಭವಾಗಿದ್ದರಿಂದ ಬೇಂದ್ರೆ ನಗರ ಸಾರಿಗೆ ಪರ್ಮಿಟ್ನ್ನು ನವೀಕರಣ ಮಾಡಿರಲಿಲ್ಲ. ಈ ಬಗ್ಗೆ ಬೇಂದ್ರೆ ನಗರ ಸಾರಿಗೆ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಇದನ್ನು ಪರಿಶೀಲನೆ ನಡೆಸಿದ ನ್ಯಾಯಾಲಯವೂ 2019 ಜೂನ್ 27ರಂದು ಈ ವಿಚಾರವನ್ನು ಪರಿಶೀಲಿಸುವಂತೆ ಸೂಚಿಸಿತ್ತು.
ನ್ಯಾಯಾಲಯದ ಆದೇಶದಂತೆ ವಿಚಾರಣೆ ನಡೆಸಿದ ಸ್ಥಳೀಯ ರಸ್ತೆ ಸಾರಿಗೆ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ಎಂ.ದೀಪಾ ಪರ್ಮಿಟ್ ನವೀಕರಣಕ್ಕೆ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಬೇಂದ್ರೆ ನಗರ ಸಾರಿಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ಪರಿಶೀಲನೆ ನಡೆಸಿ ಜು. 31ರವರೆಗೆ ತಾತ್ಕಾಲಿಕ ಅನುಮತಿ ನೀಡಿದೆ.