ಆ್ಯಪ್ನಗರ

ಜಿಂದಾಲ್‌ಗೆ ಭೂಮಿ ಮಾರಾಟ ದೊಡ್ಡ ಹಗರಣ: ಶೆಟ್ಟರ್‌

ಹುಬ್ಬಳ್ಳಿ : ಬಳ್ಳಾರಿ ಜಿಲ್ಲೆಯ ತೊರಣಗಲ್ಲು ಸುತ್ತಲಿನ ಬೆಲೆ ಬಾಳುವ ಜಮೀನನ್ನು ಕೇವಲ 1.22 ಲಕ್ಷ ರೂ.ಗೆ ಒಂದು ಎಕರೆಯಂತೆ ಸುಮಾರು 3600 ಎಕರೆ ಜಮೀನನ್ನು ಜಿಂದಾಲ್‌ ಕಂಪೆನಿಗೆ ಮಾರಾಟ ಮಾಡುವ ನಿರ್ಧಾರದ ಹಿಂದೆ ಬಹು ದೊಡ್ಡ ಹಗರಣ ಅಡಗಿದೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಆರೋಪಿಸಿದರು.

Vijaya Karnataka 10 Jun 2019, 5:00 am
ಹುಬ್ಬಳ್ಳಿ : ಬಳ್ಳಾರಿ ಜಿಲ್ಲೆಯ ತೊರಣಗಲ್ಲು ಸುತ್ತಲಿನ ಬೆಲೆ ಬಾಳುವ ಜಮೀನನ್ನು ಕೇವಲ 1.22 ಲಕ್ಷ ರೂ.ಗೆ ಒಂದು ಎಕರೆಯಂತೆ ಸುಮಾರು 3600 ಎಕರೆ ಜಮೀನನ್ನು ಜಿಂದಾಲ್‌ ಕಂಪೆನಿಗೆ ಮಾರಾಟ ಮಾಡುವ ನಿರ್ಧಾರದ ಹಿಂದೆ ಬಹು ದೊಡ್ಡ ಹಗರಣ ಅಡಗಿದೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಆರೋಪಿಸಿದರು.
Vijaya Karnataka Web big scandal for land sale to jindal shettar
ಜಿಂದಾಲ್‌ಗೆ ಭೂಮಿ ಮಾರಾಟ ದೊಡ್ಡ ಹಗರಣ: ಶೆಟ್ಟರ್‌


ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಾಜ್ಯ ಸರಕಾರ ಕಮಿಷನ್‌ ಆಸೆಗೆ ಕಡಿಮೆ ದರದಲ್ಲಿ ಜಿಂದಾಲ್‌ ಕಂಪೆನಿಗೆ ಜಮೀನು ಮಾರುವ ನಿರ್ಧಾರಕ್ಕೆ ಬಂದಿದೆ. ಈ ಪ್ರಕ್ರಿಯೆ ಪಾರದರ್ಶಕವಾಗಿಲ್ಲ. ಜಮೀನು ಮಾರಾಟದ ಬಗ್ಗೆ ತನಿಖೆಯಾಗಬೇಕು. ಇಲ್ಲವಾದರೆ ಬಿಜೆಪಿ ಈ ಹಗರಣದ ವಿರುದ್ಧ ಹೋರಾಟ ಮಾಡಲಿದೆ'' ಎಂದು ಎಚ್ಚರಿಕೆ ನೀಡಿದರು.

''ಅಧಿಧಿಕಾರಿಗಳ ಮೇಲೆ ಸರಕಾರದ ಹಿಡಿತವಿಲ್ಲ. ಆದ್ದರಿಂದ ಆಡಳಿತ ಸಂಪೂರ್ಣವಾಗಿ ಕುಸಿದಿದ್ದು, ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿದೆ. ಇದಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ವರ್ತನೆಯೇ ಉತ್ತಮ ಉದಾಹರಣೆ. ಇನ್ನು ರಾಜ್ಯ ಸರಕಾರ ಯಾವಾಗ ಪತನವಾಗುತ್ತದೆ ಎಂದು ಹೇಳಲಾಗುವುದಿಲ್ಲ್ಲ. ಒಂದು ವೇಳೆ ಸರಕಾರ ಪತನವಾದರೆ ನಮ್ಮ ಪಕ್ಷ ಬಿಜೆಪಿ ಸರಕಾರ ರಚಿಸಲಿದೆ'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ