ಹುಬ್ಬಳ್ಳಿ : ಬಳ್ಳಾರಿ ಜಿಲ್ಲೆಯ ತೊರಣಗಲ್ಲು ಸುತ್ತಲಿನ ಬೆಲೆ ಬಾಳುವ ಜಮೀನನ್ನು ಕೇವಲ 1.22 ಲಕ್ಷ ರೂ.ಗೆ ಒಂದು ಎಕರೆಯಂತೆ ಸುಮಾರು 3600 ಎಕರೆ ಜಮೀನನ್ನು ಜಿಂದಾಲ್ ಕಂಪೆನಿಗೆ ಮಾರಾಟ ಮಾಡುವ ನಿರ್ಧಾರದ ಹಿಂದೆ ಬಹು ದೊಡ್ಡ ಹಗರಣ ಅಡಗಿದೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಾಜ್ಯ ಸರಕಾರ ಕಮಿಷನ್ ಆಸೆಗೆ ಕಡಿಮೆ ದರದಲ್ಲಿ ಜಿಂದಾಲ್ ಕಂಪೆನಿಗೆ ಜಮೀನು ಮಾರುವ ನಿರ್ಧಾರಕ್ಕೆ ಬಂದಿದೆ. ಈ ಪ್ರಕ್ರಿಯೆ ಪಾರದರ್ಶಕವಾಗಿಲ್ಲ. ಜಮೀನು ಮಾರಾಟದ ಬಗ್ಗೆ ತನಿಖೆಯಾಗಬೇಕು. ಇಲ್ಲವಾದರೆ ಬಿಜೆಪಿ ಈ ಹಗರಣದ ವಿರುದ್ಧ ಹೋರಾಟ ಮಾಡಲಿದೆ'' ಎಂದು ಎಚ್ಚರಿಕೆ ನೀಡಿದರು.
''ಅಧಿಧಿಕಾರಿಗಳ ಮೇಲೆ ಸರಕಾರದ ಹಿಡಿತವಿಲ್ಲ. ಆದ್ದರಿಂದ ಆಡಳಿತ ಸಂಪೂರ್ಣವಾಗಿ ಕುಸಿದಿದ್ದು, ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿದೆ. ಇದಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ವರ್ತನೆಯೇ ಉತ್ತಮ ಉದಾಹರಣೆ. ಇನ್ನು ರಾಜ್ಯ ಸರಕಾರ ಯಾವಾಗ ಪತನವಾಗುತ್ತದೆ ಎಂದು ಹೇಳಲಾಗುವುದಿಲ್ಲ್ಲ. ಒಂದು ವೇಳೆ ಸರಕಾರ ಪತನವಾದರೆ ನಮ್ಮ ಪಕ್ಷ ಬಿಜೆಪಿ ಸರಕಾರ ರಚಿಸಲಿದೆ'' ಎಂದು ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಾಜ್ಯ ಸರಕಾರ ಕಮಿಷನ್ ಆಸೆಗೆ ಕಡಿಮೆ ದರದಲ್ಲಿ ಜಿಂದಾಲ್ ಕಂಪೆನಿಗೆ ಜಮೀನು ಮಾರುವ ನಿರ್ಧಾರಕ್ಕೆ ಬಂದಿದೆ. ಈ ಪ್ರಕ್ರಿಯೆ ಪಾರದರ್ಶಕವಾಗಿಲ್ಲ. ಜಮೀನು ಮಾರಾಟದ ಬಗ್ಗೆ ತನಿಖೆಯಾಗಬೇಕು. ಇಲ್ಲವಾದರೆ ಬಿಜೆಪಿ ಈ ಹಗರಣದ ವಿರುದ್ಧ ಹೋರಾಟ ಮಾಡಲಿದೆ'' ಎಂದು ಎಚ್ಚರಿಕೆ ನೀಡಿದರು.
''ಅಧಿಧಿಕಾರಿಗಳ ಮೇಲೆ ಸರಕಾರದ ಹಿಡಿತವಿಲ್ಲ. ಆದ್ದರಿಂದ ಆಡಳಿತ ಸಂಪೂರ್ಣವಾಗಿ ಕುಸಿದಿದ್ದು, ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿದೆ. ಇದಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ವರ್ತನೆಯೇ ಉತ್ತಮ ಉದಾಹರಣೆ. ಇನ್ನು ರಾಜ್ಯ ಸರಕಾರ ಯಾವಾಗ ಪತನವಾಗುತ್ತದೆ ಎಂದು ಹೇಳಲಾಗುವುದಿಲ್ಲ್ಲ. ಒಂದು ವೇಳೆ ಸರಕಾರ ಪತನವಾದರೆ ನಮ್ಮ ಪಕ್ಷ ಬಿಜೆಪಿ ಸರಕಾರ ರಚಿಸಲಿದೆ'' ಎಂದು ತಿಳಿಸಿದರು.