ಆ್ಯಪ್ನಗರ

ಉಪಚುನಾವಣೆಯಲ್ಲಿ ಗೆಲುವು ಬಿಜೆಪಿ ವಿಜಯೋತ್ಸವ

ಹುಬ್ಬಳ್ಳಿ: ಉಪಚುನಾವಣೆಯ 12 ಕ್ಷೇತ್ರಗಳಲ್ಲಿಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿಹು-ಧಾ ಪೂರ್ವ ಕ್ಷೇತ್ರದ ಘಟಕದ ವತಿಯಿಂದ ಇಲ್ಲಿನ ದುರ್ಗದಬೈಲ್‌ನಲ್ಲಿಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದ ಕಾರ್ಯಕರ್ತರು, ಬಿಜೆಪಿ ಪರವಾಗಿ ಜಯಘೋಷ ಕೂಗಿದರು.

Vijaya Karnataka 10 Dec 2019, 5:00 am
ಹುಬ್ಬಳ್ಳಿ: ಉಪಚುನಾವಣೆಯ 12 ಕ್ಷೇತ್ರಗಳಲ್ಲಿಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿಹು-ಧಾ ಪೂರ್ವ ಕ್ಷೇತ್ರದ ಘಟಕದ ವತಿಯಿಂದ ಇಲ್ಲಿನ ದುರ್ಗದಬೈಲ್‌ನಲ್ಲಿಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದ ಕಾರ್ಯಕರ್ತರು, ಬಿಜೆಪಿ ಪರವಾಗಿ ಜಯಘೋಷ ಕೂಗಿದರು.
Vijaya Karnataka Web bjp triumph in by election
ಉಪಚುನಾವಣೆಯಲ್ಲಿ ಗೆಲುವು ಬಿಜೆಪಿ ವಿಜಯೋತ್ಸವ


ಬಿಜೆಪಿ, ಬಿಎಸ್‌ವೈ, ಪ್ರಧಾನಿ ಮೋದಿ ಪರ ಘೋಷಣೆ ಕೂಗಿದ ಕಾರ್ಯಕರ್ತರು, ಕಾಂಗ್ರೆಸ್‌ ಕುರಿತು ಲೇವಡಿ ಮಾಡಿದರು. ಈ ಸಂದರ್ಭದಲ್ಲಿಮಾತನಾಡಿದ ಕ್ಷೇತ್ರದ ಅಧ್ಯಕ್ಷ ಶಿವು ಮೆಣಸಿನಕಾಯಿ, ಉಪಚುನಾವಣೆಯಲ್ಲಿ12 ಸ್ಥಾನ ಬರಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೆ ಕಾರಣ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಮಾರ್ಗದರ್ಶನದಲ್ಲಿರಾಜ್ಯದಲ್ಲಿಪಕ್ಷ ಸಾಗುತ್ತಿದ್ದು, ಜನತೆ ಅಭಿವೃದ್ಧಿಗೆ ಮತ ನೀಡಿದ್ದಾರೆ. ಅಲ್ಲದೆ, ನಿಜವಾಗಿ ಅನರ್ಹರು ಯಾರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.

ಈ ಸಂದರ್ಭದಲ್ಲಿಮಾಜಿ ಶಾಸಕ ಅಶೋಕ ಕಾಟವೆ, ಚಂದ್ರಶೇಖರ ಗೋಕಾಕ್‌, ಶಿವಾನಂದ ಮುತ್ತಣ್ಣವರ, ಡಿ.ಕೆ.ಚೌಹಾಣ, ಶಂಕ್ರಣ್ಣ ಬಿಜವಾಡ, ಅನುರಾಧಾ ಚಿಲ್ಲಾಳ, ಶೋಭಾ ನಾಕೋಡ, ಶಾಂತಕ್ಕಾ ಹೆಬ್ಬಾಳ, ರಾಜು ಕೋರ್ಯಾಣಮಠ, ಸಂಗಮ ಹಾಜಿ ಸೇರಿ ಹಲವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ