ಆ್ಯಪ್ನಗರ

ಮಹಾರಾಷ್ಟ್ರ, ಹರಿಯಾಣದಲ್ಲಿ ನಡೆಯಲಿಲ್ಲ ಬಿಜೆಪಿಯ ಬ್ಲ್ಯಾಕ್‌ಮೇಲ್‌ ಆಟ: ದಿನೇಶ್‌ ಗುಂಡೂರಾವ್‌

ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ ಫಲಿತಾಂಶ ಕಾಂಗ್ರೆಸ್‌ಅನ್ನು ಎಚ್ಚರಿಸಿದ್ದು, ಮುಂದಿನ ಹೋರಾಟಕ್ಕೆ ಅಣಿಗೊಳಿಸುವಂತೆ ಪ್ರೇರಣೆ ನೀಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡುರಾವ್‌ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

Vijaya Karnataka Web 24 Oct 2019, 3:20 pm
ಹುಬ್ಬಳ್ಳಿ: ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಸಬೇಕೆಂದು ಬ್ಲ್ಯಾಕ್ ಮೇಲ್ ರಾಜಕಾರಣ ಮಾಡಲಾಗಿತ್ತು. ಧೂಳಿಪಟ ಆಗುತ್ತೆ, ಧೂಳಿಪಟ ಆಗುತ್ತೆ ಅಂತ ಹೇಳಿದ್ರು. ಆದ್ರೆ ಹರಿಯಾಣದಲ್ಲಿ ಇನ್ನು ಯಾರು ಸರಕಾರ ರಚನೆ ಮಾಡ್ತಾರೆ ಅನ್ನೋದು ಗೊತ್ತಾಗುತ್ತಿಲ್ಲ‌. ಜನತೆಗೆ ಬಿಜೆಪಿಗೆ ಪಾಠ ಕಲಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.
Vijaya Karnataka Web Dinesh gundu rao


ಈ ಎರಡೂ ಎಲೆಕ್ಷನ್ ಕಾಂಗ್ರೆಸ್ ಅನ್ನು ಎಚ್ಚರಿಸಿದ್ದು, ಹೋರಾಟಕ್ಕೆ ಅಣಿಗೊಳಿಸುವಂತೆ ಪ್ರೇರಣೆ ನೀಡಿದೆ. ಕಾಂಗ್ರೆಸ್ಅನ್ನು ಸರ್ವನಾಶ ಮಾಡೋಕೆ ಪ್ರಯತ್ನ ಮಾಡಿದ್ರು‌.
ಆದ್ರೆ ಅದು ಸಾಧ್ಯವಿಲ್ಲ, ಅದಕ್ಕೆ ಉದಾಹರಣೆ ಇಂದಿನ ರಿಸಲ್ಟ್ ತೋರಿಸಿದೆ. ಎರಡೂ ರಾಜ್ಯಗಳಲ್ಲಿ ಪ್ರಧಾನಿ ಮೋದಿ,ಶಾ ಹೆಚ್ಚು ರ್ಯಾಲಿ ಮಾಡಿದ್ದಾರೆ. ಆದ್ರೆ ಜನ ಅವರಿಂದ ನಿರಾಶರಾಗಿದ್ದಾರೆ ಎನ್ನೋದು ಗೊತ್ತಾಗಿದೆ‌ ಎಂಬುದನ್ನು ಎಲೆಕ್ಷನ್ ಸ್ಪಷ್ಟವಾಗಿ ತಿಳಿಸಿದೆ. ಎಲ್ಲ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡರೂ ಅವರಿಗೆ ಜನ ಸರಿಯಾಗಿ ತೀರ್ಪು ನೀಡಿಲ್ಲ. ಇದೆಲ್ಲಾ ನೋಡಿದ್ರೆ ನಾವು ಇನ್ನಷ್ಟು ಗಟ್ಟಿಯಾಗಬೇಕಿದೆ, ನಾವು ಇನ್ನ ಪಕ್ಷವನ್ನು ಸದೃಡ ಮಾಡುತ್ತೆವೆ ಎಂದು ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಹರಿಯಾಣದ 'ಕುಮಾರಸ್ವಾಮಿ' ಆಗಲಿದ್ದಾರಾ ದುಷ್ಯಂತ್‌ ಸಿಂಗ್ ಚೌಟಾಲಾ

ಕೇಂದ್ರದ ವಿರುದ್ಧ ಬೃಹತ್ ಪಾದಯಾತ್ರೆ
ನೆರೆ ಪರಿಹಾರ ವಿಚಾರದಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಹೀಗಾಗಿ ರಾಜ್ಯ ಸರಕಾರದ ವಿರುದ್ದ ದೀಪಾವಳಿ‌ ಬಳಿಕ ಬೃಹತ್ ಪಾದಯಾತ್ರೆ ಹೋರಾಟ ರೂಪಿಸುತ್ತೇವೆ. ರಾಜ್ಯದಲ್ಲಿ ನೆರೆ ಪಿಡಿತರಗೆ ಇನ್ನು ಒಂದು ಪೈಸೆ ಬಂದಿಲ್ಲ. ಕೇಂದ್ರ ಸರಕಾರ ರಾಜ್ಯವನ್ನು ಸಂಪೂರ್ಣ ಕಡೆಗಣಿಸಿದೆ. 1200 ರಕೋಟಿ ಯಾವುದಕ್ಕೂ ಸಾಲದು. ಕೇಂದ್ರವನ್ನು ಎಚ್ಚರಿಸಲು ಹೋರಾಟ ಮಾಡುತ್ತೇವೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

ರಾಜ್ಯದಲ್ಲಿ ಉಪ ಚುನಾವಣೆಗೆ ಸಂಬಂಧಿಸಿ ಸುಪ್ರೀಂ ಕೋಟ್೯ ಏನು ತೀರ್ಮಾನ ಮಾಡುತ್ತದೆ ಎಂದು ನೋಡಬೇಕು. ಆದಷ್ಟು ‌ಬೇಗ ಉಪಚುನಾವಣೆ ನಡೆಸಬೇಕು. ಎದುರಿಸಲು ಕಾಂಗ್ರೆಸ್ ಉತ್ಸುಕವಾಗಿದೆ.‌ ಎಲ್ಲರೂ ಒಗ್ಗಟ್ಟಾಗಿ ಬೈ ಎಲೆಕ್ಷನ್ ಗೆಲ್ಲುತ್ತೇವೆ ಎಂದು ಗುಂಡೂರಾವ್‌ ವಿಶ್ವಾಸ ವ್ಯಕ್ತ ಪಡಿಸಿದರು.

ಮಹಾರಾಷ್ಟ್ರದಲ್ಲಿ ಮತ್ತೆ 'ಪವರ್' ಹಿಡಿಯಲು ವಿಫಲರಾದ ಶರದ್ ಪವಾರ್ ರಿಂದ ಸೋಲಿನ ವಿಮರ್ಶೆ

ಮಾಜಿ ಸಚಿವ ಡಿಕೆ ಶಿವಕುಮಾರ್‌ ಜೈಲಿಂದ ಹೊರಗೆ ಬಂದಿರುವುದರಿಂದ ನಮಗೆ ಬಲ ಬಂದಿದೆ. ಬಿಜೆಪಿಯ ಯಾವ ರಾಜಕೀಯ ಸಂಚಿಗೆ ಡಿಕೆಶಿ ಬಲಿಯಾಗಿಲ್ಲ. ಹೀಗಾಗಿ ಅವರನ್ನ ಆ ರೀತಿ ಮಾಡಿತ್ತು. ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ವಿಚಾರ, ಅದು ಹೈಕಮಾಂಡ್ಗೆ ಬಿಟ್ಟ ವಿಚಾರ. ನಾನು ಡಿಕೆಶಿ, ಸಿದ್ದರಾಮಯ್ಯ, ಖರ್ಗೆ ಎಲ್ಲ ಒಗ್ಗಟ್ಟಾಗಿ ಎದುರಿಸುತ್ತೆವೆ ಎಂದು ಗುಂಡೂರಾವ್‌ ಹೇಳಿದರು.

50-50 ಸೂತ್ರದಲ್ಲಿ 'ಮಹಾ' ಅಧಿಕಾರ: ಬಿಜೆಪಿ ಜೊತೆಗಿನ ಮೈತ್ರಿ ಅಬಾಧಿತ ಎಂದಿದೆ ಶಿವಸೇನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ