ಆ್ಯಪ್ನಗರ

ಪುಸ್ತಕ ಬಿಡುಗಡೆ ಇಂದು

ಧಾರವಾಡ: ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿನ.11 ರಂದು ಸಂಜೆ 4.30ಕ್ಕೆ ಜಾನಪದ ಸಂಶೋಧನಾ ಕೇಂದ್ರ ಮತ್ತು ಇಂಗಳಗಿಯ ಗ್ರಾಮರಂಗದ ಸಂಯುಕ್ತಾಶ್ರಯದಲ್ಲಿವೀರರಾಣಿ ಕಿತ್ತೂರ ಚನ್ನಮ್ಮ ಮೂಡಲಪಾಯ ಬಯಲಾಟ ಪುಸ್ತಕ ಬಿಡುಗಡೆ ಕಾಯಕ್ರಮ ಆಯೋಜಿಸಲಾಗಿದೆ ಎಂದು ಜಾನಪದ ಸಂಶೋಧನಾ ಕೇಂದ್ರದ ಕಾರ್ಯಾಧ್ಯಕ್ಷೆ ವಿಶ್ವೇಶ್ವರಿ ಹಿರೇಮಠ ಹೇಳಿದರು.

Vijaya Karnataka 11 Nov 2019, 5:00 am
ಧಾರವಾಡ: ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿನ.11 ರಂದು ಸಂಜೆ 4.30ಕ್ಕೆ ಜಾನಪದ ಸಂಶೋಧನಾ ಕೇಂದ್ರ ಮತ್ತು ಇಂಗಳಗಿಯ ಗ್ರಾಮರಂಗದ ಸಂಯುಕ್ತಾಶ್ರಯದಲ್ಲಿವೀರರಾಣಿ ಕಿತ್ತೂರ ಚನ್ನಮ್ಮ ಮೂಡಲಪಾಯ ಬಯಲಾಟ ಪುಸ್ತಕ ಬಿಡುಗಡೆ ಕಾಯಕ್ರಮ ಆಯೋಜಿಸಲಾಗಿದೆ ಎಂದು ಜಾನಪದ ಸಂಶೋಧನಾ ಕೇಂದ್ರದ ಕಾರ್ಯಾಧ್ಯಕ್ಷೆ ವಿಶ್ವೇಶ್ವರಿ ಹಿರೇಮಠ ಹೇಳಿದರು.
Vijaya Karnataka Web book launch today
ಪುಸ್ತಕ ಬಿಡುಗಡೆ ಇಂದು


ನಗರದಲ್ಲಿಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಇಂಗಳಗಿಯ ಗ್ರಾಮರಂಗದ ಕಾರ್ಯದರ್ಶಿ ಎಂ.ಎಸ್‌.ಮಾಳವಾಡ ಅವರು ಈ ಪುಸ್ತಕವನ್ನು ಬರೆದಿದ್ದಾರೆ. ಬಯಲಾಟಗಳನ್ನು ಇಂದಿನ ಕಾಲಕ್ಕೆ ಹೊಂದುವಂತೆ ಕಡಿಮೆ ಅವಧಿಯಲ್ಲಿಪ್ರದರ್ಶಿಸಲು ಅನುಕೂಲ ಆಗುವಂತೆ ಪುಸ್ತಕ ರಚಿಸಲಾಗಿದೆ. ಈಗಾಗಲೇ ಈ ನಾಟಕ ಹಲವಾರು ಪ್ರದರ್ಶನ ಕಂಡಿದ್ದು, ಪುಸ್ತಕ ರೂಪ ಕೊಡಲಾಗಿದೆ ಎಂದರು.

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀ ಸಾನ್ನಿಧ್ಯ, ಕರ್ನಾಟಕ ಜಾನಪದ ವಿವಿ ಕುಲಪತಿ ಪ್ರೊ.ಡಿ.ಬಿ.ನಾಯಕ ಉದ್ಘಾಟಿಸುವರು. ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಬಸವಲಿಂಗಯ್ಯ ಪುಸ್ತಕ ಬಿಡುಗಡೆ ಮಾಡುವರು.

ರಂಗ ನಿರ್ದೇಶಕ ಶಶಿಕಂತ ಯಡಳ್ಳಿ ಮಾತನಾಡುವರು. ಕವಿವಿ ಗಾಂಧಿ ಅಧ್ಯಯನÜ ವಿಭಾಗದ ಮುಖ್ಯಸ್ಥ ಡಾ.ಶಿವಾನಂದ ಶೆಟ್ಟರ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಜಾನಪದ ಕಲಾವಿ ಬಸಲಿಂಗಯ್ಯ ಹಿರೇಮಠ ಮತ್ತು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಉಪಸ್ಥಿತರಿರುವರು ಎಂದು ತಿಳಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಗ್ರಾಮರಂಗ ತಂಡದ ಕಲಾವಿದರು ವೀರೇಶ ಬಡಿಗೇರ ನೇತೃತ್ವದಲ್ಲಿವೀರರಾಣಿ ಕಿತ್ತೂರ ಚನ್ನಮ್ಮ ಮೂಡಲಪಾಯ ಬಯಲಾಟ ಪ್ರದರ್ಶಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿಡಾ.ರಾಮು ಮೂಲಗಿ, ವೀರೇಶ ಬಡಿಗೇರ, ಬಸವರಾಜ ಮ್ಯಾಗೇರಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ