ಆ್ಯಪ್ನಗರ

ವಧು ವರರ ಸಮಾವೇಶ

ಹುಬ್ಬಳ್ಳಿ : ಆನಂದ ಅಸೋಸಿಯೇಟ್ಸ್‌ ಸರ್ವಧರ್ಮಗಳ ವಧು-ವರರ ಮಾಹಿತಿ ಸೇವಾ ಕೇಂದ್ರದ ವತಿಯಿಂದ ಜೂ.30ರಂದು ಸರ್ವಧರ್ಮ ವಧು-ವರರ ಹಾಗೂ ಪಾಲಕರ ಸಮಾವೇಶ ಧಾರವಾಡದ ದುರ್ಗಾದೇವಿ ದೇವಸ್ಥಾನ ಬಳಿಯ ಸರಸ್ವತಿ ನಿಕೇತನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುರೇಶ ಕುಪ್ಪಸಗೌಡರ ಹೇಳಿದರು.

Vijaya Karnataka 28 Jun 2019, 5:00 am
ಹುಬ್ಬಳ್ಳಿ : ಆನಂದ ಅಸೋಸಿಯೇಟ್ಸ್‌ ಸರ್ವಧರ್ಮಗಳ ವಧು-ವರರ ಮಾಹಿತಿ ಸೇವಾ ಕೇಂದ್ರದ ವತಿಯಿಂದ ಜೂ.30ರಂದು ಸರ್ವಧರ್ಮ ವಧು-ವರರ ಹಾಗೂ ಪಾಲಕರ ಸಮಾವೇಶ ಧಾರವಾಡದ ದುರ್ಗಾದೇವಿ ದೇವಸ್ಥಾನ ಬಳಿಯ ಸರಸ್ವತಿ ನಿಕೇತನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುರೇಶ ಕುಪ್ಪಸಗೌಡರ ಹೇಳಿದರು.
Vijaya Karnataka Web bride groom convention
ವಧು ವರರ ಸಮಾವೇಶ


ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಜಂಗಮ, ಲಿಂಗಾಯತ, ಪಂಚಮಸಾಲಿ, ಬಣಜಿಗ, ಬಣಗಾರ, ಶಿವಶಿಂಪಿ, ನೇಕಾರ, ಗಾಣೀಗೇರ, ಮರಾಠ, ಜೈನ, ಬ್ರಾಹ್ಮಣ, ಮಾದರ, ವಾಲ್ಮೀಕಿ, ಗೊಲ್ಲರ ಸೇರಿದಂತೆ ಎಲ್ಲ ಒಳಪಂಗಡದವರು. ಉನ್ನತ ವ್ಯಾಸಂಗ ಹೊಂದಿದ ಹಾಗೂ ವೃತ್ತಿಪರ ಪದವಿಧರರು, ಸರಕಾರಿ, ಅರೆಸರಕಾರಿ, ಬ್ಯಾಂಕ್‌ ಹಾಗೂ ನೌಕರಸ್ಥರು, ನ್ಯಾಯವಾದಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಅಂತರ್ಜಾತಿ ವಿವಾಹ ಅಪೇಕ್ಷಿತರು, ಮರುವಿವಾಹ ಬಯಸುವ ವಿಚ್ಛೇದಿತ ಪತಿ-ಪತ್ನಿ, ವಿಧುರ-ವಿಧವೆಯರು ಸಹ ಪಾಲ್ಗೊಳ್ಳಬಹುದಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂ.9343402308, 9611142568ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ