ಆ್ಯಪ್ನಗರ

ತಮ್ಮನಿಗಾಗಿ ಕಣ್ಣೀರಿಟ್ಟ ಅಣ್ಣ....

ಧಾರವಾಡ: ಬಹುಮಹಡಿ ಕಟ್ಟಡದಲ್ಲಿ ನನ್ನ ತಮ್ಮ ಅಲ್ತಾಫ್‌ ಶೇಖ(26) ಅಲ್ಯುಮಿನಿಯಂ ಕೆಲಸಕ್ಕೆ ಹೋಗಿದ್ದಾನೆ. ಇಡೀ ಕಟ್ಟಡವೇ ನೆಲಸಮವಾಗಿದೆ ಎಂಬ ಸುದ್ದಿ ಕೇಳಿ ನಮ್ಮ ಕುಟುಂಬಕ್ಕೆ ಆಘಾತವಾಗಿದೆ. ಘಟನೆ ನಡೆಯುವ 2 ತಾಸು ಹಿಂದೆಯೇ ನನ್ನ ತಮ್ಮನ ಜತೆ ಮಾತನಾಡಿದ್ದೇನೆ. ಆದರೆ ಈಗ ಅವರ

Vijaya Karnataka 20 Mar 2019, 5:00 am
ಧಾರವಾಡ: ಬಹುಮಹಡಿ ಕಟ್ಟಡದಲ್ಲಿ ನನ್ನ ತಮ್ಮ ಅಲ್ತಾಫ್‌ ಶೇಖ(26) ಅಲ್ಯುಮಿನಿಯಂ ಕೆಲಸಕ್ಕೆ ಹೋಗಿದ್ದಾನೆ. ಇಡೀ ಕಟ್ಟಡವೇ ನೆಲಸಮವಾಗಿದೆ ಎಂಬ ಸುದ್ದಿ ಕೇಳಿ ನಮ್ಮ ಕುಟುಂಬಕ್ಕೆ ಆಘಾತವಾಗಿದೆ. ಘಟನೆ ನಡೆಯುವ 2 ತಾಸು ಹಿಂದೆಯೇ ನನ್ನ ತಮ್ಮನ ಜತೆ ಮಾತನಾಡಿದ್ದೇನೆ. ಆದರೆ ಈಗ ಅವರ ಸುಳಿವೇ ಸಿಗುತ್ತಿಲ್ಲ. ಒಂದು ವರ್ಷ ಹಿಂದಷ್ಟೇ ನನ್ನ ತಮ್ಮನ ಮದುವೆ ಮಾಡಿದ್ದೇವೆ. ಮನೆಯಲ್ಲಿ ಆತನ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಆಸ್ಪತ್ರೆಯಲ್ಲಿ ನನ್ನ ತಮ್ಮನ ಬಗ್ಗೆ ಯಾರೂ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಈಗ ಜಿಲ್ಲಾ ಆಸ್ಪತ್ರೆಯಿಂದ ಎಸ್‌ಡಿಎಂ, ಕಿಮ್ಸ್‌ಗೆ ಹೋಗಿ ತಮ್ಮನ ಹುಡುಕಾಟ ನಡೆಸುತ್ತೇನೆ. ಅಲ್ಲಾನ ದಯೆಯಿಂದ ನನ್ನ ತಮ್ಮ ಬದುಕಿದ್ದರೇ ಸಾಕು ಎಂದು ಅಲ್ತಾಫ ಶೇಖನ ಸಹೋದರ ಶಬ್ಬೀರ ಕಣ್ಣೀರು ಸುರಿಸುತ್ತಿದ್ದ ದೃಶ್ಯ ಜಿಲ್ಲಾಸ್ಪತ್ರೆ ಆವರಣದಲ್ಲಿ ಕಂಡು ಬಂತು.
Vijaya Karnataka Web DRW-19VIJAY-3
ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾದ ಗಾಯಾಳುಗಳ ಹೆಸರಿನ ಪಟ್ಟಿಯಲ್ಲಿ ಆಸ್ಪತ್ರೆಯ ಸಿಬ್ಬಂದಿ ಹೊರಗಿನ ಗೋಡೆಗೆ ಅಂಟಿಸುತ್ತಿರುವುದು.


ನಮ್ಮವರು ಹೆಂಗ್‌ ಅದಾರು ಹೇಳ್ರೀಪಾ

ಬಹುಮಹಡಿ ಕಟ್ಟಡ ಕುಸಿತದಲ್ಲಿ ಸಿಲುಕಿಕೊಂಡವರ ಸಂಬಂಧಿಕರು ಜಿಲ್ಲಾಸ್ಪತ್ರೆಗೆ ದೌಡಾಯಿಸಿ ಅಲ್ಲಿನ ಗಾಯಾಳುಗಳ ಪಟ್ಟಿಯಲ್ಲಿ ತಮ್ಮವರ ಹೆಸರಿದೆಯೇ ಎಂದು ಆತಂಕದಿಂದ ನೋಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಆಸ್ಪತ್ರೆಗೆ ಗಾಯಾಳುಗಳನ್ನು ಕರೆತಂದ ಆಂಬ್ಯುಲೆನ್ಸ್‌ ಬಂದಾಗಲೆಲ್ಲ ಗಾಯಾಳುಗಳ ಪಟ್ಟಿಯನ್ನು ಆಸ್ಪತ್ರೆ ಸಿಬ್ಬಂದಿ ಅಲ್ಲಿನ ಗೋಡೆಗೆ ಅಂಟಿಸುತ್ತಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ತಂದಾಗ ಸಂಬಂಧಿಕರ ಹಾಗೂ ಸ್ನೇಹಿತರ ರೋದನ ಮುಗಿಲುಮುಟ್ಟುವಂತಿತ್ತು. ಈ ವೇಳೆ ಕಾಣೆಯಾದವರ ಸಂಬಂಧಿಕರು ಪೊಲೀಸರು ಹಾಗೂ ಮಾಧ್ಯಮದವರನ್ನು ಕಂಡಕೂಡಲೇ ಸಾಹೇಬ್ರಾ ನಮ್ಮ ಮಗಾ, ಅಣ್ಣಾ, ಗಂಡ, ಚಿಕ್ಕಪ್ಪ, ಅಪ್ಪ ಅದೇ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು ಅವರ ಬಗ್ಗೆ ಏನಾದರೂ ಗೊತ್ತಿದ್ದರೆ ಹೇಳಿ? ಅವರನ್ನು ನೀವಾದರೂ ಹುಡುಕಿಕೊಡಿ ಎಂದು ಅವರ ಸಂಬಂಧಿಕರು ಅಂಗಲಾಚುತ್ತಿದ್ದರು. ಕಟ್ಟಡದಲ್ಲಿದ್ದ ಪೇಂಟಿಂಗ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ ಬಣಸೋಡಿ ಹಾಗೂ ಗಾರೆ ಕೆಲಸಕ್ಕೆ ಬಂದಿದ್ದ ಟಿ.ಆರ್‌.ನಗರದ ನವಲು ಜೋರೆ, ವಾಗು ಜೋರೆ, ಸಾಹುವಾಲು ಕೋಕರೆ ಈವರೆಗೂ ಸಿಕ್ಕಿಲ್ಲ ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು.

ಮಾನವೀಯತೆ ಮೇರೆದ ಯುವಕ

ಬಹುಮಹಡಿ ಕಟ್ಟಡ ಕುಸಿತದಲ್ಲಿ ಸಿಲುಕಿಕೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ 9 ಜನರನ್ನು ರಕ್ಷಿಸಲು ಎಸ್‌ಡಿಆರ್‌ಎಫ್‌ ತಂಡಕ್ಕೆ ಸಹಾಯ ಮಾಡುವ ಮೂಲಕ ಕುರುಬಗಟ್ಟಿ ಗ್ರಾಮದ ಯುವಕ ಅದೃಶ್ಯ ಸಲಕಿನಕೊಪ್ಪ ಮಾನವೀಯತೆ ಮೆರೆದಿದ್ದಾನೆ. ಕಟ್ಟಡದಡಿ ಸಿಲುಕಿ ರಕ್ಷ ಣೆಗಾಗಿ ಕೂಗುತ್ತಿದ್ದ ಜನರತ್ತ ಧಾವಿಸಿದ .ಅದೃಶ್ಯ ತನ್ನ ಪ್ರಾಣದ ಹಂಗು ತೊರೆದು 9 ಜನರನ್ನು ರಕ್ಷ ಣೆ ಮಾಡುವಲ್ಲಿ ಸಹಕಾರಿಯಾಗಿದ್ದಾನೆ. ಕೈಲಾದಷ್ಟು ಜನರನ್ನು ನಾನು ರಕ್ಷಿಸಬೇಕು ಎಂಬ ಉದ್ದೇಶದಿಂದ ಎಸ್‌ಡಿಆರ್‌ಎಫ್‌ ಸಿಬ್ಬಂದಿಗೆ ಸಹಾಯ ಮಾಡಿದ್ದೇನೆ ಎಂದು ಅದೃಶ್ಯ ವಿಕಕ್ಕೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ