ಆ್ಯಪ್ನಗರ

ರಕ್ಷಣಾ ಕ್ರಮ ಅಣಕು ಪ್ರದರ್ಶನ

ಹುಬ್ಬಳ್ಳಿ : ಇಲ್ಲಿನ ಉಣಕಲ್‌ ಕೆರೆಯಲ್ಲಿ ಶನಿವಾರ ಎನ್‌ಡಿಆರ್‌ಎಫ್‌, ಜಿಲ್ಲಾಡಳಿತ, ತಾಲೂಕು ಆಡಳಿತ, ಪೊಲೀಸ್‌, ಅಗ್ನಿಶಾಮಕ, ಆರೋಗ್ಯ ಹಾಗೂ ಶಿಕ್ಷ ಣ ಇಲಾಖೆ ಸಹಯೋಗದಲ್ಲಿ ಅತಿವೃಷ್ಟಿ ಸಂದರ್ಭದಲ್ಲಿ ಕೈಗೊಳ್ಳುವ ರಕ್ಷ ಣಾ ಕ್ರಮ ಹಾಗೂ ತಂತ್ರ ಕುರಿತು ಅಣಕು ಪ್ರದರ್ಶನ ಏರ್ಪಡಿಸಲಾಗಿತ್ತು.

Vijaya Karnataka 30 Jun 2019, 5:00 am
ಹುಬ್ಬಳ್ಳಿ : ಇಲ್ಲಿನ ಉಣಕಲ್‌ ಕೆರೆಯಲ್ಲಿ ಶನಿವಾರ ಎನ್‌ಡಿಆರ್‌ಎಫ್‌, ಜಿಲ್ಲಾಡಳಿತ, ತಾಲೂಕು ಆಡಳಿತ, ಪೊಲೀಸ್‌, ಅಗ್ನಿಶಾಮಕ, ಆರೋಗ್ಯ ಹಾಗೂ ಶಿಕ್ಷ ಣ ಇಲಾಖೆ ಸಹಯೋಗದಲ್ಲಿ ಅತಿವೃಷ್ಟಿ ಸಂದರ್ಭದಲ್ಲಿ ಕೈಗೊಳ್ಳುವ ರಕ್ಷ ಣಾ ಕ್ರಮ ಹಾಗೂ ತಂತ್ರ ಕುರಿತು ಅಣಕು ಪ್ರದರ್ಶನ ಏರ್ಪಡಿಸಲಾಗಿತ್ತು.
Vijaya Karnataka Web brts traffic duration extension
ರಕ್ಷಣಾ ಕ್ರಮ ಅಣಕು ಪ್ರದರ್ಶನ


ಗುಂಟೂರಿನ ಎನ್‌ಡಿಆರ್‌ಎಫ್‌ 10ನೇ ಬೆಟಾಲಯಿನ್‌ 28 ಸಿಬ್ಬಂದಿ ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ನೀರಿನಲ್ಲಿ ಮುಳುಗಿದವರ ರಕ್ಷ ಣೆ, ನೆರೆ ಸಂದರ್ಭದಲ್ಲಿ ಸಾರ್ವಜನಿಕರು ಮನೆಯಲ್ಲಿರುವ ಖಾಲಿ ಡಬ್ಬಾ,ಟಯರ್‌ ಹಾಗೂ ಥರ್ಮಾಫೋಲ್‌ಗಳಂತಹ ವಸ್ತುಗಳಿಂದ ತಯಾರಿಸಿದ ರಕ್ಷ ಣಾ ಸಾಮಾಗ್ರಿ ಕುರಿತು ಶಾಲಾ ಮಕ್ಕಳಿಗೆ ತಿಳಿವಳಿಕೆ ನೀಡಲಾಯಿತು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎನ್‌ಡಿಆರ್‌ಎಫ್‌ ಇನ್ಸ್‌ಪೆಕ್ಟರ್‌ ಸುಭಾಷ್‌ ಮಹಾಲ,ರಾಜ್ಯದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ಅವಘಡಗಳ ಸಂದರ್ಭದಲ್ಲಿ ಕೈಗೊಳ್ಳುವ ರಕ್ಷ ಣಾ ಕಾರ್ಯಚರಣೆ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಅಣಕು ಪ್ರದರ್ಶನ ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಹುಬ್ಬಳ್ಳಿ ಉಣಕಲ್‌ ಕೆರೆಯಲ್ಲಿ ನೆರೆ ಹಾಗೂ ಪ್ರವಾಹ ಸಂದರ್ಭದಲ್ಲಿ ಕೈಗೊಳ್ಳುವ ರಕ್ಷ ಣಾ ಕಾರ್ಯ ಹಾಗೂ ತಂತ್ರ ಬಗ್ಗೆ ಅಣಕು ಪ್ರದರ್ಶನ ನಡೆಸಲಾಗುತ್ತಿದೆ. ಇದರಿಂದ ಅವಘಡಗಳ ಸಂದರ್ಭದಲ್ಲಿ ಸರಕಾರದ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ. ಸಾರ್ವಜನಿಕರಿಗೂ ಮಾಹಿತಿ ದೊರಕುತ್ತದೆ. ಎನ್‌ಡಿಆರ್‌ಎಫ್‌ ಎಲ್ಲಾ ತರಹದ ನೈಸರ್ಗಿಕ ಹಾಗೂ ಮಾನವ ನಿರ್ಮಿತ ಅವಘಡ ಎದುರಿಸಲು ಸನ್ನದ್ಧವಾಗಿರುತ್ತದೆ ಎಂದರು.

ಸೈಕಲೋನ್‌, ಭೂಕಂಪ, ನೆರೆ, ಕಟ್ಟಡ ದುರಂತ, ಕೆಮಿಕಲ್‌, ಬಯಾಲಾಜಿಕಲ್‌, ನ್ಯೂಕ್ಲಿಯರ್‌ ಹಾಗೂ ರೆಡಿಯೇಷನ್‌ ನಂತಹ ಅವಘಡಗಳು ಸಂಭವಿಸಿದಾಗ ರಕ್ಷ ಣೆ ಹಾಗೂ ಪರಿಹಾರ ಕ್ರಮ ಕೈಗೊಳ್ಳಲು ಅಗತ್ಯ ತರಬೇತಿ ಎನ್‌ಡಿಆರ್‌ಎಫ್‌ಗೆ ನೀಡಲಾಗಿದೆ. ಬೆಂಗಳೂರಿನಲ್ಲಿ ಆರ್‌ಆರ್‌ಸಿ ಪಡೆಯಿದ್ದು, ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಅಗತ್ಯಾನುಸಾರ ಟೈ್ರನ್‌, ಎಲಿಕ್ಯಾಪ್ಟರ್‌, ವಿಮಾನಗಳ ಮೂಲಕವು ಆಗಮಿಸಿ ರಕ್ಷ ಣಾ ಕಾರ್ಯ ನೆರವೇರಿಸಲಾಗುತ್ತದೆ. ಕಳೆದ ವರ್ಷ ಮಳೆಗಾಳದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ಹಲವೆಡೆ ಅವಘಡಗಳು ಸಂಭವಿಸಿದ್ದವು. ಇಂತಹ ಸ್ಥಳಗಳಲ್ಲಿ ಎನ್‌ಡಿಆರ್‌ಎಫ್‌ ಪಡೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ ಸಂಗಪ್ಪ ಬಾಡಗಿ, ಅಪರ ತಹಸೀಲ್ದಾರ ಪ್ರಕಾಶ ನಾಶಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ