ಆ್ಯಪ್ನಗರ

ಬಿಎಸ್‌ವೈ ಒನ್‌ ಮ್ಯಾನ್‌ ಶೋ ನಿಲ್ಲಿಸಲಿ: ಗುಂಡೂರಾವ್‌

ಹುಬ್ಬಳ್ಳಿ : ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿ 15 ದಿನ ಕಳೆದರೂ ಬಿ.ಎಸ್‌. ಯಡಿಯೂರಪ್ಪ ರಾಜ್ಯದಲ್ಲಿ ತಾವೊಬ್ಬರೇ ನೆರೆ ಪೀಡಿತರ ಕಷ್ಟಕ್ಕೆ ಸ್ಪಂದಿಸುವಂತೆ ಓಡಾಡುತ್ತಿದ್ದಾರೆ. ಇವರೊಬ್ಬರಿಂದ ಎಲ್ಲ ಕಡೆ ಓಡಾಡಲು ಸಾಧ್ಯವೇ? ತಕ್ಷಣವೇ ಈ ಒನ್‌ ಮ್ಯಾನ್‌ ಶೋ ನಿಲ್ಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ತಿಳಿಸಿದರು.

Vijaya Karnataka 12 Aug 2019, 5:00 am
ಹುಬ್ಬಳ್ಳಿ : ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿ 15 ದಿನ ಕಳೆದರೂ ಬಿ.ಎಸ್‌. ಯಡಿಯೂರಪ್ಪ ರಾಜ್ಯದಲ್ಲಿ ತಾವೊಬ್ಬರೇ ನೆರೆ ಪೀಡಿತರ ಕಷ್ಟಕ್ಕೆ ಸ್ಪಂದಿಸುವಂತೆ ಓಡಾಡುತ್ತಿದ್ದಾರೆ. ಇವರೊಬ್ಬರಿಂದ ಎಲ್ಲ ಕಡೆ ಓಡಾಡಲು ಸಾಧ್ಯವೇ? ತಕ್ಷಣವೇ ಈ ಒನ್‌ ಮ್ಯಾನ್‌ ಶೋ ನಿಲ್ಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ತಿಳಿಸಿದರು.
Vijaya Karnataka Web bsy one man show to cease gundurao
ಬಿಎಸ್‌ವೈ ಒನ್‌ ಮ್ಯಾನ್‌ ಶೋ ನಿಲ್ಲಿಸಲಿ: ಗುಂಡೂರಾವ್‌


ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಯಡಿಯೂರಪ್ಪ ಅವರ ಒನ್‌ ಮ್ಯಾನ್‌ ಶೋನಿಂದ ರಾಜ್ಯದ ಆಡಳಿತಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ. ಸಚಿವ ಸಂಪುಟ ರಚನೆ ಆಗಿರದ ಕಾರಣ ವಿಧಾನಸೌಧ ಭಣಗುಡುತ್ತಿದೆ. ಅಲ್ಲದೆ, ನೆರೆ ಪರಿಹಾರ ಸೇರಿದಂತೆ ಬೇರಾವ ಕೆಲಸಗಳೂ ಆಗುತ್ತಿಲ್ಲ'' ಎಂದು ಕಿಡಿಕಾರಿದರು.

''ಸಚಿವ ಸಂಪುಟ ರಚನೆಗೆ ಬಿಜೆಪಿ ಇಷ್ಟೊಂದು ವಿಳಂಬ ಏಕೆ ಮಾಡುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಅತೃಪ್ತ ಶಾಸಕರಿಗಾಗಿ ಏನಾದರೂ ಕಾಯುತ್ತಿದ್ದಾರೋ? ಒಂದೂ ಗೊತ್ತಾಗುತ್ತಿಲ್ಲ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೂ ಯಡಿಯೂರಪ್ಪ ಅವರ ಬೆಂಬಲಿಗರು ವರ್ಗಾವಣೆ ಸೇರಿದಂತೆ ಹತ್ತಾರು ಬಗೆಯ ಕಾರ್ಯಗಳಲ್ಲಿ ತೊಡಗಿದ್ದಾರೆ'' ಎಂದು ದೂರಿದರು.

''ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅತಿವೃಷ್ಟಿಯಾಗಿದ್ದರೂ ಕೇಂದ್ರದಿಂದ ಯಾವೊಬ್ಬ ಸಚಿವರೂ ರಾಜ್ಯಕ್ಕೆ ಬಂದು ವೀಕ್ಷಣೆ ಮಾಡಿಲ್ಲ. ಯುಪಿಎ ನೇತೃತ್ವದ ಸರಕಾರ ಇದ್ದಾಗ ಪ್ರಧಾನಿ ಮನಮೋಹನ್‌ ಸಿಂಗ್‌ ಸಾಕಷ್ಟು ಪರಿಹಾರ ಬಿಡುಗಡೆ ಮಾಡಿದ್ದರು. ಅದರಂತೆ ಈಗಾಗಲೂ ಕೆಪಿಸಿಸಿಯಿಂದ ಎರಡು ತಂಡಗಳನ್ನು ರಚಿಸಿ ನೆರೆ ಸಂತ್ರಸ್ತರಿಗೆ ನೆರವು ನೀಡಲಾಗುತ್ತಿದೆ'' ಎಂದು ತಿಳಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಪ್ರವಾಹ ಪೀಡಿತ ಬಾದಾಮಿಗೆ ಭೇಟಿ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ''ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಸಮಸ್ಯೆಯಾಗಿತ್ತು. ಶನಿವಾರ ಕಾರ್ಯಕಾರಿಣಿ ಸಭೆ ಇರುವುದರಿಂದ ದಿಲ್ಲಿಗೆ ತೆರಳಿದ್ದಾರೆ. ನಾಳೆ ಆಗಮಿಸಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ'' ಎಂದು ಸಮರ್ಥಿಸಿಕೊಂಡರು.

ಈ ಸಂದರ್ಭದಲ್ಲಿ ಹು-ಧಾ. ಮಹಾನಗರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ, ಅನೀಲಕುಮಾರ ಪಾಟೀಲ್‌, ಶಾಸಕ ಪ್ರಸಾದ ಅಬ್ಬಯ್ಯ, ಸದಾನಂದ ಡಂಗನವರ, ರಜತ್‌ ಉಳ್ಳಾಗಡ್ಡಿಮಠ, ಶರಣಪ್ಪ ಕೊಟಗಿ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ