ಆ್ಯಪ್ನಗರ

ಕಟ್ಟಡ ದುರಂತ: ಆರೋಪಿಗಳಿಗೆ ಜಾಮೀನು ನೀಡದಂತೆ ವಾದ

ಕುಮಾರೇಶ್ವರ ನಗರದ ಬಹುಮಹಡಿ ಕಟ್ಟಡ ಕುಸಿತ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ನೀಡದಂತೆ ಸರಕಾರಿ ಅಭಿಯೋಜಕರು ಶುಕ್ರವಾರ ನಗರದ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಎದುರು ವಾದ ...

Vijaya Karnataka 6 Jul 2019, 5:16 pm
ಧಾರವಾಡ: ಕುಮಾರೇಶ್ವರ ನಗರದ ಬಹುಮಹಡಿ ಕಟ್ಟಡ ಕುಸಿತ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ನೀಡದಂತೆ ಸರಕಾರಿ ಅಭಿಯೋಜಕರು ಶುಕ್ರವಾರ ನಗರದ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಎದುರು ವಾದ ಮಂಡಿಸಿದರು.
Vijaya Karnataka Web building tragedy arguments for not giving bail to accused
ಕಟ್ಟಡ ದುರಂತ: ಆರೋಪಿಗಳಿಗೆ ಜಾಮೀನು ನೀಡದಂತೆ ವಾದ


ಜಾಮೀನು ಕೋರಿ ಕಟ್ಟಡದ ಪಾಲುದಾರ ಆರೋಪಿಗಳಾದ ಗಂಗಪ್ಪ ಶಿಂತ್ರೆ, ರವಿ ಸಬರದ, ಬಸವರಾಜ ನಿಗದಿ, ರಾಜು ಘಾಟಿನ್‌, ಕಟ್ಟಡದ ಎಂಜಿನಿಯರ್‌ ವಿವೇಕ ಪವಾರ ನ್ಯಾಯಾಲಯದ ಮೊರೆ ಹೋಗಿದ್ದರು.

ಅರ್ಜಿದಾರರು ತಮ್ಮ ಮೇಲಿನ ಆರೋಪಗಳನ್ನು ಒಬ್ಬರ ಮೇಲೊಬ್ಬರು ಹಾಕಿಕೊಳ್ಳುತ್ತಿದ್ದಾರೆ. ಗಂಭೀರ ಸ್ವರೂಪದ ಘಟನೆ ಇದಾಗಿದೆ. 54 ಜನರು ಗಾಯಗೊಂಡರೆ, 19 ಜನರು ಮೃತಪಟ್ಟಿದ್ದಾರೆ. ಹೀಗಾಗಿ ಸರಕಾರ ಕೂಡಾ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆ ಆರೋಪಿಗಳಿಗೆ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಸರಕಾರದ ಪರವಾಗಿ ಅಭಿಯೋಜಕಿ ತಮ್ಮಿನಾಳ ವಾದ ಮಂಡಿಸಿದರು.

ಇದೇ ವೇಳೆ ಎಲ್ಲ ಆರೋಪಿಗಳ ಹೇಳಿಕೆಗಳನ್ನು ನ್ಯಾಯಧೀಶರ ಮುಂದೆ ಓದಿದರು. ವಾದ ಆಲಿಸಿದ ನ್ಯಾಯಾಧೀಶರಾದ ಶ್ಯಾಮ್‌ಪ್ರಸಾದ ಅವರು ವಿಚಾರಣೆಯನ್ನು ಜು. 6ಕ್ಕೆ ಮುಂದೂಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ