ಆ್ಯಪ್ನಗರ

ದೇವೇಗೌಡರ ಪ್ರತಿಮೆ ದಹನ ಸರಿಯಲ್ಲ: ಈಶ್ವರಪ್ಪ

ಯಡಿಯೂರಪ್ಪ‌ - ಡಿಕೆಶಿ‌ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಇನ್ನು, ಯಡಿಯೂರಪ್ಪ ಕೇರಳ ಪ್ರವಾಸ ವಿಚಾರವಾಗಿಯೂ ಅವರು ವೈಯಕ್ತಿಕವಾಗಿ ಪ್ರವಾಸಕ್ಕೆ ಹೋಗಿದ್ದಾರೆ ಎಂದು ಈಶ್ವರಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Vijaya Karnataka Web 30 Nov 2018, 2:46 pm
ಧಾರವಾಡ: ನಗರದ ಮುರುಘಾಮಠಕ್ಕೆ ಶುಕ್ರವಾರ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿದ್ದು, ಈ ವೇಳೆ '' ವಿಜಯಪುರದಲ್ಲಿ ಮನಗೂಳಿ ಮತ್ತು ದೇವೇಗೌಡ ಪ್ರತಿಮೆ ದಹಿಸಿದ್ದು ಖಂಡನೀಯ. ಅದು ಕೆಟ್ಟ ಸಂಸ್ಕೃತಿ. ಅಂಥಹದು ಆಗಬಾರದು'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Vijaya Karnataka Web ks eshwarappa


ಇನ್ನು, ''ಯಾರನ್ನು ಯಾವ ಕ್ಷೇತ್ರಕ್ಕೆ ಉಸ್ತುವಾರಿ ಕೊಟ್ಟರೆ ಲಾಭ ಆಗುತ್ತೆ ಅನ್ನೋ ವಿಚಾರ ನಡೆದಿದೆ. ಅದರ ಬಗ್ಗೆ ವಿಚಾರ ಮಾಡಿ ಅಂತಿಮ ನಿರ್ಣಯ ಕೈಗೊಂಡಿದ್ದೇವೆ'' ಎಂದರು. ಅಲ್ಲದೆ, ''ಸದ್ಯ ರಾಜ್ಯದಲ್ಲಿ ಭೀಕರ ಬರಗಾಲ ಬಂದಿದ್ದು, 106 ತಾಲೂಕುಗಳಲ್ಲಿ‌ ಬರಗಾಲ‌ ಇದೆ. ರಾಜ್ಯ ಸರಕಾರ ಈ ವಿಷಯದಲ್ಲಿ ಏನೂ ಮಾಡುತ್ತಿಲ್ಲ'' ಎಂದು ದೂರಿದರು.

ಅಲ್ಲದೆ, ''ನೀರಿನ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಸಭೆ ನಡೆಸ್ತಾ ಇಲ್ಲ. ಇದಕ್ಕಾಗಿ ಐದು ತಂಡಗಳಲ್ಲಿ ಬಿಜೆಪಿ ಮುಖಂಡರು ರಾಜ್ಯ ಪ್ರವಾಸ ಮಾಡಿ ಬರ ಪರಿಸ್ಥಿತಿ ಸರ್ಕಾರದ ಗಮನಕ್ಕೆ ತರುತ್ತೇವೆ. ಡಿಸೆಂಬರ್ 3, 4 ಮತ್ತು 5 ರಂದು ಈ ರಾಜ್ಯ ಪ್ರವಾಸ ನಡೆಯಲಿದೆ'' ಎಂದು ತಿಳಿಸಿದರು.

ಜತೆಗೆ, ''ಯಡಿಯೂರಪ್ಪ‌ - ಡಿಕೆಶಿ‌ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ''. ಅಲ್ಲದೆ, ಬಿಎಸ್‌ವೈ ಕೇರಳ ಪ್ರವಾಸ ವಿಚಾರವಾಗಿಯೂ ''ಅವರು ವೈಯಕ್ತಿಕವಾಗಿ ಪ್ರವಾಸಕ್ಕೆ ಹೋಗಿದ್ದಾರೆ'' ಎಂದು ಪ್ರಶ್ನೆಯೊಂದಕ್ಕೆ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಉತ್ತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ