ಆ್ಯಪ್ನಗರ

ಇಂದು ಕ್ಯಾನ್ಸರ್‌ ಉಚಿತ ತಪಾಸಣೆ ಶಿಬಿರ

ಹುಬ್ಬಳ್ಳಿ: ಲಯನ್ಸ್‌ ಕ್ಲಬ್‌ ಹುಬ್ಬಳ್ಳಿ ಪರಿವಾರ ಹಾಗೂ ಎನ್‌ಎಂಆರ್‌ ಕ್ಯಾನ್ಸರ್‌ ಸೆಂಟರ್‌ ಆಶ್ರಯದಲ್ಲಿಡಿ.21ರಂದು ಬೆಳಗ್ಗೆ 10ಕ್ಕೆ ಕ್ಯಾನ್ಸರ್‌ ಅರಿವು ಮತ್ತು ಉಚಿತ ತಪಾಸಣೆ ಶಿಬಿರ ಇಲ್ಲಿನ ಕ್ಲಬ್‌ ರಸ್ತೆಯಲ್ಲಿನ ಎನ್‌ಎಂಆರ್‌ ಕ್ಯಾನ್ಸರ್‌ ಸಂಸ್ಥೆಯಲ್ಲಿಆಯೋಜಿಸಲಾಗಿದೆ ಎಂದು ಲಯನ್ಸ್‌ ಕ್ಲಬ್‌ ಹುಬ್ಬಳ್ಳಿ ಪರಿವಾರದ ಅಧ್ಯಕ್ಷರಾದ ಶಶಿ ಸಾಲಿ ಹೇಳಿದರು.

Vijaya Karnataka 21 Dec 2019, 5:00 am
ಹುಬ್ಬಳ್ಳಿ: ಲಯನ್ಸ್‌ ಕ್ಲಬ್‌ ಹುಬ್ಬಳ್ಳಿ ಪರಿವಾರ ಹಾಗೂ ಎನ್‌ಎಂಆರ್‌ ಕ್ಯಾನ್ಸರ್‌ ಸೆಂಟರ್‌ ಆಶ್ರಯದಲ್ಲಿಡಿ.21ರಂದು ಬೆಳಗ್ಗೆ 10ಕ್ಕೆ ಕ್ಯಾನ್ಸರ್‌ ಅರಿವು ಮತ್ತು ಉಚಿತ ತಪಾಸಣೆ ಶಿಬಿರ ಇಲ್ಲಿನ ಕ್ಲಬ್‌ ರಸ್ತೆಯಲ್ಲಿನ ಎನ್‌ಎಂಆರ್‌ ಕ್ಯಾನ್ಸರ್‌ ಸಂಸ್ಥೆಯಲ್ಲಿಆಯೋಜಿಸಲಾಗಿದೆ ಎಂದು ಲಯನ್ಸ್‌ ಕ್ಲಬ್‌ ಹುಬ್ಬಳ್ಳಿ ಪರಿವಾರದ ಅಧ್ಯಕ್ಷರಾದ ಶಶಿ ಸಾಲಿ ಹೇಳಿದರು.
Vijaya Karnataka Web cancer free screening camp today
ಇಂದು ಕ್ಯಾನ್ಸರ್‌ ಉಚಿತ ತಪಾಸಣೆ ಶಿಬಿರ


ಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಅಂತಾರಾಷ್ಟ್ರೀಯ ಲಯನ್ಸ್‌ ಸಂಸ್ಥೆಯ ಅಂಗ ಸಂಸ್ಥೆಯಾದ ಲಯನ್ಸ್‌ ಕ್ಲಬ್‌ ಹುಬ್ಬಳ್ಳಿ ಪರಿವಾರ ಅನೇಕ ಸಾಮಾಜಿಕ ಕಾರ್ಯ ಮಾಡುವ ಮೂಲಕ ಜನಮನ್ನಣೆ ಗಳಿಸಿದೆ. ಸಂಸ್ಥೆಯು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಇತ್ತೀಚಿನ ದಿನಗಳಲ್ಲಿಕ್ಯಾನ್ಸರ್‌ ಕುರಿತು ಜನರಿಗೆ ಭಯ, ಆತಂಕ ಉಂಟಾಗುತ್ತಿದೆ. ತಂಬಾಕು ಮತ್ತು ಇತರ ದುಶ್ಚಟಗಳಿಂದ ಉತ್ತರ ಕರ್ನಾಟಕದಲ್ಲಿಬಹಳಷ್ಟು ಜನರು ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿರುವುದು ವಿಷಾದಕರ ಸಂಗತಿ. ಆದ್ದರಿಂದ ಪ್ರಾರಂಭ ಹಂತದಲ್ಲೇ ರೋಗ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲು ಶಿಬಿರದ ಸದುಪಯೋಗ ಅವಶ್ಯವಾಗಿದೆ ಎಂದು ತಿಳಿಸಿದರು.

ವಿಪ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಶಿಬಿರ ಉದ್ಘಾಟಿಸುವರು. ಶಿಬಿರದಲ್ಲಿಡಾ.ರವಿ ಕಲಘಟಗಿ, ಡಾ.ಗುಣಾರಿ, ಡಾ.ಜೈಕಿಶನ್‌ ಮುಂತಾದ ವೈದ್ಯರು, ತಜ್ಞರು ಭಾಗವಹಿಸುವರು ಎಂದರು.

ಶಿಬಿರದಲ್ಲಿಹೆಡ್‌ ಆ್ಯಂಡ್‌ ನೆಕ್‌ ಕ್ಯಾನ್ಸರ್‌, ಹೊಟ್ಟೆ ಮತ್ತು ಕರುಳಿನ ಕ್ಯಾನ್ಸರ್‌, ಲಂಗ್‌ ಕ್ಯಾನ್ಸರ್‌, ಸ್ತನ ಕ್ಯಾನ್ಸರ್‌ ಸೇರಿದಂತೆ ಇತರ ಕ್ಯಾನ್ಸರ್‌ ರೋಗದ ಆರೋಗ್ಯ ತಪಾಸಣೆ ನಡೆಯಲಿದ್ದು, ಆಸಕ್ತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಮಹೇಂದ್ರ ಸಿಂಘಿ, ಗೌತಮ್‌ ಗೊಲೇಚಾ, ಸೋಮನಾಥ, ರೆಹನಾ ಕೊತವಾಲ್‌ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ