ಆ್ಯಪ್ನಗರ

ಪಿಎಸ್‌ಐ ಪರೀಕ್ಷೆಯಲ್ಲಿ ಯಶಸ್ಸು ಪಡೆದ ಅಭ್ಯರ್ಥಿಗಳ ಸನ್ಮಾನ

ಧಾರವಾಡ : ಗುರಿ ತಲುಪುವ ದಾರಿಯಲ್ಲಿ ಸವಾಲುಗಳು ಬರುವುದು ಸಹಜ. ಕಠಿಣ ಪರಿಶ್ರಮದಿಂದ ಅವುಗಳನ್ನು ಮೆಟ್ಟಿ ಮೇಲೆದ್ದಾಗ ಯಶಸ್ಸು ಹೊಂದಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ.ದೀಪಾ ಹೇಳಿದರು.

Vijaya Karnataka 1 Sep 2019, 5:00 am
ಧಾರವಾಡ : ಗುರಿ ತಲುಪುವ ದಾರಿಯಲ್ಲಿ ಸವಾಲುಗಳು ಬರುವುದು ಸಹಜ. ಕಠಿಣ ಪರಿಶ್ರಮದಿಂದ ಅವುಗಳನ್ನು ಮೆಟ್ಟಿ ಮೇಲೆದ್ದಾಗ ಯಶಸ್ಸು ಹೊಂದಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ.ದೀಪಾ ಹೇಳಿದರು.
Vijaya Karnataka Web candidates who have passed the psi exam
ಪಿಎಸ್‌ಐ ಪರೀಕ್ಷೆಯಲ್ಲಿ ಯಶಸ್ಸು ಪಡೆದ ಅಭ್ಯರ್ಥಿಗಳ ಸನ್ಮಾನ


ನಗರದ ಕ್ಲಾಸಿಕ್‌ ಕೆಎಎಸ್‌ ಮತ್ತು ಐಎಎಸ್‌ ಸ್ಟಡಿ ಸರ್ಕಲ್‌ ಸಹಯೋಗದಲ್ಲಿ ಸಪ್ತಾಪೂರದ ಸತ್ಯಸಾಯಿ ಸಮುದಾಯ ಭವನದಲ್ಲಿ ಶನಿವಾರ ನಡೆದ ಪಿಎಸ್‌ಐ ಪರೀಕ್ಷೆಯಲ್ಲಿ ಯಶಸ್ಸು ಪಡೆದ ಅಭ್ಯರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಹು- ಧಾ ಪೋಲಿಸ್‌ ಆಯುಕ್ತ ಆರ್‌. ದಿಲೀಪ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿಯೇ ದೇಶಕ್ಕಾಗಿ ಸೇವೆ ಸಲ್ಲಿಸುವ ಕನಸುಗಳನ್ನು ಕಟ್ಟಿಕೊಂಡು ಆ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕು. ಸತತ ಓದಿನಿಂದ ಪಿಎಸ್‌ಐ ಆಗಿ ಆಯ್ಕೆಯಾಗಿರುವ ಎಲ್ಲರೂ ಅಭಿನಂದನಾರ್ಹರು ಎಂದು ತಿಳಿಸಿದರು.

ಅಧ್ಯಕ್ಷ ತೆ ವಹಿಸಿದ್ದ ಕ್ಲಾಸಿಕ್‌ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ ್ಮಣ ಎಸ್‌. ಉಪ್ಪಾರ ಮಾತನಾಡಿ, ಯಶಸ್ಸು ಸದಾ ನಯ ವಿನಯದಿಂದ ಕೂಡಿ ತಂದೆ ತಾಯಿ ಗುರುಹಿರಿಯರಿಗೆ ಗೌರವ ತರುವಂತಾಗಿರಲಿ. ಆಗ ಸಾಧಕರ ಶ್ರಮ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಚೆನ್ನಮ್ಮನ ಕಿತ್ತೂರ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಉತ್ತರ ಕರ್ನಾಟಕದವರು ಸರಕಾರಿ ನೌಕರಿ ಪಡೆಯಲು ಕ್ಲಾಸಿಕ್‌ ಸಂಸ್ಥೆ ಹೆಬ್ಬಾಗಿಲಾಗಿದೆ. ಪರೀಕ್ಷಾರ್ಥಿಗಳು ಸದುಪಯೋಗ ಪಡಿಸಿಕೊಂಡು ನಾಡಸೇವೆಗೆ ಮುಂದಾಗಬೇಕು ಎಂದು ಹೇಳಿದರು.

ಇದೇ ವೇಳೆ ಪಿಎಸ್‌ಐ ಪರೀಕ್ಷೆಯಲ್ಲಿ ಯಶಸ್ಸು ಪಡೆದಿರುವ 60ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಯಿತು.

ಜಿಲ್ಲಾಪಂಚಾಯಿತಿ ಸಿಇಓ ಡಾ. ಸತೀಶ ಬಿ. ಸಿ, ಪೊಲೀಸ್‌ ಅಧಿಕಾರಿಗಳಾದ ಮುರುಗೇಶ ಚೆಣ್ಣನ್ನವರ, ಮಹಾಂತೇಶ ಬಸಾಪುರ, ರೇಖಾ ಎಲ್‌. ಉಪ್ಪಾರ, ಪ್ರಾಧ್ಯಾಪಕ ಸುರೇಶ ಕುಲಕರ್ಣಿ, ಡಾ. ರಾಜೇಶ ಚಿಟಗುಪ್ಪಿ, ಆನಂದ ಕುಲಕರ್ಣಿ ಸೇರಿದಂತೆ ವ್ಯವಸ್ಥಾಪಕಿ ಸುಜಾತಾ ಪಿ., ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಐ. ಜಿ. ಚೌಗಲಾ ಸ್ವಾಗತಿಸಿ ನಿರೂಪಿಸಿದರು. ದೀಪಕ ಜೋಡಂಗಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ