ಆ್ಯಪ್ನಗರ

ಕಾರ್ನಾಡರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಧಾರವಾಡ : ನಗರದ ಸಾಹಿತ್ಯಿಕ ಸಂಘಟನೆ ಅನ್ವೇಷಣ ಕೂಟದ ವತಿಯಿಂದ ಸಾಧನಕೇರಿಯ ಚೈತ್ರದ ಸಭಾಂಗಣದಲ್ಲಿ ಇತ್ತೀಚೆಗೆ ನಿಧನರಾದ ಶ್ರೇಷ್ಠ ನಾಟಕಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಗಿರೀಶ ಕಾರ್ನಾಡರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Vijaya Karnataka 14 Jun 2019, 5:00 am
ಧಾರವಾಡ : ನಗರದ ಸಾಹಿತ್ಯಿಕ ಸಂಘಟನೆ ಅನ್ವೇಷಣ ಕೂಟದ ವತಿಯಿಂದ ಸಾಧನಕೇರಿಯ ಚೈತ್ರದ ಸಭಾಂಗಣದಲ್ಲಿ ಇತ್ತೀಚೆಗೆ ನಿಧನರಾದ ಶ್ರೇಷ್ಠ ನಾಟಕಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಗಿರೀಶ ಕಾರ್ನಾಡರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Vijaya Karnataka Web carnatic is a soulful devotion
ಕಾರ್ನಾಡರಿಗೆ ಭಾವಪೂರ್ಣ ಶ್ರದ್ಧಾಂಜಲಿ


ಪ್ರೊ.ದುಷ್ಯಂತ ನಾಡಗೌಡರು ಕಾರ್ನಾಡರ ನಾಟಕಗಳ ವೈವಿಧ್ಯತೆ, ಬೌದ್ಧಿಕತೆಗಳ ಹಾಗೂ ಹರ್ಷ ಡಂಬಳ ಅವರು ಗಿರೀಶರ ನಾಟಕ ರಚನೆಯ ಹಿಂದಿನ ಇತಿಹಾಸದ ಆಳ ಅಧ್ಯಯನ ಮತ್ತು ಸಂಶೋಧನಾತ್ಮಕ ಬರವಣಿಗೆಗಳ ಕುರಿತು ಮಾತನಾಡಿದರು.

ಡಾ.ಅರವಿಂದ ಯಾಳಗಿ, ಡಾ.ದೀಪಕ ಆಲೂರ, ಶ್ರೀನಿವಾಸ ವಾಡಪ್ಪಿ, ಜಯತೀರ್ಥ ಜಹಗೀರದಾರ, ಸುಧೀಂದ್ರ ಹಂಚಿನಮನಿ, ಶ್ರೀನಿವಾಸ ಕುಲಕರ್ಣಿ, ನರಸಿಂಹ ಪರಾಂಜಪೆ, ಕೆ.ಎನ್‌.ಹಬ್ಬು ಮುಂತಾದವರು ಗಿರೀಶ ಕಾರ್ನಾಡರ ಅಗಾಧ ಪ್ರತಿಭೆ ಹಾಗೂ ಸರಳತೆ, ಸಜ್ಜನಿಕೆ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಪ್ರೊ.ಸಿ.ವಿ.ವೇಣುಗೋಪಾಲ ಅಧ್ಯP್ಷÜತೆ ವಹಿಸಿದ್ದರು. ಅನ್ವೇಷಣಕೂಟದ ಅಧ್ಯP್ಷÜ ನರಸಿಂಹ ಪರಾಂಜಪೆ ಶ್ರದ್ಧಾಂಜಲಿ ಗೊತ್ತಾವಳಿ ಮಂಡಿಸಿದರು. ಎರಡು ನಿಮಿಷಗಳ ಮೌನ ಆಚರಿಸಲಾಯಿತು.

ಎಸ್‌.ಗುರನಾಥ, ರಾಮಚಂದ್ರ ಧೋಂಗಡೆ, ಬದರಿ ವಿಶಾಲ ಪರ್ವತಿಕರ, ಎಚ್‌.ಎಂ.ಪಾಟೀಲ, ಎಸ್‌.ಎಂ.ದೇಶಪಾಂಡೆ, ಅನಿಲ ಕಾಖಂಡಿಕಿ, ವಿನುತಾ ಹಂಚಿನಮನಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ