ಆ್ಯಪ್ನಗರ

ತನಿಖೆ ಆರಂಭಿಸಿದ ಸಿಬಿಐ ಅಧಿಕಾರಿಗಳು

ಧಾರವಾಡ: ಜಿಪಂ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣ ಕುರಿತಂತೆ ಎಫ್‌ಐಆರ್‌ ದಾಖಲಿಸಿಕೊಂಡಿರುವ ಸಿಬಿಐ ಈಗ ತನಿಖೆ ಆರಂಭಿಸಿದ್ದು, ಶನಿವಾರ ದೂರುದಾರರನ್ನು ವಿಚಾರಣೆಗೆ ಒಳಪಡಿಸಿದೆ.

Vijaya Karnataka 29 Sep 2019, 5:11 pm
ಧಾರವಾಡ: ಜಿಪಂ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣ ಕುರಿತಂತೆ ಎಫ್‌ಐಆರ್‌ ದಾಖಲಿಸಿಕೊಂಡಿರುವ ಸಿಬಿಐ ಈಗ ತನಿಖೆ ಆರಂಭಿಸಿದ್ದು, ಶನಿವಾರ ದೂರುದಾರರನ್ನು ವಿಚಾರಣೆಗೆ ಒಳಪಡಿಸಿದೆ.
Vijaya Karnataka Web 28SM-1_21
ಧಾರವಾಡ ತಾಲೂಕಿನ ಗೋವನಕೊಪ್ಪದಲ್ಲಿನ ಗುರುನಾಥಗೌಡ ಗೌಡರ ಮನೆ ಎದುರು ನಿಂತಿರುವ ಸಿಬಿಐ ಅಧಿಕಾರಿಗಳ ವಾಹನಗಳು.


ತನಿಖೆ ಜವಾಬ್ದಾರಿ ಹೊತ್ತಿರುವ ಸಿಬಿಐ ಅಧಿಕಾರಿಗಳು ಶುಕ್ರವಾರ ಹು-ಧಾ ಪೊಲೀಸ್‌ ಕಮಿಷ್ನರ್‌ ಕಚೇರಿಯಲ್ಲಿಪ್ರಕರಣ ಕುರಿತಂತೆ ಕೆಲ ದಾಖಲೆ ಪಡೆದಿದ್ದಾರೆ.

ಅದೇ ರೀತಿ ಶನಿವಾರ ಬೆಳಗ್ಗೆ ಇಬ್ಬರು ಅಧಿಕಾರಿಗಳು ಗೋವನಕೊಪ್ಪ ಗ್ರಾಮಕ್ಕೆ ತೆರಳಿ ದೂರುದಾರರಾದ ಗುರುನಾಥಗೌಡ ಹಾಗೂ ತುಂಗಮ್ಮ ಅವರನ್ನು ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದರು. ಈ ವೇಳೆ ನೀವು ಉನ್ನತ ತನಿಖೆಯನ್ನು ಏಕೆ ಬಯಸಿದ್ದು ಎಂಬ ಪ್ರಶ್ನೆ ಮೂಲಕವೇ ಅವರಿಂದ ಮಾಹಿತಿ ಸಂಗ್ರಹಿಸಿದರು.

ತನಿಖಾ ಅಧಿಕಾರಿಗಳು ಅಲ್ಲಿಂದ ಯೋಗೀಶಗೌಡ ಅವರ ಪತ್ನಿ ಮಲ್ಲಮ್ಮ ವಾಸವಿರುವ ಗೋವನಕೊಪ್ಪದಲ್ಲಿನ ಮನೆಗೂ ತೆರಳಿದರು. ಆದರೆ, ಈ ವೇಳೆ ಮಲ್ಲಮ್ಮ ಮನೆಯಲ್ಲಿಇರಲಿಲ್ಲಎನ್ನಲಾಗುತ್ತಿದೆ. ಅದೇ ರೀತಿ ಅಧಿಕಾರಿಗಳು ಹತ್ಯೆ ನಡೆದ ಸ್ಥಳವನ್ನೂ ಪರಿಶೀಲಿಸಿದ್ದಾರೆ ಎಂಬ ಮಾಹಿತಿ ಇದೆ.

ಕೊಲೆ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡ ಇದೆ ಎಂದು ಮೃತರ ತಾಯಿ, ಸಹೋದರ ಆರೋಪಿಸಿದ್ದರಿಂದ ಕೇಸ್‌ಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಗಳು, ಕೆಲ ರಾಜಕಾರಣಿಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ. ಈಗಾಗಲೇ ಕೊಲೆ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಆರು ಜನ ಆರೋಪಿಗಳೂ ವಿಚಾರಣೆಗೆ ಹಾಜರಾಗುವ ಪ್ರಸಂಗವೂ ಬರಬಹುದು.

ಪ್ರಕರಣದ ಹಿನ್ನೆಲೆ:
ಯೋಗೀಶಗೌಡ ಅವರನ್ನು ಜೂನ್‌ 15, 2016ರಲ್ಲಿಸಪ್ತಾಪುರದ ಜಿಮ್‌ ಬಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜ ಮುತ್ತಗಿ, ವಿನಾಯಕ ಕಟಗಿ, ವಿಕ್ರಂ ಬಳ್ಳಾರಿ, ಕೀರ್ತಿಕುಮಾರ ಕುರಹಟ್ಟಿ, ಸಂದೀಪ ಸವದತ್ತಿ ಅಲಿಯಾಸ ಸ್ಯಾಂಡಿ ಸೇರಿದಂತೆ 6 ಜನರನ್ನು ಬಂಧಿಸಲಾಗಿತ್ತು. ಆಸ್ತಿ ವಿವಾದದ ಹಿನ್ನೆಲೆಯಲ್ಲಿಕೊಲೆ ನಡೆದಿದೆ ಎಂದು ಪೊಲೀಸರು ದೋಷಾರೋಪ ಪಟ್ಟಿ ಕೂಡ ಸಲ್ಲಿಸಿದ್ದರು. ಆದರೆ, ಇದು ರಾಜಕೀಯ ಹಿನ್ನೆಲೆಯಲ್ಲಿನಡೆದ ಕೊಲೆ ಎಂದು ಕುಟುಂಬದವರು ಆರೋಪಿಸಿದ್ದರು. ಬಿಜೆಪಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಈ ಹತ್ಯೆ ಪ್ರಕರಣದಲ್ಲಿಮಾಜಿ ಸಚಿವ ವಿನಯ ಕುಲಕರ್ಣಿ ವಿರುದ್ಧ ಸಾಕ್ಷಿನಾಶ ಆರೋಪದಡಿ ಪ್ರಕರಣ ಕೂಡ ದಾಖಲಾಗಿದೆ. ಹೀಗೆ ರಾಜಕೀಯವಾಗಿ ತಿರುವು ಪಡೆಯುತ್ತಲೇ ಬಂದಿದ್ದ ಈ ಕೊಲೆ ಪ್ರಕರಣವನ್ನು ರಾಜ್ಯ ಸರಕಾರ ತಿಂಗಳ ಹಿಂದಷ್ಟೇ ಸಿಬಿಐಗೆ ವಹಿಸಿತ್ತು. ಅದರಂತೆ ಈಗ ವಿಚಾರಣೆ ಆರಂಭಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ