ಆ್ಯಪ್ನಗರ

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾಕ್ಕೆ ಶತಮಾನೋತ್ಸವ ಸಂಭ್ರಮ

ಧಾರವಾಡ: ಉತ್ತರ ಮತ್ತು ದಕ್ಷಿಣ ಭಾರತದ ಜನರ ಬಾಂಧವ್ಯ ಬೆಸೆಯಲು 1918ರಲ್ಲಿ ಮಹಾತ್ಮಾ ಗಾಂಧೀಜಿ ಅಂದಿನ ಮದ್ರಾಸ್‌ನಲ್ಲಿ ಆರಂಭಿಸಿದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ರಾಷ್ಟ್ರದ ಜನರ ಸಂಪರ್ಕ ಕೊಂಡಿಯಾಗಿ ಬಹುಮುಖ್ಯ ಪಾತ್ರವಹಿಸಿದೆ. ಇದೀಗ ಸಂಸ್ಥೆ ಶತಮಾನೋತ್ಸವ ಸಂಭ್ರಮದಲ್ಲಿದೆ.

Vijaya Karnataka 21 Feb 2019, 5:00 am
ಧಾರವಾಡ: ಉತ್ತರ ಮತ್ತು ದಕ್ಷಿಣ ಭಾರತದ ಜನರ ಬಾಂಧವ್ಯ ಬೆಸೆಯಲು 1918ರಲ್ಲಿ ಮಹಾತ್ಮಾ ಗಾಂಧೀಜಿ ಅಂದಿನ ಮದ್ರಾಸ್‌ನಲ್ಲಿ ಆರಂಭಿಸಿದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ರಾಷ್ಟ್ರದ ಜನರ ಸಂಪರ್ಕ ಕೊಂಡಿಯಾಗಿ ಬಹುಮುಖ್ಯ ಪಾತ್ರವಹಿಸಿದೆ. ಇದೀಗ ಸಂಸ್ಥೆ ಶತಮಾನೋತ್ಸವ ಸಂಭ್ರಮದಲ್ಲಿದೆ.
Vijaya Karnataka Web DRW-20RANGA1C
ಚೆನ್ನೈನಲ್ಲಿ ಶತಮಾನೋತ್ಸವ ಅಂಗವಾಗಿ ನಿರ್ಮಿಸಲಾದ ದ.ಭಾ. ಹಿಂದಿ ಪ್ರಚಾರ ಸಭಾದ ದ್ವಾರ.


ಈ ಶತಮಾನೋತ್ಸವ ಉದ್ಘಾಟನಾ ಸಮಾರಂಭ ಹೊಸದಿಲ್ಲಿಯಲ್ಲಿ ಸೆ. 22, 2018ರಂದು ನಡೆದಾಗ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಸಂಸ್ಥೆಯ ಕೊಡುಗೆ ಶ್ಲಾಘಿಸಿದ್ದರು. ಅಲ್ಲದೇ, ಅ.20, 2018 ರಂದು ಮಾರಿಷಸ್‌ನಲ್ಲಿ ನಡೆದ ಜಾಗತಿಕ ಹಿಂದಿ ಸಮ್ಮೇಳನದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಂದ 'ಹಿಂದಿ ಸಮ್ಮಾನ' ಪ್ರಶಸ್ತಿ ಪುರಸ್ಕೃತಗೊಂಡಿದ್ದು ಈ ಸಂಸ್ಥೆಯ ಹೆಮ್ಮೆ.

ಸಂಸ್ಥೆಯ ಸಾಧನೆಗಳು : ಸಭಾದ ಸಂಸ್ಥಾಪಕ ಅಧ್ಯಕ್ಷ ರಾಗಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಗೌರವಾರ್ಥ ಚನ್ನೈ ಕ್ಯಾಂಪಸ್‌ನಲ್ಲಿರುವ ಗಾಂಧಿ ನಿವಾಸವನ್ನು ಕೇಂದ್ರ ಸರಕಾರ ಪಾರಂಪರಿಕ ಕಟ್ಟಡವೆಂದು ಘೋಷಿಸಿದೆ. ಭಾರತದಲ್ಲಿರುವ ವಿವಿಧ ನಾಲ್ಕು ಲೈಬ್ರರಿಗಳಲ್ಲಿ ಚೆನ್ನೈನ ಲೈಬ್ರರಿಯನ್ನು ಪಾರಂಪರಿಕ ಲೈಬ್ರರಿ ಎಂದು ಸರಕಾರ ಗುರುತಿಸಿರುವುದು ಸಭಾದ ಹೆಮ್ಮೆಯ ಸಂಗತಿ. ಸಂಸ್ಥೆಯ ಆಧುನಿಕ ಮತ್ತು ಸುಸಜ್ಜಿತ ಪ್ರಿಂಟಿಂಗ್‌ ಪ್ರೆಸ್‌ ಬಿ.ಇಡಿ, ಎಂ.ಇಡಿ, ಎಂಎ ಹಾಗೂ ದೂರ ಶಿಕ್ಷ ಣದಂತದ ವಿವಿಧ ಕೋರ್ಸ್‌ಗಳ ಪುಸ್ತಕ ಮತ್ತು ಅಭ್ಯಾಸ ಸಾಮಗ್ರಿ ಮುದ್ರಿಸಿ ವಿವಿಧ ಸ್ಥಳಗಳಿಗೆ ಪೂರೈಸುತ್ತಿದೆ.

ಶೈಕ್ಷ ಣಿಕ ಗುಣಮಟ್ಟ ಹೆಚ್ಚಿಸಲು ನಿರಂತರ ಪ್ರಯತ್ನ ಮಾಡುತ್ತಿರುವ ಸಭಾ, ಇತ್ತೀಚೆಗೆ ಸ್ನಾತಕೋತ್ತರ ಹಾಗೂ ಸಂಶೋಧನಾ ವಿಭಾಗಕ್ಕೆ ನ್ಯಾಕ್‌ ಮಾನ್ಯತೆಗೆ ಮನವಿ ಸಲ್ಲಿಸಿದ್ದು, ಸಮಿತಿಯ ತಂಡವು 2019ರ ಫೆ. 15 ರಿಂದ 17 ರ ವರೆಗೆ ಸಂಸ್ಥೆಗೆ ಭೇಟಿ ನೀಡಿದೆ.

ಯೋಜನೆಗಳು : ಸಭಾದ ಕರ್ನಾಟಕ ಶಾಖೆಯ ಯೋಜನೆಗಳಾದ ವೃದ್ಧಾಶ್ರಮ, ದಿಲ್ಲಿ ಪಬ್ಲಿಕ್‌ ಸ್ಕೂಲ್‌, ವಸತಿ ಶಾಲೆ ಸ್ಥಾಪಿಸುವ ಯೋಜನೆಗಳು 2020ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹಿಂದಿ ಭಾಷಾ ಅಭಿವೃದ್ಧಿಗೆ ಸಭಾ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಭಾರತ ಸಂಸತ್ತು ಈ ಸಂಸ್ಥೆಯನ್ನು ರಾಷ್ಟ್ರೀಯ ಮಹತ್ವದ ಸಂಸ್ಥೆಯೆಂದು 1964ರಲ್ಲಿ ವಿಶೇಷ ಸ್ಥಾನಮಾನ ನೀಡಿ, ಅದರನ್ವಯ ಈ ಸಂಸ್ಥೆಗೆ ವಿಶ್ವವಿದ್ಯಾಲಯದ ಸ್ಥಾನಮಾನ ನೀಡಿದೆ. ದಕ್ಷಿಣ ಭಾರತದಲ್ಲಿ ಸಭಾವು 20 ಸಾವಿರ ಪ್ರಚಾರಕರನ್ನು ಹೊಂದಿದ್ದು, ಪ್ರತಿವರ್ಷ ಸುಮಾರು 8ರಿಂದ 10ಲಕ್ಷ ವಿದ್ಯಾರ್ಥಿಗಳು ಸಭಾದಿಂದ ನಡೆಸುವ ವಿವಿಧ ಪರೀಕ್ಷೆಗಳಲ್ಲಿ ಭಾಗವಹಿಸಿ ಶೈಕ್ಷ ಣಿಕ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಒಟ್ಟಾರೆ ದೊಡ್ಡ ಪ್ರಮಾಣದಲ್ಲಿ ಸಂಸ್ಥೆಯನ್ನು ಬೆಳೆಸಿ ಅಭಿವೃದ್ಧಿಪಡಿಸಿದ್ದು ಪ್ರಶಂಸನೀಯ.

ಚೆನ್ನೈನಲ್ಲಿಂದು ಕಾರ್ಯಕ್ರಮ

ಚೆನ್ನೈನಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ವತಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮಹಾತ್ಮಾ ಗಾಂಧಿ ಮೂರ್ತಿ ಹಾಗೂ 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮಹಾದ್ವಾರ ಮತ್ತು ಶತಮಾನೋತ್ಸವ ಕಮಾನು ಉದ್ಘಾಟಿಸಲು ಫೆ.21ರಂದು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಆಗಮಿಸಲಿದ್ದು, ಇದೇ ಸಂದರ್ಭದಲ್ಲಿ 3.5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಮ್ನಾಲಾಲ ಬಜಾಜ್‌ ಆಡಿಟೋರಿಯಮ್‌ಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಧಾರವಾಡದಲ್ಲಿ 1936ರಲ್ಲಿ ಆರಂಭವಾದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಸದ್ಯ ಹಲವಾರು ಶಿಕ್ಷ ಣ ಸಂಸ್ಥೆಗಳನ್ನು ಹೊಂದಿದೆ. ಕೆ.ಜಿ ಯಿಂದ ಪಿ.ಜಿ ವರೆಗೆ ಕೇಂದ್ರಗಳನ್ನು ಹಾಗೂ ಸ್ವಂತ ಕಟ್ಟಡಗಳನ್ನು ಹೊಂದಿದೆ. ಸಭಾದಲ್ಲಿ ರಾಷ್ಟ್ರಭಾಷೆಯ ಸರ್ಟಿಪಿಕೇಟ್‌ ಕೋರ್ಸ್‌ಗಳು ಲಭ್ಯವಿವೆ. 10 ಬಿ.ಇಡಿ (ಶಿಕ್ಷಾ ಸ್ನಾತಕ)ಕಾಲೇಜು, ಎಂ.ಎ.ಎಂಪಿಲ್‌ ಅಧ್ಯಯನ ವಿಭಾಗ ಒಳಗೊಂಡಿದೆ. ಧಾರವಾಡದಲ್ಲಿ ರಾಜೀವ ಗಾಂಧಿ ವಿದ್ಯಾಲಯ, ಡಾ.ಬಿ.ಡಿ. ಜತ್ತಿ ಹೋಮಿಯೋಪತಿ ಮೆಡಿಕಲ್‌ ಕಾಲೇಜ್‌, ಆಸ್ಪತ್ರೆ ಮತ್ತು ಸ್ನಾತಕೋತ್ತರ ಕೇಂದ್ರ, ಸಿ.ಬಿ ಗುತ್ತಲ ಆಯುರ್ವೇದಿಕ್‌ ವೈದ್ಯಕೀಯ ಕಾಲೇಜ್‌ ಮತ್ತು ಆಸ್ಪತ್ರೆ, ಶ್ರೀಗಂಗಾಧರ ಪಾಲಿಟೆಕ್ನಿಕ್‌ ಕಾಲೇಜ್‌ ಆರಂಭಿಸಲಾಗಿದೆ.

1988ರ ಜೂನ್‌ 18ರಂದು ಅಂದಿನ ಪ್ರಧಾನಿ ರಾಜೀವ ಗಾಂಧಿ ಧಾರವಾಡ ಹಿಂದಿ ಪ್ರಚಾರ ಸಭಾದ ಮುಖ್ಯ ಕಟ್ಟಡವನ್ನು ಉದ್ಘಾಟಿಸಿದ್ದರು. ಅವರ ಹೆಸರಲ್ಲಿಯೇ ಸಿಬಿಎಸ್‌ಸಿ ಇಂಗ್ಲಿಷ ಮಾಧ್ಯಮ ಶಾಲೆ ಆರಂಭಿಸಲಾಗಿದೆ. ರಾಜ್ಯದಲ್ಲಿನ ಈ ಎಲ್ಲ ಶಾಖೆಗಳನ್ನು ಬೆಳೆಸುವಲ್ಲಿ ಕಾರ್ಯಧ್ಯಕ್ಷ ರಾದ ಆರ್‌.ಎಫ್‌.ನೀರಲಕಟ್ಟಿ ಅವರ ಶ್ರಮವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ