ಆ್ಯಪ್ನಗರ

ರಾಚೋಟೇಶ್ವರ ಶ್ರೀಗಳ ಶತಮಾನೋತ್ಸವ ನಾಳೆಯಿಂದ

ಕುಂದಗೋಳ: ತಾಲೂಕಿನ ಕಮಡೊಳ್ಳಿ ಗ್ರಾಮದ ರಾಚೋಟೇಶ್ವರ ಶ್ರೀಗಳ ಶತಮಾನೋತ್ಸವ ಹಾಗೂ ನಿಯೋಜಿತ ಉತ್ತರಾಧಿಕಾರಿ ಗುರು ಲೋಚನೇಶ್ವರ ಪುರ ಪ್ರವೇಶ ಸಮಾರಂಭ ಜು.17ರಿಂದ 18ರವರೆಗೆ ನಡೆಯಲಿದೆ.

Vijaya Karnataka 16 Jul 2019, 5:00 am
ಕುಂದಗೋಳ: ತಾಲೂಕಿನ ಕಮಡೊಳ್ಳಿ ಗ್ರಾಮದ ರಾಚೋಟೇಶ್ವರ ಶ್ರೀಗಳ ಶತಮಾನೋತ್ಸವ ಹಾಗೂ ನಿಯೋಜಿತ ಉತ್ತರಾಧಿಕಾರಿ ಗುರು ಲೋಚನೇಶ್ವರ ಪುರ ಪ್ರವೇಶ ಸಮಾರಂಭ ಜು.17ರಿಂದ 18ರವರೆಗೆ ನಡೆಯಲಿದೆ.
Vijaya Karnataka Web centenary tomorrow
ರಾಚೋಟೇಶ್ವರ ಶ್ರೀಗಳ ಶತಮಾನೋತ್ಸವ ನಾಳೆಯಿಂದ


ಜು.17ರಂದು ಸಂಜೆ 4ಕ್ಕೆ ರಾಚೋಟೇಶ್ವರ ದೇವರನ್ನು ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮಕ್ಕೆ ಉತ್ಸವ ಮೂಲಕ ಬರಮಾಡಿಕೊಳ್ಳಲಾಗುವುದು. ಚಿತ್ರದುರ್ಗ ಮುರುಘಾ ಪರಂಪರೆ ಶಾಖಾಮಠ ಗುರು ಲೋಚನೇಶ್ವರ ವಿರಕ್ತಮಠದಲ್ಲಿ ಜು.18ರಂದು ಬೆಳಗ್ಗೆ 10ಕ್ಕೆ ಶತಮಾನೋತ್ಸವ ಸಮಾರಂಭ ನಡೆಯಲಿದೆ. ಚಿತ್ರದುರ್ಗದ ಮುರುಘರಾಜೇಂದ್ರ ಮಹಾಸಂಸ್ಥಾನ ಬಸವಕೇಂದ್ರ ಡಾ.ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯ ವಹಿಸಲಿದ್ದಾರೆ. ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀ, ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರ ಶ್ರೀ, ಜಮಖಂಡಿ ಮುತ್ತಿನಕಂತಿಹಿರೇಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯರು, ಕುಂದಗೋಳ ಕಲ್ಯಾಣಪುರಮಠದ ಬಸವಣ್ಣಜ್ಜನವರು, ಕಡಪಟ್ಟಿ ಜಗದೀಶ್ವರಮಠದ ಮಾತೋಶ್ರೀ ಪ್ರಮೀಳಾ ತಾಯಿ ನೇತೃತ್ವ ವಹಿಸಲಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಶಾಸಕಿ ಕುಸುಮಾವತಿ ಶಿವಳ್ಳಿ, ಶಾಸಕ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕರಾದ ಎಸ್‌.ಐ.ಚಿಕ್ಕನಗೌಡ್ರ, ಎಂ.ಎಸ್‌.ಅಕ್ಕಿ, ಬಿಜೆಪಿ ಮುಖಂಡ ಎಂ.ಆರ್‌.ಪಾಟೀಲ, ಜಿಪಂ ಸದಸ್ಯ ಉಮೇಶ ಹೆಬಸೂರ, ತಾಪಂ ಸದಸ್ಯ ಮಂಜುನಾಥ ಹೊನ್ನಪ್ಪನವರ, ಚಂದ್ರಶೇಖರ ಜುಟ್ಟಲ, ವೀಣಾ ಆನಿ ಇತರರು ಭಾಗವಹಿಸಲಿದ್ದಾರೆ ಎಂದು ಗುರು ಲೋಚನೇಶ್ವರ ವಿರಕ್ತಮಠದ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ