ಹುಬ್ಬಳ್ಳಿ: ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೊಳಗಾಗಿ ಹತ್ಯೆಗೀಡಾದ ಖ್ಯಾತ ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದೆ. ಮರಣೋತ್ತರ ಪರೀಕ್ಷೆಯಲ್ಲಿ ಕಂಡುಬಂದಂತೆ, ಚಂದ್ರಶೇಖರ ಗುರೂಜಿ ಕುತ್ತಿಗೆಯಲ್ಲಿ 12 ಇಂಚು ಉದ್ದ, 3-4 ಇಂಚು ಆಳದ ಚಾಕುವಿನಿಂದ ಕೊಯ್ದ ಗಾಯ ಪತ್ತೆಯಾಗಿದ್ದು, ಇದರಲ್ಲಿ ಎರಡು ಬಾರಿ ಕುಯ್ಯಲಾಗಿದೆ. ದೇಹದ ಒಟ್ಟಾರೆ 42 ಕಡೆಗಳಲ್ಲಿ ಚಾಕು ಇರಿದ ಗಾಯ ಉಂಟಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿದ್ದು, ಕೆಲವೆಡೆ ಇರಿದ ಜಾಗದಲ್ಲೇ ಎರಡು ಮೂರು ಬಾರಿ ಮತ್ತೆ ಇರಿಯಲಾಗಿದೆ. ಕಿಮ್ಸ್ ವಿಧಿ ವಿಜ್ಞಾನ ವಿಭಾಗದ ಡಾ.ಸುನೀಲ್ ಬಿರಾದಾರ ಹಾಗೂ ಸಿಬ್ಬಂದಿ ಶವದ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿದ್ದು, ಕೆಲವೇ ಕ್ಷಣದಲ್ಲಿ ಅಂತ್ಯ ಸಂಸ್ಕಾರದ ಸ್ಥಳದತ್ತ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುವುದು ಎಂದು ಮೂಲಗಳು ತಿಳಿಸಿವೆ.
ಇನ್ನು ಬರ್ಬರವಾಗಿ ಹತ್ಯೆಗೀಡಾದ ಚಂದ್ರಶೇಖರ ಗುರೂಜಿ ಅವರ ಮೃತದೇಹವನ್ನು ಬುಧವಾರ ಕಿಮ್ಸ್ ಆಸ್ಪತ್ರೆಯಲ್ಲಿ ಔಪಚಾರಿಕವಾಗಿ ಪರೀಕ್ಷೆಗೊಳಪಡಿಸಿ ಶವ ಪರೀಕ್ಷೆ ಪೂರ್ಣಗೊಂಡು ಬಹುಸಮಯ ಕಳೆದರೂ ಶವವನ್ನು ಇನ್ನೂ ಕೊಂಡೊಯ್ಯಲು ವಿಳಂಬವಾದ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಕೊನೆಗೆ ಮಧ್ಯಾಹ್ನ 2:15ರ ಸುಮಾರಿಗೆ ಚಂದ್ರಶೇಖರ ಗುರೂಜಿ ಅವರ ಪಾರ್ಥಿವ ಶರೀರ ಕಿಮ್ಸ್ ಶವಗಾರದಿಂದ ಅಂತ್ಯಕ್ರಿಯೆ ಸ್ಥಳದತ್ತ ಸಾಗಿತು.
ಅತ್ತ ಸುಳ್ಳ ರಸ್ತೆಯಲ್ಲಿರುವ ಗುರೂಜಿಯವರ ಜಮೀನಿನಲ್ಲಿ ಶವಸಂಸ್ಕಾರಕ್ಕೆ ಎಲ್ಲ ಸಿದ್ದತೆಗಳು ಪೂರ್ಣಗೊಂಡಿದ್ದು, ಶವ ಪರೀಕ್ಷೆ ಸ್ಥಳದಲ್ಲಿ ಗುರೂಜಿ ಅವರ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನೂರಾರು ಸಿಬ್ಬಂದಿ ಹಾಜರಿದ್ದರು. ಸಿಬ್ಬಂದಿ ಶೋಕತಪ್ತರಾಗಿ ದುಃಖಿಸುತ್ತಿದ್ದರು. ಗುರೂಜಿಯವರನ್ನು ನೆನಪಿಸಿಕೊಂಡು ಹಲವರು ಅಳುತ್ತಿದ್ದರು. ಮುಂದೇನು ಎಂದು ಸಿಬ್ಬಂದಿ ತಮ್ಮನ್ನು ತಾವೇ ಪ್ರಶ್ನಿಸಿಕೊಂಡು ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದರು. ಸೇರಿದ್ದ ಸಿಬ್ಬಂದಿಯ ಕಣ್ಣಾಲಿಗಳು ತೇವಗೊಂಡಿದ್ದವು.
ಗುರೂಜಿಯವರ ಹಾಗೂ ಅವರ ಪತ್ನಿಯ ಸಂಬಂಧಿಕರು ಶೋಕ ತಪ್ತರಾಗಿದ್ದರು. ಶವ ಪರೀಕ್ಷೆಗೂ ಮುನ್ನ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿ ತೆರಳಿದರು. ವಿದ್ಯಾನಗರ ಠಾಣೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದು, ಪೋಸ್ಟ್ ಮಾರ್ಟಮ್ ಪ್ರಕ್ರಿಯೆಯ ಮೇಲುಸ್ತುವಾರಿ ವಹಿಸಿದ್ದರು.
ಇನ್ನು ಬರ್ಬರವಾಗಿ ಹತ್ಯೆಗೀಡಾದ ಚಂದ್ರಶೇಖರ ಗುರೂಜಿ ಅವರ ಮೃತದೇಹವನ್ನು ಬುಧವಾರ ಕಿಮ್ಸ್ ಆಸ್ಪತ್ರೆಯಲ್ಲಿ ಔಪಚಾರಿಕವಾಗಿ ಪರೀಕ್ಷೆಗೊಳಪಡಿಸಿ ಶವ ಪರೀಕ್ಷೆ ಪೂರ್ಣಗೊಂಡು ಬಹುಸಮಯ ಕಳೆದರೂ ಶವವನ್ನು ಇನ್ನೂ ಕೊಂಡೊಯ್ಯಲು ವಿಳಂಬವಾದ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಕೊನೆಗೆ ಮಧ್ಯಾಹ್ನ 2:15ರ ಸುಮಾರಿಗೆ ಚಂದ್ರಶೇಖರ ಗುರೂಜಿ ಅವರ ಪಾರ್ಥಿವ ಶರೀರ ಕಿಮ್ಸ್ ಶವಗಾರದಿಂದ ಅಂತ್ಯಕ್ರಿಯೆ ಸ್ಥಳದತ್ತ ಸಾಗಿತು.
ಅತ್ತ ಸುಳ್ಳ ರಸ್ತೆಯಲ್ಲಿರುವ ಗುರೂಜಿಯವರ ಜಮೀನಿನಲ್ಲಿ ಶವಸಂಸ್ಕಾರಕ್ಕೆ ಎಲ್ಲ ಸಿದ್ದತೆಗಳು ಪೂರ್ಣಗೊಂಡಿದ್ದು, ಶವ ಪರೀಕ್ಷೆ ಸ್ಥಳದಲ್ಲಿ ಗುರೂಜಿ ಅವರ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನೂರಾರು ಸಿಬ್ಬಂದಿ ಹಾಜರಿದ್ದರು. ಸಿಬ್ಬಂದಿ ಶೋಕತಪ್ತರಾಗಿ ದುಃಖಿಸುತ್ತಿದ್ದರು. ಗುರೂಜಿಯವರನ್ನು ನೆನಪಿಸಿಕೊಂಡು ಹಲವರು ಅಳುತ್ತಿದ್ದರು. ಮುಂದೇನು ಎಂದು ಸಿಬ್ಬಂದಿ ತಮ್ಮನ್ನು ತಾವೇ ಪ್ರಶ್ನಿಸಿಕೊಂಡು ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದರು. ಸೇರಿದ್ದ ಸಿಬ್ಬಂದಿಯ ಕಣ್ಣಾಲಿಗಳು ತೇವಗೊಂಡಿದ್ದವು.
ಗುರೂಜಿಯವರ ಹಾಗೂ ಅವರ ಪತ್ನಿಯ ಸಂಬಂಧಿಕರು ಶೋಕ ತಪ್ತರಾಗಿದ್ದರು. ಶವ ಪರೀಕ್ಷೆಗೂ ಮುನ್ನ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿ ತೆರಳಿದರು. ವಿದ್ಯಾನಗರ ಠಾಣೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದು, ಪೋಸ್ಟ್ ಮಾರ್ಟಮ್ ಪ್ರಕ್ರಿಯೆಯ ಮೇಲುಸ್ತುವಾರಿ ವಹಿಸಿದ್ದರು.