ಈಗಿನ ಬಿಜೆಪಿ ಸರ್ಕಾರ ಅಷ್ಟೇ ಅಲ್ಲ ಎಲ್ಲ ಸರ್ಕಾರಗಳು ಕಮೀಷನ್ ಪಡೆದಿವೆ: ಚೆನ್ನಬಸವಾನಂದ ಸ್ವಾಮೀಜಿ
Vijaya Karnataka Web 21 Apr 2022, 11:13 am
Embed
Press CTRL+C to copyX
<iframe src="//tvid.in/1x5fj3899g/lang?autoplay=false" style="height: 100%; width: 100%; max-height: 100%; max-width: 100%; visibility: visible;" border="0" frameBorder="0" seamless="" scrolling="no" allowfullscreen="true" mozallowfullscreen="true" allowtransparency="true"></iframe>
ಹುಬ್ಬಳ್ಳಿ: ಮಠಗಳಿಗೆ ನೀಡುವ ಸರ್ಕಾರಿ ಅನುದಾನದಲ್ಲಿ ಕಮಿಷನ್ ಪಡೆದುಕೊಳ್ಳುತ್ತಾರೆ. ಯಾವುದೇ ಅನುದಾನ ನೀಡಬೇಕಾದ್ರೆ ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ಕೇಳಿದ್ದೆನೆ ಎಂದು ಚೆನ್ನಬಸವಾನಂದ ಸ್ವಾಮೀಜಿ ಹೇಳಿದ್ದಾರೆ. ಈ ಮೂಲಕ ದಿಂಗಾಲೇಶ್ವರ ಶ್ರೀಗಳು ಮಾಡಿದ ಪರ್ಸೆಂಟೇಜ್ ಆರೋಪವನ್ನು ಸಮರ್ಥಿಸಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಮ್ಮ ಮಠಕ್ಕೆ ಯಾವುದೇ ಅನುದಾನವನ್ನು ತೆಗೆದುಕೊಂಡಿಲ್ಲ. ಸರ್ಕಾರ ಕಮಿಷನ್ ಕೇಳುವುದು ನಮ್ಮ ಗಮನಕ್ಕೂ ಬಂದಿದೆ. ಅನುದಾನ ಕೊಡುವಾಗ ಸರ್ಕಾರ, ಅಧಿಕಾರಿಗಳು ಕಮಿಷನ್ ತೆಗೆದುಕೊಂಡೆ ಕೊಡುತ್ತಾರೆ. ಇದು ಹೊಸದೇನಲ್ಲ. ಎಲ್ಲ ಸರ್ಕಾರಗಳ ಎಲ್ಲಾ ಪಕ್ಷಗಳು ಕಮಿಷನ್ ಕೇಳುತ್ತವೆ ಎಂದರು.
ಬಿಜೆಪಿಯಲ್ಲಿನ ಸ್ವಾಮೀಜಿಗಳು ಮಾತ್ರ ಚುನಾವಣೆಗೆ ಸ್ಪರ್ಧೆ ಮಾಡಬೇಕಾ..? ಕಾವಿ ಬಟ್ಟೆಯನ್ನ ಬಿಜೆಪಿಯವರು ಗುತ್ತಿಗೆ ತೆಗೆದುಕೊಂಡಿದ್ದಾರೆನೂ? ಸ್ವಾಮೀಜಿಗಳು ಯಾವ ಪಕ್ಷದಿಂದಾರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು. ಒಂದೇ ಪಕ್ಷದಿಂದ ಸ್ಪರ್ಧೆ ಮಾಡಬೇಕು ಎಂಬುದು ತಪ್ಪು. ಯೋಗಿ ಆದಿತ್ಯನಾಥ ಸಿಎಂ ಆಗಿದ್ದಾರೆ ಅಂದ್ರೆ ನಮ್ಮ ರಾಜ್ಯದಲ್ಲಿಯೂ ಸ್ವಾಮೀಜಿಗಳು ಮುಖ್ಯಮಂತ್ರಿಗಳಾದ್ರೆ ಸ್ವಾಗತ. ಈ ದೇಶವನ್ನ ತ್ಯಾಗಮಹಿಗಳು ಆಳಬೇಕು, ಅಂದಾಗ ದೇಶ ಉದ್ಧಾರ ಆಗುತ್ತದೆ ಎಂದು ಹೇಳಿದರು.