ಆ್ಯಪ್ನಗರ

ಹುಬ್ಬಳ್ಳಿಯಲ್ಲಿ ರಾಸಾಯನಿಕ ಸಿಂಪರಣೆ

ಹುಬ್ಬಳ್ಳಿ: ಕೋವಿಡ್‌-19 ಸೋಂಕಿತ ವ್ಯಕ್ತಿ ಪತ್ತೆಯಾದ ಬೆನ್ನಲ್ಲೆ ವಾಣಿಜ್ಯ ನಗರಿ ಹುಬ್ಬಳ್ಳಿಯ ವಿವಿಧ ಪ್ರದೇಶಗಳಲ್ಲಿಮಹಾನಗರ ಪಾಲಿಕೆ ಸಿಬ್ಬಂದಿಯಿಂದ ರಾಸಾಯನಿಕ ಸಿಂಪರಣೆ ಮಾಡಿಸಲಾಗುತ್ತಿದೆ.

Vijaya Karnataka 24 Mar 2020, 5:00 am
ಹುಬ್ಬಳ್ಳಿ: ಕೋವಿಡ್‌-19 ಸೋಂಕಿತ ವ್ಯಕ್ತಿ ಪತ್ತೆಯಾದ ಬೆನ್ನಲ್ಲೆ ವಾಣಿಜ್ಯ ನಗರಿ ಹುಬ್ಬಳ್ಳಿಯ ವಿವಿಧ ಪ್ರದೇಶಗಳಲ್ಲಿಮಹಾನಗರ ಪಾಲಿಕೆ ಸಿಬ್ಬಂದಿಯಿಂದ ರಾಸಾಯನಿಕ ಸಿಂಪರಣೆ ಮಾಡಿಸಲಾಗುತ್ತಿದೆ.
Vijaya Karnataka Web 23 VIJU 2070348
ಹುಬ್ಬಳ್ಳಿಯ ದಾಜೀಬಾನ್‌ಪೇಟೆಯಲ್ಲಿಮಹಾನಗರ ಪಾಲಿಕೆ ಸಿಬ್ಬಂದಿ ಸೋಮವಾರ ರಾಸಾಯನಿಕ ಸಿಂಪರಣೆ ಮಾಡಿದರು.


ನಗರದ ದಾಜೀಬಾನ ಪೇಟೆ, ತಿರುಪತಿ ಬಜಾರ್‌, ದುರ್ಗದ ಬೈಲ…, ಮೀನು ಮಾರುಕಟ್ಟೆ, ಎಂ.ಜಿ. ಮಾರ್ಕೆಚ್‌, ನವನಗರ ಸೇರಿದಂತೆ ಅನೇಕ ಜನನಿಬಿಡ ಪ್ರದೇಶಗಳಲ್ಲಿರಾಸಾಯನಿಕ ಸಿಂಪಡಿಸುವ ಮೂಲಕ ವೈರಸ್‌ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ನಗರದೆಲ್ಲೆಡೆ ಮಹಾನಗರ ಪಾಲಿಕೆ ಸಿಬ್ಬಂದಿಯಿಂದ ಸೋಡಿಯಂ ಹೈಪೋಕ್ಲೋರೈಡ್‌ ದ್ರಾವಣ ಸಿಂಪರಣೆ ಕಾರ್ಯ ಭರದಿಂದ ಸಾಗಿದೆ. ಈ ಮೂಲಕ ನಗರದ ಎಲ್ಲಾ ಪ್ರದೇಶಗಳ ಸ್ವಚ್ಛತೆಗೆ ಪಾಲಿಕೆ ಆದ್ಯತೆ ನೀಡಿ ಕೊರೊನಾ ವೈರಸ್‌ ಹೋಗಲಾಡಿಸಲು ಸಮರೋಪಾದಿಯಲ್ಲಿಕಾರ್ಯನಿರ್ವಹಿಸುತ್ತಿದೆ.

ಪಾಲಿಕೆ ವಲಯ ಕಚೇರಿ 8ರ ವ್ಯಾಪ್ತಿಯ ಅಗಸರ ಓಣಿ, ಜೋಳದ ಓಣಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಫಾಗಿಂಗ್‌ ನಡೆಸಲಾಯಿತು. ಅದೇ ರೀತಿ ಮಹಾನಗರ ಪಾಲಿಕೆಗೆ ಬರುವ ಸಾರ್ವಜನಿಕರಿಗೆ ಥರ್ಮಲ್‌ ಶೂಟ್‌ ಮೂಲಕ ಜ್ವರ ಇರುವುದನ್ನು ಪರಿಶೀಲಿಸಿ ಒಳ ಬಿಡುವ ವ್ಯವಸ್ಥೆ ಮಾಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ