ಆ್ಯಪ್ನಗರ

ಚತುರತೆಗೆ ಚದುರಂಗ ಸಹಾಯಕ

ಧಾರವಾಡ : ಧಾರವಾಡ ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷ ಣ ಇಲಾಖೆ ಹಾಗೂ ಎಲ್‌ಇಎ ಪದವಿ ಪೂರ್ವ ಮಹಾವಿದ್ಯಾಲಯದ ಆಶ್ರಯದಲ್ಲಿ ಧಾರವಾಡ ತಾಲೂಕು ಮಟ್ಟದ ಚದುರಂಗ ಸ್ಪರ್ಧೆ ನಡೆಯಿತು.

Vijaya Karnataka 20 Aug 2019, 5:00 am
ಧಾರವಾಡ : ಧಾರವಾಡ ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷ ಣ ಇಲಾಖೆ ಹಾಗೂ ಎಲ್‌ಇಎ ಪದವಿ ಪೂರ್ವ ಮಹಾವಿದ್ಯಾಲಯದ ಆಶ್ರಯದಲ್ಲಿ ಧಾರವಾಡ ತಾಲೂಕು ಮಟ್ಟದ ಚದುರಂಗ ಸ್ಪರ್ಧೆ ನಡೆಯಿತು.
Vijaya Karnataka Web chess assistant for ingenuity
ಚತುರತೆಗೆ ಚದುರಂಗ ಸಹಾಯಕ


ಯುನೈಟೆಡ್‌ ಕರ್ನಾಟಕ ಚೆಸ್‌ ಅಸೋಸಿಯನ್‌ ಉಪಾಧ್ಯಕ್ಷ ವಿನಯ ಕುರ್ತಕೊಟಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ‌ ಬೆಳೆಸುವಲ್ಲಿ ಚದುರಂಗ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಿಗೆ ಚತುರತೆ ಮತ್ತು ವೈಚಾರಿಕತೆ ಬೆಳೆಯಬೇಕಾದರೆ ಚದುರಂಗ ಸಹಾಯಕ. ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಬೇಕು ಎಂದರು.

ಅಧ್ಯಕ್ಷ ತೆ ವಹಿಸಿದ್ದ ಪ್ರಾಚಾರ್ಯ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್‌ ಬಳಕೆ ಕಡಿಮೆ ಮಾಡಿ ಚದುರಂಗದಂತಹ ಕ್ರೀಡೆಗಳಲ್ಲಿ ಭಾಗವಹಿಸುವುದು ಸೂಕ್ತ. ಇದರಿಂದ ಮಕ್ಕಳ ಬುದ್ಧಿಮಟ್ಟ ಬೆಳವಣಿಗೆಗೆ ಸಾಧ್ಯ ಎಂದರು.

ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಪ್ರಥಮ ಭುವನಸಿಂಗ ಜಯರಾಮಣ್ಣವರ (ಎಸ್‌ಎಂಐ ಪಿಯು ಕಾಲೇಜ) ದ್ವಿತೀಯ ಹರ್ಷಾ ಮಣ್ಣುರ (ಪ್ರೀಸ್ಮ ಪಿಯು ಕಾಲೇಜ) ತೃತೀಯ ವಿಶೃತ ಮೊಕಾಶಿ (ಎಸ್‌ಎಂಐ ಪಿಯು ಕಾಲೇಜ) ಮಹಿಳಾ ವಿಭಾಗದಲ್ಲಿ ಪ್ರಥಮ ಕೀರ್ತಿ ನರಗುಂದ (ಪ್ರೀಸ್ಮ ಪಿಯು ಕಾಲೇಜ), ದ್ವಿತೀಯ ಶ್ರೀದೇವಿ ಜೇವೂರ (ಎಸ್‌ಎಂಪಿಯು ಕಾಲೇಜ) ತೃತೀಯ ಶಾಂಭವಿ ಹೆಗಡೆ (ಸತ್ಯ ಸಾಯಿ ಪಿಯು ಕಾಲೇಜ) ಬಹುಮಾನ ಪಡೆದರು. ಆರ್‌.ಯು,ಬೆಳ್ಳಕ್ಕಿ, ಎಸ್‌.ಎಂ.ಅಗಡಿ ಬಹುಮಾನ ವಿತರಿಸಿದರು. ಬಸವರಾಜ ಎಂ. ಸ್ಪರ್ಧೆಯ ನಿಯಮ ತಿಳಿಸಿದರು. ಬಿ.ಎಸ್‌. ತಾಳಿಕೊಟಿ, ವಿಜಯ ಹಳ್ಳೂರ, ಶ್ರೀನಿವಾಸ ಇಂದ್ರಾಳಿ, ಎಸ್‌.ಸಿ.ನೀಲಗುಂದ ಇದ್ದರು. ಸುಪ್ರಿತಾ ಪರಮಣ್ಣವರ ಪ್ರಾರ್ಥಿಸಿದರು. ದಿನೇಶ ವೈ. ಯಣ್ಣಿ ಸ್ವಾಗತಿಸಿದರು. ಜಿ.ಜಿ.ಬೆಟಗೇರಿ ನಿರೂಪಿಸಿದರು. ನವೀನ ಮರಿಗೌಡರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ