ಆ್ಯಪ್ನಗರ

ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಾಲ್ಯವಿವಾಹ ತಡೆ

ಧಾರವಾಡ : ತಾಲೂಕಿನ ಸೋಮಾಪೂರ ಗ್ರಾಮದ ಶಂಕರ ಅಣ್ಣಿಗೇರಿ (28) ಯುವಕನ ಜತೆಗೆ ನಿಶ್ಚಯವಾಗಿದ್ದ ತಾಲೂಕಿನ ಬೋಗೂರ ಗ್ರಾಮದ 16 ವರ್ಷದ ಅಪ್ರಾಪ್ತ ಬಾಲಕಿಯ ಬಾಲ್ಯ ವಿವಾಹವನ್ನು ಜಿಲ್ಲಾ ಮಕ್ಕಳ ರಕ್ಷ ಣಾ ಘಟಕದವರು ಗುರುವಾರ ತಡೆದಿದ್ದಾರೆ.

Vijaya Karnataka 17 May 2019, 5:00 am
ಧಾರವಾಡ : ತಾಲೂಕಿನ ಸೋಮಾಪೂರ ಗ್ರಾಮದ ಶಂಕರ ಅಣ್ಣಿಗೇರಿ (28) ಯುವಕನ ಜತೆಗೆ ನಿಶ್ಚಯವಾಗಿದ್ದ ತಾಲೂಕಿನ ಬೋಗೂರ ಗ್ರಾಮದ 16 ವರ್ಷದ ಅಪ್ರಾಪ್ತ ಬಾಲಕಿಯ ಬಾಲ್ಯ ವಿವಾಹವನ್ನು ಜಿಲ್ಲಾ ಮಕ್ಕಳ ರಕ್ಷ ಣಾ ಘಟಕದವರು ಗುರುವಾರ ತಡೆದಿದ್ದಾರೆ.
Vijaya Karnataka Web DRW-16MAILAR09


ಜಿಲ್ಲಾ ಮಕ್ಕಳ ರಕ್ಷ ಣಾ ಘಟಕ ಕರೆಪ್ಪ ಕೌಜಲಗಿ, ಮಹಮ್ಮದಲಿ ತಹಶಿಲ್ದಾರ, ವಿಶಾಲಾ ಕಾನಪೇಟ ಹಾಗೂ ಧಾರವಾಡ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಲಕ್ಷ್ಮಿ ಕಾಂಬಳೆ, ಶೈಲಜಾ ಅರಕೇರಿ, ಗ್ರಾಮೀಣ ಪೊಲೀಸ್‌ ಠಾಣೆ ಪೊಲೀಸ್‌ರ ನೇತೃತ್ವದಲ್ಲಿ ಮನೆಗೆ ಭೇಟಿ ನೀಡಿ ಬಾಲ್ಯ ವಿವಾಹ ತಡೆ ಹಿಡಿದು ಬಾಲಕಿಯನ್ನು ರಕ್ಷಿಸಿ ನವನಗರದ ಸ್ನೇಹಾ ತರೆದ ತಂಗುದಾಣದಲ್ಲಿನ ತಾತ್ಕಾಲಿಕ ರಕ್ಷ ಣೆಗಾಗಿ ಬಾಲಕಿಯನ್ನು ಇಡಲಾಗಿದೆ.

ಅಲ್ಲದೇ ಕುಟುಂಬ ಸೇರಿದಂತೆ ನೆರೆದ ಸಮೂಹಕ್ಕೆ ಮನವೊಲಿಸಿ ಬಾಲ್ಯ ವಿವಾಹ ನಿಷೇಧ ಮತ್ತು ಕರ್ನಾಟಕ ತಿದ್ದುಪಡಿ ಕಾಯ್ದೆ 2016 ಕುರಿತು ತಿಳಿಸಿ ಬಾಲಕಿಯನ್ನು ವಶಕ್ಕೆ ಪಡೆದು ಎರಡು ಕುಟುಂಬದವರಿಗೆ ಪ್ರಾಥಮಿಕ ಹಂತದ ವಿಚಾರಣೆಗಾಗಿ ಜಿಲ್ಲಾ ಮಕ್ಕಳ ರಕ್ಷ ಣಾ ಘಟಕಕ್ಕೆ ಮೇ 17 ರಂದು ಹಾಜರಾಗಲು ನೋಟೀಸ್‌ ನೀಡಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ