ಬಾಲ್ಯ ವಿವಾಹ ತಡೆದ ಅಧಿಕಾರಿಗಳು
ಧಾರವಾಡ : ತಾಲೂಕಿನ ಮನಸೂರ ಗ್ರಾಮದಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಮುಂದಾದ ಅಧಿಕಾರಿಗಳ ಮೇಲೆ ಯುವಕರ ಗುಂಪೊಂದು ದುಂಡಾವರ್ತನೆ ತೋರಿದ್ದು, ಇದಾವುದನ್ನೂ ಲೆಕ್ಕಿಸದ ಅಧಿಕಾರಿ ತಂಡ ಪೊಲೀಸ್ ಭದ್ರತೆಯೊಂದಿಗೆ ತೆರಳಿ ಅಪ್ರಾಪ್ತೆಯ ವಿವಾಹವನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.
Vijaya Karnataka 28 May 2019, 5:00 am
ಧಾರವಾಡ : ತಾಲೂಕಿನ ಮನಸೂರ ಗ್ರಾಮದಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಮುಂದಾದ ಅಧಿಕಾರಿಗಳ ಮೇಲೆ ಯುವಕರ ಗುಂಪೊಂದು ದುಂಡಾವರ್ತನೆ ತೋರಿದ್ದು, ಇದಾವುದನ್ನೂ ಲೆಕ್ಕಿಸದ ಅಧಿಕಾರಿ ತಂಡ ಪೊಲೀಸ್ ಭದ್ರತೆಯೊಂದಿಗೆ ತೆರಳಿ ಅಪ್ರಾಪ್ತೆಯ ವಿವಾಹವನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.
ತಾಲೂಕಿನ ಮನಸೂರ ಗ್ರಾಮದ ಮುದಕಪ್ಪ ಹರಕುಣಿ ಎಂಬ ಯುವಕನೊಂದಿಗೆ ಅದೇ ಗ್ರಾಮದ 16 ವರ್ಷದ ಅಪ್ರಾಪ್ತೆಯ ವಿವಾಹ ಭಾನುವಾರ ನಿಶ್ಚಯ ಆಗಿತ್ತು. ಈ ಕುರಿತು ಬಂದ ಮಾಹಿತಿ ಆಧರಿಸಿ ಶನಿವಾರ ರಾತ್ರಿ 9.30ಕ್ಕೆ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ ಬಾಲ್ಯ ವಿವಾಹ ತಡೆಗೆ ಯತ್ನಿಸಿದೆ.
ಅಧಿಕಾರಿಗಳು ಬಾಲಕಿಯ ವಯಸ್ಸಿನ ದಾಖಲೆಗಳನ್ನು ಪರಿಶೀಲಿಸುತ್ತಿರುವ ವೇಳೆ ಬಂದ ಯುವಕರ ಗುಂಪೊಂದು ಅವರೊಂದಿಗೆ ದುಂಡಾವರ್ತನೆ ತೋರಿದೆ. ಇದು ಕೆಲ ಹೊತ್ತು ಆತಂಕವನ್ನು ಸೃಷ್ಟಿಸಿತ್ತು. ಕೊನೆಗೆ ಈ ವಿಚಾರವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್.ಚಿಣ್ಣನ್ನವರ ಗಮನಕ್ಕೆ ತರಲಾಯಿತು. ಅವರ ಸೂಚನೆ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳ ಭದ್ರತೆಯಲ್ಲಿ ಗ್ರಾಮಕ್ಕೆ ತೆರಳಿದ ಅಧಿಕಾರಿಗಳು ಬಾಲ್ಯ ವಿವಾಹ ತಡೆದಿದ್ದಾರೆ.
ನಂತರ ಗ್ರಾಮಸ್ಥರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ-2016 ರ ಬಗ್ಗೆ ಮಾಹಿತಿ ನೀಡಿ ಶನಿವಾರ ರಾತ್ರಿ 12ಕ್ಕೆ ಈ ಬಾಲಕಿಯ ಬಾಲ್ಯ ವಿವಾಹ ಮಾಡುವುದಿಲ್ಲ ಎಂದು ಆಕೆಯ ಚಿಕ್ಕಪ್ಪ ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಮುಚ್ಚಳಿಕೆ ಪಡೆಯಲಾಯಿತು. ನಂತರ ಭಾನುವಾರ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ಬಾಲ್ಯ ವಿವಾಹ ಮಾಡುವುದಿಲ್ಲ ಎಂದು ಸಹಿಮಾಡಿ ಹೋಗಿದ್ದಾರೆ. ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸುವಂತೆ ಅಧಿಕಾರಿಗಳು ಪಾಲಕರಿಗೆ ನಿರ್ದೇಶನ ನೀಡಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷ ಣಾಧಿಕಾರಿ ಮಾರ್ಗದರ್ಶನದಲ್ಲಿ ಜಿಲ್ಲಾ ಮಕ್ಕಳ ರಕ್ಷ ಣಾ ಘಟಕದ ಸಾಂಸ್ಥಿಕ ರಕ್ಷ ಣಾಧಿಕಾರಿ ನಿಂಗಪ್ಪ ಮಡಿವಾಳರ, ಮಹಮ್ಮದಅಲಿ ತಹಶೀಲ್ದಾರ, ಗ್ರಾಪಂ ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿ ಪಿಡಿಒ ಅನಿತಾ ಹಿರೇಮಠ, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ರೇಣುಕಾ ಅಸುಂಡಿ, ಪೊಲೀಸ್ ಸಿಬ್ಬಂದಿ ಬರಮಣ್ಣನವರ ಬಾಲ್ಯ ವಿವಾಹ ತಡೆದ ತಂಡದಲ್ಲಿ ಇದ್ದರು.
ತಾಲೂಕಿನ ಮನಸೂರ ಗ್ರಾಮದ ಮುದಕಪ್ಪ ಹರಕುಣಿ ಎಂಬ ಯುವಕನೊಂದಿಗೆ ಅದೇ ಗ್ರಾಮದ 16 ವರ್ಷದ ಅಪ್ರಾಪ್ತೆಯ ವಿವಾಹ ಭಾನುವಾರ ನಿಶ್ಚಯ ಆಗಿತ್ತು. ಈ ಕುರಿತು ಬಂದ ಮಾಹಿತಿ ಆಧರಿಸಿ ಶನಿವಾರ ರಾತ್ರಿ 9.30ಕ್ಕೆ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ ಬಾಲ್ಯ ವಿವಾಹ ತಡೆಗೆ ಯತ್ನಿಸಿದೆ.
ಅಧಿಕಾರಿಗಳು ಬಾಲಕಿಯ ವಯಸ್ಸಿನ ದಾಖಲೆಗಳನ್ನು ಪರಿಶೀಲಿಸುತ್ತಿರುವ ವೇಳೆ ಬಂದ ಯುವಕರ ಗುಂಪೊಂದು ಅವರೊಂದಿಗೆ ದುಂಡಾವರ್ತನೆ ತೋರಿದೆ. ಇದು ಕೆಲ ಹೊತ್ತು ಆತಂಕವನ್ನು ಸೃಷ್ಟಿಸಿತ್ತು. ಕೊನೆಗೆ ಈ ವಿಚಾರವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್.ಚಿಣ್ಣನ್ನವರ ಗಮನಕ್ಕೆ ತರಲಾಯಿತು. ಅವರ ಸೂಚನೆ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳ ಭದ್ರತೆಯಲ್ಲಿ ಗ್ರಾಮಕ್ಕೆ ತೆರಳಿದ ಅಧಿಕಾರಿಗಳು ಬಾಲ್ಯ ವಿವಾಹ ತಡೆದಿದ್ದಾರೆ.
ನಂತರ ಗ್ರಾಮಸ್ಥರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ-2016 ರ ಬಗ್ಗೆ ಮಾಹಿತಿ ನೀಡಿ ಶನಿವಾರ ರಾತ್ರಿ 12ಕ್ಕೆ ಈ ಬಾಲಕಿಯ ಬಾಲ್ಯ ವಿವಾಹ ಮಾಡುವುದಿಲ್ಲ ಎಂದು ಆಕೆಯ ಚಿಕ್ಕಪ್ಪ ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಮುಚ್ಚಳಿಕೆ ಪಡೆಯಲಾಯಿತು. ನಂತರ ಭಾನುವಾರ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ಬಾಲ್ಯ ವಿವಾಹ ಮಾಡುವುದಿಲ್ಲ ಎಂದು ಸಹಿಮಾಡಿ ಹೋಗಿದ್ದಾರೆ. ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸುವಂತೆ ಅಧಿಕಾರಿಗಳು ಪಾಲಕರಿಗೆ ನಿರ್ದೇಶನ ನೀಡಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷ ಣಾಧಿಕಾರಿ ಮಾರ್ಗದರ್ಶನದಲ್ಲಿ ಜಿಲ್ಲಾ ಮಕ್ಕಳ ರಕ್ಷ ಣಾ ಘಟಕದ ಸಾಂಸ್ಥಿಕ ರಕ್ಷ ಣಾಧಿಕಾರಿ ನಿಂಗಪ್ಪ ಮಡಿವಾಳರ, ಮಹಮ್ಮದಅಲಿ ತಹಶೀಲ್ದಾರ, ಗ್ರಾಪಂ ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿ ಪಿಡಿಒ ಅನಿತಾ ಹಿರೇಮಠ, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ರೇಣುಕಾ ಅಸುಂಡಿ, ಪೊಲೀಸ್ ಸಿಬ್ಬಂದಿ ಬರಮಣ್ಣನವರ ಬಾಲ್ಯ ವಿವಾಹ ತಡೆದ ತಂಡದಲ್ಲಿ ಇದ್ದರು.