ಆ್ಯಪ್ನಗರ

ಇಂದಿನಿಂದ ಮಕ್ಕಳ ರಕ್ಷಣೆ ವಿಶೇಷ ಕಾರ್ಯಕ್ರಮ

ಧಾರವಾಡ: ಮಕ್ಕಳ ದಿನಾಚರಣೆ ನಿಮಿತ್ತ ಜಿಲ್ಲಾಮಕ್ಕಳ ರಕ್ಷಣಾ ಘಟಕದ ವತಿಯಿಂದ ನ.14ರಿಂದ 20ವರೆಗೆ ಜಿಲ್ಲೆಯಾದ್ಯಂತ ಹಲವಾರು ಮಕ್ಕಳ ರಕ್ಷಣೆ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಮಕ್ಕಳ ರಕ್ಷಣಾ ಅಧಿಕಾರಿ ಅನ್ನಪೂರ್ಣ ಸಂಗಳದ ಹೇಳಿದರು.

Vijaya Karnataka 14 Nov 2019, 5:00 am
ಧಾರವಾಡ: ಮಕ್ಕಳ ದಿನಾಚರಣೆ ನಿಮಿತ್ತ ಜಿಲ್ಲಾಮಕ್ಕಳ ರಕ್ಷಣಾ ಘಟಕದ ವತಿಯಿಂದ ನ.14ರಿಂದ 20ವರೆಗೆ ಜಿಲ್ಲೆಯಾದ್ಯಂತ ಹಲವಾರು ಮಕ್ಕಳ ರಕ್ಷಣೆ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಮಕ್ಕಳ ರಕ್ಷಣಾ ಅಧಿಕಾರಿ ಅನ್ನಪೂರ್ಣ ಸಂಗಳದ ಹೇಳಿದರು.
Vijaya Karnataka Web child protection special program from today
ಇಂದಿನಿಂದ ಮಕ್ಕಳ ರಕ್ಷಣೆ ವಿಶೇಷ ಕಾರ್ಯಕ್ರಮ


ನಗರದಲ್ಲಿಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, 1098 ಚೈಲ್ಡ್‌ಲೈನ್‌ ಸೇ ದೋಸ್ತಿ (ಮಕ್ಕಳ ಸಹಾಯವಾಣಿಯೊಂದಿಗೆ ಗೆಳತನ) ಎಂಬ ಧ್ಯೇಯವಾಕ್ಯದೊಂದಿಗೆ ಈ ವರ್ಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಮಕ್ಕಳ ರಕ್ಷಣೆ ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯವನ್ನು ಘಟಕ ಮಾಡಿಕೊಂಡು ಬರುತ್ತಿದೆ. ಸಂಕಷ್ಟ ಅಥವಾ ಅಪಾಯ ಸ್ಥಿತಿಯಲ್ಲಿರುವ ಮಕ್ಕಳನ್ನು ರಕ್ಷಿಸಿ, ನಂತರ ಅವರಿಗೆ ಸೂಕ್ತ ಪುನರ್ವಸತಿಯನ್ನು ಸರಕಾರದ ನಿಯಾಮನುಸಾರ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ5 ಸರಕಾರಿ ಮತ್ತು 29ಖಾಸಗಿ ಸೇರಿದಂತೆ ಒಟ್ಟು 35 ಮಕ್ಕಳ ಪಾಲನಾ ಕೇಂದ್ರಗಳಿವೆ. ಈ ಕೇಂದ್ರಗಳ ಮುಖಾಂತರ ಮಕ್ಕಳ ರಕ್ಷಣೆ ಮಾತ್ರವಲ್ಲದೇ ಅವರಿಗೆ ಆರೋಗ್ಯ, ಶಿಕ್ಷಣ ಇನ್ನಿತರ ಸೌಲಭ್ಯಗಳನ್ನು ಒದಗಿಸಿ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ ಎಂದರು.

ನ.14 ರಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿನಡೆಯುವ ಮಕ್ಕಳ ಸಪ್ತಾಹದಲ್ಲಿಮಕ್ಕಳ ಸಹಾಯವಾಣಿಯೊಂದಿಗೆ ಗೆಳೆತನ, ಭಿಕ್ಷಾಟನೆ, ಬಾಲ ಕಾರ್ಮಿಕ, ಬಾಲ್ಯ ವಿವಾಹ ಪದ್ಧತಿ, ಮಕ್ಕಳ ಮೇಲಿನ ದೌರ್ಜನ್ಯ, ಅಂತರ್ಜಾಲ ದುರ್ಬಳಕೆ, ಮಾದಕ ವಸ್ತು ಸೇರಿದಂತೆ ಮಕ್ಕಳ ಸಂಬಂಧಿ ಇನ್ನಿತರ ವಿಷಯಗಳ ಬಗ್ಗೆ ಸಾರ್ವಜನಿಕರಲ್ಲಿಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಅಲ್ಲದೇ ಸರಕಾರದ ಗಮನಕ್ಕೆ ತರಲು ಮಕ್ಕಳ ಗ್ರಾಮ ಸಭೆ ಮಾಡುವ ಮೂಲಕ ಮಕ್ಕಳಿಗಿರುವ ಮೂಲ ಸಮಸ್ಯೆಗಳು, ಸವಾಲುಗಳಿಗೆ ಪರಿಹಾರ ಕಂಡುಕೊಂಡು ಅನುಷ್ಠಾನಕ್ಕೆ ತರಲಾಗುವುದು. ವಿಭಿನ್ನ ಚೇತನ ಮತ್ತು ವಿಭಿನ್ನ ಸಮರ್ಥ ಮಕ್ಕಳ ಜೊತೆ ಆಟ, ಸ್ಪರ್ಧೆ ಇನ್ನಿತರ ಚಟುವಟಿಕೆಗಳ ಸಹಿತ ದಿನ ಕಳೆಯುವುದು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಮಾಹಿತಿಗೆ ಧಾರವಾಡ ಜಿಲ್ಲೆಶಿಲ್ಪಾ ಎಂ.ಪಾಟೀಲ (6366611400), ಧಾರವಾಡ ರವಿ ಭಂಡಾರಿ (9739935029), ಕಲಘಟಗಿ ಬಿ.ವೈ.ಪಾಟೀಲ (9448221600), ಕುಂದಗೋಳ ಎನ್‌.ಬಿ.ಹೊಸಮನಿ (9845125869) ಹಾಗೂ ರೈಲ್ವೆ ನಿಲ್ದಾಣ ಹುಬ್ಬಳ್ಳಿ ಜಯಪ್ಪ ದೊಡ್ಡಮನಿ (9880146256) ಅವರನ್ನು ಸಂಪರ್ಕಿಸಿ ಎಂದರು.

ಸುದ್ದಿಗೋಷ್ಠಿಯಲ್ಲಿಜಿಲ್ಲಾನೋಡಲ್‌ ಸಂಸ್ಥೆಯ ನಿರ್ದೇಶಕಿ ನಾಗರತ್ನ ಜಡೇದ, ಸಂಯೋಜಕಿ ಶಿಲ್ಪ ಪಾಟೀಲ, ಜಿಲ್ಲಾಬಾಲನ್ಯಾಯ ಮಂಡಳಿ ಸದಸ್ಯ ಬಿ.ವೈ.ಪಾಟೀಲ, ಬಿ.ಜಿ.ಹೊಸಮನಿ ಮತಿತ್ತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ