ಆ್ಯಪ್ನಗರ

ಮಕ್ಕಳ ಬಾಲ್ಯ ಅಮೂಲ್ಯ: ಮಾದೇಶ

ಹುಬ್ಬಳ್ಳಿ : ಮಕ್ಕಳ ಬಾಲ್ಯ ಅಮೂಲ್ಯವಾದುದು, ಬಾಲ್ಯದಲ್ಲಿಯೇ ಮಕ್ಕಳನ್ನು ದುಡಿಮೆಗೆ ಹಚ್ಚಿ ಭವಿಷ್ಯ ಹಾಳುಮಾಡಬಾರದು ಎಂದು ನ್ಯಾಯಾಧೀಶ ಮಾದೇಶ ವಿ. ಹೇಳಿದರು.

Vijaya Karnataka 20 Jun 2019, 5:00 am
ಹುಬ್ಬಳ್ಳಿ : ಮಕ್ಕಳ ಬಾಲ್ಯ ಅಮೂಲ್ಯವಾದುದು, ಬಾಲ್ಯದಲ್ಲಿಯೇ ಮಕ್ಕಳನ್ನು ದುಡಿಮೆಗೆ ಹಚ್ಚಿ ಭವಿಷ್ಯ ಹಾಳುಮಾಡಬಾರದು ಎಂದು
Vijaya Karnataka Web DRW-19MANJU1
ಹುಬ್ಬಳ್ಳಿ ಹೊಸೂರಿನ ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಕಾನೂನು ಸಾಕ್ಷ ರತಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಜಾಥಾ ನಡೆಯಿತು.

ನ್ಯಾಯಾಧೀಶ ಮಾದೇಶ ವಿ. ಹೇಳಿದರು.

ನಗರದ ಹೊಸೂರಿನ ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ , ಕಾರ್ಮಿಕ , ಶಿಕ್ಷ ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಪೊಲೀಸ್‌ ಇಲಾಖೆಗಳ ಆಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಕಾನೂನು ಸಾಕ್ಷ ರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಬಾಲ್ಯದಲ್ಲಿ ಶಾಲೆಗೆ ಬಂದು ಉತ್ತಮ ವಿದ್ಯಾಭ್ಯಾಸ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು. ನಾನಾ ಕಾರಣಗಳಿಗಾಗಿ ಚಿಕ್ಕ ಮಕ್ಕಳು ಶಾಲೆ ಬಿಟ್ಟು ಓದುವುದನ್ನು ನಿಲ್ಲಿಸಿ, ಯಾವುದಾದರು ಕೂಲಿ ಕಾರ್ಮಿಕರಾಗಿ ಕೆಲಸಕ್ಕೆ ಸೇರುತ್ತಾರೆ. ಸಂವಿಧಾನ 6 ರಿಂದ 14ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷ ಣದ ಹಕ್ಕು ನೀಡಿದೆ. ಬಾಲ ಕಾರ್ಮಿಕ ಪದ್ದತಿ ತಡೆಗಟ್ಟುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಅತಿಥಿ ಸಹಾಯಕ ಕಾರ್ಮಿಕ ಆಯುಕ್ತೆ ವೀಣಾ ಪಾಟೀಲ ಮಾತನಾಡಿ, ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವವರಿಗೆ 20 ರಿಂದ 50 ಸಾವಿರದ ರವರೆಗೆ ದಂಡ ಜತೆಗೆ 6 ತಿಂಗಳಿಂದ 3 ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದರು.

ತಹಸೀಲ್ದಾರ್‌ ಸಂಗಮೇಶ ಬಾಡಗಿ, ಪ್ರಕಾಶ ಸುಂಕದ, ಜಿ.ಎಫ್‌.ಹಿರೇಮಠ, ಪುಟ್ಟಪ್ಪನವರ, ಆನಂದ ವನಗುದ್ರಿ,

ಲಲಿತಾ ಸಾತೇನಹಳ್ಳಿ, ಸಿದ್ದಪ್ಪ ಕೈಯನೂರ ಅತಿಥಿಗಳಾಗಿದ್ದರು. ಕ್ಷೇತ್ರ ಶಿಕ್ಷ ಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಅಧ್ಯಕ್ಷ ತೆ ವಹಿಸಿದ್ದರು. ಜಿ.ಸಿ. ಕೋಲಕಾರ ಸ್ವಾಗತಿಸಿದರು. ವಿ.ಜಿ.ಗಲಬಿ ನಿರೂಪಿಸಿದರು.ಲಲಿತಾ ಸಾತೇನಹಳ್ಳಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ