ಆ್ಯಪ್ನಗರ

ಮಕ್ಕಳು ಬಳಲುತ್ತಿವೆ..ಕೈ ಮುಗಿಯುತ್ತೇವೆ ನಮ್ಮನ್ನು ಕರೆಸಿಕೊಳ್ಳಿ

ಹುಬ್ಬಳ್ಳಿ: ''ಹೊಟ್ಟೆಪಾಡಿಗೆ ಮಕ್ಕಳನ್ನು ಕಟ್ಟಿಕೊಂಡು ಹುಬ್ಬಳ್ಳಿಯಿಂದ ಗೋವಾಕ್ಕೆ ಬಂದಿದ್ದೇವೆ. ಏಕಾಏಕಿ ಲಾಕ್‌ಡೌನ್‌ ಘೋಷಿಸಿದ್ದರಿಂದ ಮರಳಿ ಊರಿಗೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಹಳೆಯ ಮನೆಯೊಂದನ್ನು ಬಾಡಿಗೆ ರೂಪದಲ್ಲಿಪಡೆದು ಅದರಲ್ಲಿಊಟ ಮತ್ತು ನೀರಿಲ್ಲದೇ ಪರದಾಡುತ್ತಿದ್ದೇವೆ. ನಿಮ್ಮ ಕೈ ಮುಗಿಯುತ್ತೇವೆ

Vijaya Karnataka 15 Apr 2020, 5:00 am
ವಿಜಯಕುಮಾರ ಪೂಜಾರಿ
Vijaya Karnataka Web 14VIJAY-1A071357
ಲಾಕ್‌ ಡೌನ್‌ ಹಿನ್ನೆಲೆಯಲ್ಲಿಗೋವಾದ ಮಾಪಸಾದ ಮನೆಯೊಂದರಲ್ಲಿಇರುವ ಹುಬ್ಬಳ್ಳಿ ಮೂಲದ ಕುಟುಂಬ.

ಹುಬ್ಬಳ್ಳಿ: ''ಹೊಟ್ಟೆಪಾಡಿಗೆ ಮಕ್ಕಳನ್ನು ಕಟ್ಟಿಕೊಂಡು ಹುಬ್ಬಳ್ಳಿಯಿಂದ ಗೋವಾಕ್ಕೆ ಬಂದಿದ್ದೇವೆ. ಏಕಾಏಕಿ ಲಾಕ್‌ಡೌನ್‌ ಘೋಷಿಸಿದ್ದರಿಂದ ಮರಳಿ ಊರಿಗೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಹಳೆಯ ಮನೆಯೊಂದನ್ನು ಬಾಡಿಗೆ ರೂಪದಲ್ಲಿಪಡೆದು ಅದರಲ್ಲಿಊಟ ಮತ್ತು ನೀರಿಲ್ಲದೇ ಪರದಾಡುತ್ತಿದ್ದೇವೆ. ನಿಮ್ಮ ಕೈ ಮುಗಿಯುತ್ತೇವೆ ದಯವಿಟ್ಟು ನಮ್ಮನ್ನು ಇಲ್ಲಿಂದ ಹುಬ್ಬಳ್ಳಿಗೆ ಕರೆಸಿಕೊಳ್ಳಿ''

ಇದು ಗೋವಾದ ಮಾಪ್ಸಾ ಗಡಿಯಲ್ಲಿಸಿಲುಕಿಕೊಂಡಿರುವ ಕೂಲಿ ಕುಟುಂಬವೊಂದರ ಆರ್ತನಾದ.
''ನಮಗೆ ಈ ಲಾಕ್‌ಡೌನ್‌ ಅಂದ್ರೇ ಏನು ಅಂತಾನೂ ಗೊತ್ತಿಲ್ಲ. ಅದಕ್ಕೆ ಪೂರಕ ಎಂಬಂತೆ ಗಾರೆ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದ ಕಟ್ಟಡದ ಗುತ್ತಿಗೆದಾರ ನಮ್ಮನ್ನು ಹೊರಗೆ ಹಾಕಿ ನಿಮ್ಮೂರಿಗೆ ತಕ್ಷಣವೇ ಹೊರಟು ಹೋಗಿ ಎಂದು ತಾಕೀತು ಮಾಡಿದ. ಈಗ ಅತ್ತ ಮನೆ ಇಲ್ಲದೇ, ಇತ್ತ ಆಶ್ರಯ ಇಲ್ಲದೇ ಗೋವಾ ಗಡಿಯ ಕುರ್ಲಿ ಓಣಿಯ ಬಾಡಿಗೆ ಮನೆಯಲ್ಲಿದಿನ ಕಳೆಯುತ್ತಿದ್ದೇವೆ'' ಎಂದು ಗಾರೆ ಕೆಲಸಗಾರ ರಫೀಕ್‌ ಬಿಜಾಪೂರ, ವಿಕ ಜತೆ ದೂರವಾಣಿಯ ಮೂಲಕ ತಮ್ಮ ಅಳಲು ತೋಡಿಕೊಂಡರು.

ನಾನು ಮತ್ತು ನನ್ನ ಸಹೋದರನ ಕುಟುಂಬಗಳ ಐವರು ಮಕ್ಕಳು, ಒಬ್ಬ ಮಹಿಳೆ ಸೇರಿ ಒಟ್ಟು 9 ಜನರು ಸಮಸ್ಯೆಯಲ್ಲಿಸಿಲುಕಿಕೊಂಡಿದ್ದೇವೆ. ಲಾಕ್‌ಡೌನ್‌ ಆದಂದಿನಿಂದ ಅಕ್ಕಪಕ್ಕದ ನಿವಾಸಿಗಳ ಬಳಿ ಬೇಡಿಕೊಂಡು ಆಹಾರ ತಿನ್ನುವ ಪರಿಸ್ಥಿತಿ ಎದುರಾಗಿದೆ. ನಮ್ಮ ಬಳಿ ಹಣವಿಲ್ಲ, ರೇಷನ್‌ ಎಲ್ಲವೂ ಖಾಲಿಯಾಗಿದೆ. ಲಾಕ್‌ ಡೌನ್‌ ಹಿನ್ನೆಲೆಯಲ್ಲಿಹೊರಗಡೆ ತಿನ್ನಲು ಏನೊಂದೂ ಸಿಗುತ್ತಿಲ್ಲ. ಹುಬ್ಬಳ್ಳಿ-ರಾಮನಗರ ರಸ್ತೆಯ(ಆಲ್ಮೋಡಾ ಘಾಚ್‌) ಗಡಿಯನ್ನು ದಾಟಿ ಹೋಗಲು ನಮ್ಮನ್ನು ಪೊಲೀಸರು ಬಿಡುತ್ತಿಲ್ಲ. ಎರಡು-ಮೂರು ಬಾರಿ ಮಕ್ಕಳನ್ನು ನಡೆಸಿಕೊಂಡು ಗಡಿಯವರೆಗೂ ಹೋಗಿ ನಿರಾಶರಾಗಿ ವಾಪಸ್‌ ಬಂದಿದ್ದೇವೆ. ಕೂಡಲೇ ಸಂಬಂಧ ಪಟ್ಟ ಪೊಲೀಸರು ಮತ್ತು ಅಧಿಕಾರಿಗಳಿಗೆ ನಮ್ಮ ಸ್ಥಿತಿ ಮನವರಿಕೆ ಮಾಡಿ ನಮ್ಮನ್ನು ಹುಬ್ಬಳ್ಳಿಗೆ ತಲುಪಿಸಿ ಪುಣ್ಯಾ ಕಟ್ಟಿಕೊಳ್ಳಬೇಕು. ಸಣ್ಣ-ಸಣ್ಣ ಮಕ್ಕಳೊಂದಿಗೆ ನಾವು ಅನುಭವಿಸುತ್ತಿರುವ ಕಷ್ಟ ನಿಜಕ್ಕೂ ಯಾವ ಶತ್ರುಗಳಿಗೂ ಬೇಡ ಎಂದು ಅವರ ಮಾವ ಜಾಫರ್‌ ಕಣ್ಣೀರು ಸುರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ