ಧಾರವಾಡ : ಯಾರು ಸತ್ಯದ ಬೆನ್ನು ಹತ್ತಿ ಹೋಗುತ್ತಾರೆ. ಅವರಿಗೆ ಸಂಕಷ್ಟಗಳು ಹೆಚ್ಚು ಬರುತ್ತವೆ. ಅಂತಹ ಸಂಕಷ್ಟಗಳನ್ನು ಸಮರ್ಥವಾಗಿ ನಿಭಾಯಿಸಿದವರು ಬಿ.ಕೆ.ಹೊಂಗಲ ಮಾಸ್ತರ್ ಎಂದು ಬೆಳಗಾವಿಯ ಲಿಂಗರಾಜ ಕಾಲೇಜಿನ ಉಪನ್ಯಾಸಕ ಡಾ. ಗುರುದೇವಿ ಹುಲೆಪ್ಪನವರಮಠ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಕವಿ ಬಿ.ಕೆ.ಹೊಂಗಲ ದತ್ತಿ ಕಾರ್ಯಕ್ರಮ ಅಂಗವಾಗಿ ಆಯೋಜಿಸಿದ್ದ ಮಕ್ಕಳ ಶ್ರೇಷ್ಠ ಕವಿ ಪ್ರಶಸ್ತಿ-2019 ಪ್ರದಾನ ಸಮಾರಂಭ ಹಾಗೂ ಉಪನ್ಯಾಸದಲ್ಲಿ ಮಕ್ಕಳ ಸಾಹಿತ್ಯ ಸ್ವರೂಪ ದರ್ಶನ ವಿಷಯದ ಕುರಿತು ಉಪನ್ಯಾಸ ನೀಡಿ ಭಾನುವಾರ ಅವರು ಮಾತನಾಡಿದರು.
ಮಕ್ಕಳಲ್ಲಿನ ಸೃಜನಶೀಲತೆ ಅರಳಿಸುವ, ಪ್ರಚೋದಿಸುವ ಮಕ್ಕಳ ಕಲ್ಪನೆ ಹೆಚ್ಚಿಸುವಂತಹ ಸಾಹಿತ್ಯ ಹೆಚ್ಚು ಪ್ರಸ್ತುತವಾಗಿ ಬರಬೇಕು. ಅದರಲ್ಲೂ ಆಟೋಟದೊಂದಿಗೆ ಪಠ್ಯದ ವಸ್ತುವನ್ನು ಅಳವಡಿಸಿಕೊಳ್ಳಬೇಕು ಎಂದರು.
ಮಕ್ಕಳ ಸಾಹಿತಿ ಈಶ್ವರ ಕಮ್ಮಾರ ಅವರು ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿದರು.
ಮಕ್ಕಳ ಶ್ರೇಷ್ಠ ಕವಿ ಪ್ರಶಸ್ತಿ-2019ನ್ನು ಸ್ವೀಕರಿಸಿ ಮಾತನಾಡಿದ ಮಕ್ಕಳ ಸಾಹಿತಿ ಶಿವಪ್ರಸಾದ ಹುಲೆಪ್ಪನವರಮಠ, ನಾನೊಬ್ಬ ಶಿಕ್ಷ ಕನಾಗಿ ಮಕ್ಕಳ ಶ್ರೇಷ್ಠ ಕವಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ಸಂತೋಷದ ಸಂಗತಿ. ಅದರಲ್ಲೂ ಈಶ್ವರ ಕಮ್ಮಾರ ಅವರಿಂದ ಸ್ವೀಕರಿಸಿದ್ದು ಸಂತೋಷದ ಹೆಚ್ಚಿಸಿದೆ ಎಂದರು.
ಅಧ್ಯಕ್ಷ ತೆ ವಹಿಸಿದ್ದ ಆಕಾಶವಾಣಿ ಕೇಂದ್ರದ ಕಾರ್ಯಕ್ರಮದ ಅಧಿಕಾರಿ ಡಾ. ಬಸು ಬೇವಿನಗಿಡದ ಮಾತನಾಡಿ, ಉತ್ತರ ಕರ್ನಾಟಕ ಸಾಹಿತ್ಯ ಮಕ್ಕಳ ಸಾಹಿತ್ಯದ ತೊಟ್ಟಿಲಾಗಿದೆ ಎಂದರು.
ಇದೇ ವೇಳೆ ಬಿ.ಕೆ. ಹೊಂಗಲರ ಮಕ್ಕಳು ಬಿ.ಕೆ. ಹೊಂಗಲ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಿದರು. ರಾಮದುರ್ಗ ಮತ್ತು ಪಿ.ಎಂ. ಕಣವಿ ಅವರು ಬಿ.ಕೆ. ಹೊಂಗಲ ಅವರನ್ನು ಸನ್ಮಾನಿಸಿದರು.
ಶಿವಪುತ್ರ ಬೆಲ್ಲದ, ದತ್ತಿದಾನಿ ಸೋಮನಾಥ ಬಿ. ಹೊಂಗಲ, ಪ್ರಕಾಶ ಎಸ್. ಉಡಿಕೇರಿ, ಶಾಂತೇಶ ಗಾಮನಗಟ್ಟಿ, ಡಾ. ಆನಂದ ಪಾಟೀಲ, ಶಾಂತಾದೇವಿ ಹುಲೆಪ್ಪನವರಮಠ, ಮಹಾಂತೇಶ ನರೇಗಲ್ಲ, ರಾಮಚಂದ್ರ ಧೋಂಗಡೆ, ಡಾ. ಸುನೀಲ ಪಾಟೀಲ, ಬಸನಗೌಡ್ರ ದೇಸಾಯಿ, ಶಿವ ಬಿದರಕಟ್ಟಿ, ಕಲ್ಲಪ್ಪ ಬಸಪ್ಪ ಚಂದನಮಟ್ಟಿ, ಡಾ. ರಾಜಶೇಖರ ಬಶೆಟ್ಟಿ, ಚನಬಸಪ್ಪ ಅವರಾದಿ, ಅರಳಿಕಟ್ಟಿ, ಮಧುಮತಿ ಸಣಕಲ್ಲ ಸೇರಿದಂತೆ ಹೊಂಗಲ ಪರಿವಾರದವರು ಉಪಸ್ಥಿತರಿದ್ದರು. ನಿಂಗಣ್ಣ ಕುಂಟಿ ಸ್ವಾಗತಿಸಿದರು. ಕೃಷ್ಣ ಜೋಶಿ ಪ್ರಾಸ್ತಾವಿಸಿದರು. ಸದಾನಂದ ಶಿವಳ್ಳಿ ಗಣ್ಯರಿಗೆ ಗ್ರಂಥ ಮತ್ತು ಪುಷ್ಪ ನೀಡಿ ಗೌರವಿಸಿದರು. ಮನೋಜ ಪಾಟೀಲ ವಂದಿಸಿದರು. ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಕವಿ ಬಿ.ಕೆ.ಹೊಂಗಲ ದತ್ತಿ ಕಾರ್ಯಕ್ರಮ ಅಂಗವಾಗಿ ಆಯೋಜಿಸಿದ್ದ ಮಕ್ಕಳ ಶ್ರೇಷ್ಠ ಕವಿ ಪ್ರಶಸ್ತಿ-2019 ಪ್ರದಾನ ಸಮಾರಂಭ ಹಾಗೂ ಉಪನ್ಯಾಸದಲ್ಲಿ ಮಕ್ಕಳ ಸಾಹಿತ್ಯ ಸ್ವರೂಪ ದರ್ಶನ ವಿಷಯದ ಕುರಿತು ಉಪನ್ಯಾಸ ನೀಡಿ ಭಾನುವಾರ ಅವರು ಮಾತನಾಡಿದರು.
ಮಕ್ಕಳಲ್ಲಿನ ಸೃಜನಶೀಲತೆ ಅರಳಿಸುವ, ಪ್ರಚೋದಿಸುವ ಮಕ್ಕಳ ಕಲ್ಪನೆ ಹೆಚ್ಚಿಸುವಂತಹ ಸಾಹಿತ್ಯ ಹೆಚ್ಚು ಪ್ರಸ್ತುತವಾಗಿ ಬರಬೇಕು. ಅದರಲ್ಲೂ ಆಟೋಟದೊಂದಿಗೆ ಪಠ್ಯದ ವಸ್ತುವನ್ನು ಅಳವಡಿಸಿಕೊಳ್ಳಬೇಕು ಎಂದರು.
ಮಕ್ಕಳ ಸಾಹಿತಿ ಈಶ್ವರ ಕಮ್ಮಾರ ಅವರು ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿದರು.
ಮಕ್ಕಳ ಶ್ರೇಷ್ಠ ಕವಿ ಪ್ರಶಸ್ತಿ-2019ನ್ನು ಸ್ವೀಕರಿಸಿ ಮಾತನಾಡಿದ ಮಕ್ಕಳ ಸಾಹಿತಿ ಶಿವಪ್ರಸಾದ ಹುಲೆಪ್ಪನವರಮಠ, ನಾನೊಬ್ಬ ಶಿಕ್ಷ ಕನಾಗಿ ಮಕ್ಕಳ ಶ್ರೇಷ್ಠ ಕವಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ಸಂತೋಷದ ಸಂಗತಿ. ಅದರಲ್ಲೂ ಈಶ್ವರ ಕಮ್ಮಾರ ಅವರಿಂದ ಸ್ವೀಕರಿಸಿದ್ದು ಸಂತೋಷದ ಹೆಚ್ಚಿಸಿದೆ ಎಂದರು.
ಅಧ್ಯಕ್ಷ ತೆ ವಹಿಸಿದ್ದ ಆಕಾಶವಾಣಿ ಕೇಂದ್ರದ ಕಾರ್ಯಕ್ರಮದ ಅಧಿಕಾರಿ ಡಾ. ಬಸು ಬೇವಿನಗಿಡದ ಮಾತನಾಡಿ, ಉತ್ತರ ಕರ್ನಾಟಕ ಸಾಹಿತ್ಯ ಮಕ್ಕಳ ಸಾಹಿತ್ಯದ ತೊಟ್ಟಿಲಾಗಿದೆ ಎಂದರು.
ಇದೇ ವೇಳೆ ಬಿ.ಕೆ. ಹೊಂಗಲರ ಮಕ್ಕಳು ಬಿ.ಕೆ. ಹೊಂಗಲ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಿದರು. ರಾಮದುರ್ಗ ಮತ್ತು ಪಿ.ಎಂ. ಕಣವಿ ಅವರು ಬಿ.ಕೆ. ಹೊಂಗಲ ಅವರನ್ನು ಸನ್ಮಾನಿಸಿದರು.
ಶಿವಪುತ್ರ ಬೆಲ್ಲದ, ದತ್ತಿದಾನಿ ಸೋಮನಾಥ ಬಿ. ಹೊಂಗಲ, ಪ್ರಕಾಶ ಎಸ್. ಉಡಿಕೇರಿ, ಶಾಂತೇಶ ಗಾಮನಗಟ್ಟಿ, ಡಾ. ಆನಂದ ಪಾಟೀಲ, ಶಾಂತಾದೇವಿ ಹುಲೆಪ್ಪನವರಮಠ, ಮಹಾಂತೇಶ ನರೇಗಲ್ಲ, ರಾಮಚಂದ್ರ ಧೋಂಗಡೆ, ಡಾ. ಸುನೀಲ ಪಾಟೀಲ, ಬಸನಗೌಡ್ರ ದೇಸಾಯಿ, ಶಿವ ಬಿದರಕಟ್ಟಿ, ಕಲ್ಲಪ್ಪ ಬಸಪ್ಪ ಚಂದನಮಟ್ಟಿ, ಡಾ. ರಾಜಶೇಖರ ಬಶೆಟ್ಟಿ, ಚನಬಸಪ್ಪ ಅವರಾದಿ, ಅರಳಿಕಟ್ಟಿ, ಮಧುಮತಿ ಸಣಕಲ್ಲ ಸೇರಿದಂತೆ ಹೊಂಗಲ ಪರಿವಾರದವರು ಉಪಸ್ಥಿತರಿದ್ದರು. ನಿಂಗಣ್ಣ ಕುಂಟಿ ಸ್ವಾಗತಿಸಿದರು. ಕೃಷ್ಣ ಜೋಶಿ ಪ್ರಾಸ್ತಾವಿಸಿದರು. ಸದಾನಂದ ಶಿವಳ್ಳಿ ಗಣ್ಯರಿಗೆ ಗ್ರಂಥ ಮತ್ತು ಪುಷ್ಪ ನೀಡಿ ಗೌರವಿಸಿದರು. ಮನೋಜ ಪಾಟೀಲ ವಂದಿಸಿದರು. ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು.