ಆ್ಯಪ್ನಗರ

ಜೋಶಿ ಆರಿಸಿ, ಮೋದಿ ಗೆಲ್ಲಿಸಿ

ಹುಬ್ಬಳ್ಳಿ : ಮೋದಿ ಒಬ್ಬ ದೃಢ ಚಿತ್ತದ ನಾಯಕ. ಉತ್ತಮರನ್ನು ಕಳೆದುಕೊಳ್ಳಲು ಅವಕಾಶ ಕೊಡಬೇಡಿ. ಜಾಗೃತ ಮತದಾರರಂತೆ ಮತದಾನ ಮಾಡಿ ಪ್ರಹ್ಲಾದ ಜೋಶಿ ಅವರನ್ನು ಆರಿಸಿ, ನರೇಂದ್ರ ಮೋದಿ ಅವರನ್ನು ಗೆಲ್ಲಿಸಿ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದರು.

Vijaya Karnataka 17 Apr 2019, 5:00 am
ಹುಬ್ಬಳ್ಳಿ : ಮೋದಿ ಒಬ್ಬ ದೃಢ ಚಿತ್ತದ ನಾಯಕ. ಉತ್ತಮರನ್ನು ಕಳೆದುಕೊಳ್ಳಲು ಅವಕಾಶ ಕೊಡಬೇಡಿ. ಜಾಗೃತ ಮತದಾರರಂತೆ ಮತದಾನ ಮಾಡಿ ಪ್ರಹ್ಲಾದ ಜೋಶಿ ಅವರನ್ನು ಆರಿಸಿ, ನರೇಂದ್ರ ಮೋದಿ ಅವರನ್ನು ಗೆಲ್ಲಿಸಿ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದರು.
Vijaya Karnataka Web DRW-16 NADAF 10
ಹುಬ್ಬಳ್ಳಿಯ ನೂತನ ನ್ಯಾಯಾಲಯ ಸಂಕೀರ್ಣದಲ್ಲಿ ಸೋಮವಾರ ಹುಬ್ಬಳ್ಳಿ ವಕೀಲರ ಸಂಘದೊಂದಿಗೆ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಬಿಜೆಪಿ ಅಭ್ಯರ್ಥಿ ಸಂಸದ ಪ್ರಹ್ಲಾದ್‌ ಜೋಶಿ ಪರ ಮತಯಾಚಿಸಿದರು.


ನಗರದ ನೂತನ ನ್ಯಾಯಾಲಯ ಸಂಕೀರ್ಣದಲ್ಲಿ ಸೋಮವಾರ ಹುಬ್ಬಳ್ಳಿ ವಕೀಲರ ಸಂಘದೊಂದಿಗೆ ಚುನಾವಣೆ ಪ್ರಚಾರಾರ್ಥವಾಗಿ ಸೇರಿದ್ದ ಸಭೆಯಲ್ಲಿ ವಕೀಲರನ್ನುದ್ದೇಶಿಸಿ ಮಾತನಾಡಿದರು.

ನಾನು ಸಹ ಇದೇ ಸಂಘದಿಂದ ವಕೀಲಿ ವೃತ್ತಿ ಪ್ರಾರಂಭಿಸಿ ಬೆಳೆದವನು. ಈ ಸಂಘ ನನಗೆ ನಾಯಕತ್ವ ಗುಣ ಕಲಿಸಿದೆ. ನಾನು ಆರು ಭಾರಿ ಗೆಲ್ಲಲೂ ನೀವೆಲ್ಲರೂ ಕಾರಣ. ಎಸ್‌.ಆರ್‌. ಬೊಮ್ಮಾಯಿ ಮತ್ತು ನಾನು ಇದೇ ಸಂಘದಿಂದ ಬೆಳೆದು ಶಾಸಕರಾದವರು ಎಂದು ತಮ್ಮ ವಕೀಲಿ ಬದುಕಿನ ದಿನಗಳನ್ನು ನೆನಪು ಮಾಡಿಕೊಂಡರು.

ನ್ಯಾಯಾಲಯದ ಸಂಕೀರ್ಣದಲ್ಲಿರುವ ವಿವಿಧ ಭಾಗಗಳಿಗೆ ತೆರಳಿ ತಮ್ಮ ಅವಧಿಯಲ್ಲಾದ ಕಾರ್ಯಗಳ ರಿಪೋರ್ಟ್‌ ಕಾರ್ಡ್‌ ನೀಡಿ ವಕೀಲರಲ್ಲಿ ಮತಯಾಚಿಸಿದರು.

ಮುಧೋಳ ಶಾಸಕ ಗೋವಿಂದ ಕಾರಜೋಳ, ರಮೇಶ ಬಾಬು, ಮೋಹನ ಲಿಂಬಿಕಾಯಿ, ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ, ಉಪಾಧ್ಯಕ್ಷ ಎಸ್‌.ವಿ. ಕೊಪ್ಪರ, ಅಶೋಕ ಅಣವೇಕರ, ಪ್ರಧಾನ ಕಾರ್ಯದರ್ಶಿಗಳಾದ ಗುರು ಹಿರೇಮಠ, ಲೋಕೇಶ ಎಂ. ಶೋಭಾ ಪವಾರ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ