ಆ್ಯಪ್ನಗರ

ಕ್ರಿಸಮಸ್‌ ನಾಡಿನ ಸಂತಸದ ಹಬ್ಬ

ಧಾರವಾಡ : ಕ್ರಿಸ್‌ಮಸ್‌ ಕೇವಲ ಕ್ರೈಸ್ತ ಜನಾಂಗಕ್ಕೆ ಸೀಮಿತವಾದ ಹಬ್ಬವಲ್ಲ. ನಾವು ಜಾತಿ, ಭೇದ ಎಂದೆಣಿಸದೆ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಕ್ರೈಸ್ತ ಬಾಂಧವರ ಜೊತೆಯಲ್ಲಿ ಇತರರು ಸಕ್ರೀಯವಾಗಿ ಭಾಗವಹಿಸುವ ಹಬ್ಬ ಕ್ರಿಸ್ತ ಜಯಂತಿ, ಯೇಸು ಕ್ರಿಸ್ತನ ಜನನೋತ್ಸವವೇ ಕ್ರಿಸ್‌ಮಸ್‌ . ಸಮಸ್ತ ನಾಡಿಗೆ ಸಂತಸವನ್ನು ತರುವ ಹಬ್ಬವಾಗಿದೆ ಎಂದು ಬಿಶೋಪ ರೈಟ್‌. ರೇ. ರವಿಕುಮಾರ ಜೆ. ನಿರಂಜನ ತಿಳಿಸಿದ್ದಾರೆ.

Vijaya Karnataka 24 Dec 2018, 5:00 am
ಧಾರವಾಡ : ಕ್ರಿಸ್‌ಮಸ್‌ ಕೇವಲ ಕ್ರೈಸ್ತ ಜನಾಂಗಕ್ಕೆ ಸೀಮಿತವಾದ ಹಬ್ಬವಲ್ಲ. ನಾವು ಜಾತಿ, ಭೇದ ಎಂದೆಣಿಸದೆ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಕ್ರೈಸ್ತ ಬಾಂಧವರ ಜೊತೆಯಲ್ಲಿ ಇತರರು ಸಕ್ರೀಯವಾಗಿ ಭಾಗವಹಿಸುವ ಹಬ್ಬ ಕ್ರಿಸ್ತ ಜಯಂತಿ, ಯೇಸು ಕ್ರಿಸ್ತನ ಜನನೋತ್ಸವವೇ ಕ್ರಿಸ್‌ಮಸ್‌ . ಸಮಸ್ತ ನಾಡಿಗೆ ಸಂತಸವನ್ನು ತರುವ ಹಬ್ಬವಾಗಿದೆ ಎಂದು ಬಿಶೋಪ ರೈಟ್‌. ರೇ. ರವಿಕುಮಾರ ಜೆ. ನಿರಂಜನ ತಿಳಿಸಿದ್ದಾರೆ.
Vijaya Karnataka Web christmas is a happy festival
ಕ್ರಿಸಮಸ್‌ ನಾಡಿನ ಸಂತಸದ ಹಬ್ಬ


ಈ ಕುರಿತು ಭಾನುವಾರ ಕ್ರಿಸ್‌ ಸಂದೇಶ ನೀಡಿರುವ ಅವರು,ಕ್ರಿಸ್ತ ಜಯಂತಿಯು ನಾಡಿನ ಎಲ್ಲ ಜನತೆಗೆ ಸುಖ, ಶಾಂತಿ, ನೆಮ್ಮದಿ ನೀಡಲಿ. ಕ್ರಿಸ್‌ಮಸ್‌ ಹಬ್ಬ ಗಡಿಬಿಡಿಯಿಂದ ತುಂಬಿದ ಈ ಪ್ರಪಂಚದಲ್ಲಿ ಇಂದಿನ ಅಧುನಿಕ ಜಗತ್ತಿನಲ್ಲಿ ಉತ್ತಮ ಭಾಂಧವ್ಯ ಸಂಬಂಧಗಳನ್ನು ಹೊಂದಿಕೊಂಡು ಭಿನ್ನಾಭಿಪ್ರಾಯಗಳನ್ನು ತೆಗೆದುಹಾಕಿ ಮತ ಪಂಥಗಳೆಂಬ ಬಿರುಕು ಗೋಡೆಯನ್ನು ತೆಗೆದುಹಾಕಿ ಉತ್ತಮ ಸಂಬಂಧವನ್ನು ಹೊಂದಲಿ.

ಭಯೋತ್ಪಾದನೆ, ಧರ್ಮದ ಹೆಸರಿನಲ್ಲಿ ಗೊಂದಲ, ತಾಂಡವವಾಡುತ್ತಿರುವ ಈ ಸಮಯದಲ್ಲಿ ಜನತೆಗೆ ಬೇಕಾಗಿದ್ದು ಶಾಂತಿ ಹಾಗೂ ಸಮಾಧಾನ. ಇದನ್ನು 2018 ವರ್ಷಗಳ ಹಿಂದೆ ಜನಿಸಿದ ಯೇಸು ಕ್ರಿಸ್ತನು ಈ ಲೋಕಕ್ಕೆ ಸಾರಿದನು. ಈಗ ನಾವು ಸಹೋದರತ್ವ, ಪ್ರೀತಿ, ಅನ್ಯೋನ್ಯತೆ, ಭ್ರಾತ್ರತ್ವದಿಂದ ಸಾಗಬೇಕು. ಅಂದಾಗ ಕ್ರಿಸ್‌ಮಸ್‌ ಹಬ್ಬಕ್ಕೆ ನಿಜವಾದ ಮಹತ್ವ ಬರುವದು.ಯೇಸುವು ತಮ್ಮೆಲ್ಲರಿಗೂ ಸಮೃದ್ಧಿ, ಸಮಾಧಾನ ಹಾಗೂ ನೆಮ್ಮದಿ ನೀಡಲೆಂದು ನಾನು ಪ್ರಾರ್ಥಿಸುವವನಾಗಿದ್ದೇನೆ ಎಂದು ಅವರು, ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಶುಭಾಷಯಗಳನ್ನು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ