ಆ್ಯಪ್ನಗರ

ಆವರಣ ಸ್ವಚ್ಛಗೊಳಿಸಿದ್ರು, ಅಲ್ಲೇ ಟಿಫಿನ್‌ ಮಾಡಿದ್ರು...!

ಧಾರವಾಡ: ಗ್ರಾಮೀಣ ಪ್ರದೇಶದಲ್ಲಿನೆರೆ ಪರಿಹಾರ ಕಾಮಗಾರಿಗಳನ್ನು ತಮ್ಮ ಗಮನಕ್ಕೆ ತರದೆ ಕೈಗೊಳ್ಳಲಾಗುತ್ತಿದೆ ಎಂದು ಧರಣಿ ನಡೆಸುತ್ತಿರುವ ಜಿಪಂ ಸದಸ್ಯರು ಸೋಮವಾರ ಜಿಪಂ ಆವರಣ ಸ್ವಚ್ಛಗೊಳಿಸಿ ಅಲ್ಲಿಯೇ ಕ್ರೀಡೆ ಆಡುವ ಮೂಲಕ ಸರಕಾರದ ಗಮನ ಸೆಳೆದರು.

Vijaya Karnataka 31 Dec 2019, 5:00 am
ಧಾರವಾಡ: ಗ್ರಾಮೀಣ ಪ್ರದೇಶದಲ್ಲಿನೆರೆ ಪರಿಹಾರ ಕಾಮಗಾರಿಗಳನ್ನು ತಮ್ಮ ಗಮನಕ್ಕೆ ತರದೆ ಕೈಗೊಳ್ಳಲಾಗುತ್ತಿದೆ ಎಂದು ಧರಣಿ ನಡೆಸುತ್ತಿರುವ ಜಿಪಂ ಸದಸ್ಯರು ಸೋಮವಾರ ಜಿಪಂ ಆವರಣ ಸ್ವಚ್ಛಗೊಳಿಸಿ ಅಲ್ಲಿಯೇ ಕ್ರೀಡೆ ಆಡುವ ಮೂಲಕ ಸರಕಾರದ ಗಮನ ಸೆಳೆದರು.
Vijaya Karnataka Web clean the premises tiffin the
ಆವರಣ ಸ್ವಚ್ಛಗೊಳಿಸಿದ್ರು, ಅಲ್ಲೇ ಟಿಫಿನ್‌ ಮಾಡಿದ್ರು...!


ನೆರೆ ಪರಿಹಾರ ಹಾಗೂ ಕಾಮಗಾರಿಗಳನ್ನು ಅವೈಜ್ಞಾನಿಕವಾಗಿ ಮಾಡಲಾಗುತ್ತಿದೆ. ಅವು ಕಳಪೆ ಆಗಿವೆ. ಅನುದಾನವನ್ನು ಬೇಕಾಬಿಟ್ಟಿಯಾಗಿ ಬಳಸಿ ಜನಪ್ರತಿನಿಧಿಗಳನ್ನು ಅವಮಾನಿಸಲಾಗುತ್ತಿದೆ ಎಂದು ಆರೋಪಿಸಿರುವ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ನೇತೃತ್ವದಲ್ಲಿಸದಸ್ಯರು ಕಳೆದ ಹತ್ತು ದಿನಗಳಿಂದ ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ.

ಸೋಮವಾರ ಬೆಳಗ್ಗೆ 9ಕ್ಕೆ ಜಿಪಂ ಆವರಣ ಸ್ವಚ್ಛಗೊಳಿಸಿದ ಸದಸ್ಯರು ನಂತರ ಅಲ್ಲಿಯೇ ಉಪಾಹಾರ ಸಿದ್ಧಪಡಿಸಿ ಸೇವಿಸಿದರು. ಮಂಗಳವಾರ ಜಿಲ್ಲಾಧಿಕಾರಿ ಆವರಣ, ಜ.1ರಂದು ಡಿಡಿಪಿಐ ಕಚೇರಿ, ಆರೋಗ್ಯ ಇಲಾಖೆ ಹೀಗೆ ಸರಕಾರದ ಎಲ್ಲಕಚೇರಿಗಳ ಆವರಣ ಹಾಗೂ ಅಲ್ಲಿನ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿಕಾರ್ಯ ಮಾಡಲಿದ್ದೇವೆ ಎಂದು ಪ್ರತಿಭಟನಾನಿರತ ಸದಸ್ಯರು ಆರೋಪಿಸಿದರು.

ವಿನಯ ಕುಲಕರ್ಣಿ ಬೆಂಬಲ:
ಧರಣಿಗೆ ಬೆಂಬಲ ವ್ಯಕ್ತಪಡಿಸಿದ ಮಾಜಿ ಸಚಿವ ವಿನಯ ಕುಲಕರ್ಣಿ, ಜಿಪಂ ಸದಸ್ಯರು ಪ್ರತಿಭಟನೆ ನಡೆಸಿದರೂ ಅವರನ್ನು ಭೇಟಿಯಾಗುವ ಸೌಜನ್ಯ ತೋರದ ಸಚಿವರು, ಶಾಸಕರ ನಡೆ ಬಗ್ಗೆ ಬೇಸರ ಇದೆ. ಇದು ಅಧಿಕಾರ ವಿಕೇಂದ್ರಿಕರಣ ಪರಿಕಲ್ಪನೆಯನ್ನೇ ತಿರುವುಮುರುವು ಮಾಡಿದೆ. ಈ ವಿಚಾರವನ್ನು ಪ್ರತಿಪಕ್ಷ ನಾಯಕರ ಗಮನಕ್ಕೆ ತಂದು ರಾಜ್ಯಮಟ್ಟದಲ್ಲಿಹೋರಾಟ ನಡೆಸುತ್ತೇನೆ. ನೀವು ಯಾವುದೇ ಕಾರಣಕ್ಕೂ ಅಂಜದಿರಿ ನಿಮ್ಮೊಂದಿಗೆ ನಾನಿದ್ದೇನೆ ಎಂದು ಬಲ ತುಂಬಿದರು.

ಈ ಕುರಿತು ಮಾತನಾಡಿದ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ದೇಶದ ಎಲ್ಲೆಡೆ ಸ್ವಚ್ಛ ಭಾರತ ಆಂದೋಲನ ನಡೆಯುತ್ತಿದೆ. ಆದರೆ, ಜಿಲ್ಲಾಧಿಕಾರಿ ಕಚೇರಿ, ಜಿಪಂ ಆವರಣದಲ್ಲಿಸ್ವಚ್ಛತೆಯೇ ಇಲ್ಲವಾಗಿದೆ. ನಿರ್ವಹಣೆಗೆ ಸಾಕಷ್ಟು ಅನುದಾನ ಬಳಸಿಕೊಳ್ಳುತ್ತಿದ್ದು ಸ್ವಚ್ಛತೆ ಮಾತ್ರ ಕಾಣುತ್ತಿಲ್ಲಎಂದು ಬೇಸರ ವ್ಯಕ್ತಪಡಿಸಿದರು.

ಏಜೆಂಟರ ಹಾವಳಿ ಆರೋಪ
ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ನೆರೆ ಪರಿಹಾರವಾಗಿ ಜಿಲ್ಲೆಗೆ 50 ಕೋಟಿ ರೂ. ಅನುದಾನ ಬಂದಿದೆ. ಆದರೆ ಜಿಲ್ಲಾಧಿಕಾರಿಗಳು ತಮ್ಮ ಗಮನಕ್ಕೆ ತರದೇ ಕಾಮಗಾರಿಗಳನ್ನು ಆಯಾ ಶಾಸಕರ ಮೂಲಕ ನೀಡಿದ್ದಾರೆ. ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿಜನರು ನಮ್ಮನ್ನು ಪ್ರಶ್ನಿಸುತ್ತಿದ್ದು ಉತ್ತರ ನೀಡದ ಸ್ಥಿತಿ ಉಂಟಾಗಿದೆ. ಅಲ್ಲದೇ, ಕೃಷಿ, ತೋಟಗಾರಿಗೆ, ನೀರಾವರಿ ಇಲಾಖೆಗಳಿಗೂ ಅನುದಾನ ಬಂದಿದ್ದು ಕಳೆಪೆ ಮಟ್ಟದ ಕಾಮಗಾರಿ ನಡೆಯುತ್ತಿವೆ. ಸರಕಾರದ ಎಲ್ಲಕಚೇರಿಗಳಲ್ಲಿಏಜೆಂಟರ್‌ ಹಾವಳಿ ಶುರುವಾಗಿದೆ ಎಂದು ದೂರಿದರು.

ಉಸ್ತುವಾರಿ ಸಚಿವರ ವಿರುದ್ಧ ಕಿಡಿ:
ಕಳೆದ 10 ದಿನಗಳಿಂದಲೂ ಪ್ರತಿಭಟನೆ ಕುಳಿತರೂ ಜಿಲ್ಲಾಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ತಮ್ಮ ಬಳಿ ಬಂದಿಲ್ಲ. ತಮಗೆ ಏನೂ ಸಂಬಂಧವೇ ಇಲ್ಲಎಂದುಕೊಂಡು ಕುಳಿತು ಇಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ ಎಂದು ಜಿಪಂ ಸದಸ್ಯರು ಬೇಸರ ವ್ಯಕ್ತಪಡಿಸಿದರು.

ಜಿಪಂ ಸದಸ್ಯರಾದ ಉಮೇಶ ಹೆಬಸೂರ, ಕರೆಪ್ಪ ಮಾದರ, ಅಣ್ಮಪ್ಪ ದೇಸಾಯಿ, ರೇಣುಕಾ ಇಬ್ರಾಹಿಂಪುರ, ಚೆನ್ನಮ್ಮ ಪಾಟೀಲ, ಮಂಜವ್ವ ಹರಿಜನ, ಚನ್ನಬಸಪ್ಪ ಮಟ್ಟಿ, ರತ್ನಾ ಪಾಟೀಲ, ವಿದ್ಯಾ ಭಾವನೂರ ಪ್ರತಿಭಟನೆಯಲ್ಲಿದ್ದರು.

ಪರಸೆಂಟೇಜ್‌ಯಾರಿಗೆ?
ಜಿಪಂ ಸದಸ್ಯರು ನೆರೆ ಪರಿಹಾರದಲ್ಲಿಪರಸೆಂಟೇಜ್‌ಗಾಗಿ ಪ್ರತಿಭಟನೆ ಕುಳಿತಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಮ್ಮ ವ್ಯಾಪ್ತಿ ಪ್ರದೇಶದಲ್ಲಿನ ಕಾಮಗಾರಿಗಳನ್ನು ನಮ್ಮ ಗಮನಕ್ಕೆ ತರದೇ ಮಾಡುವುದು ಯಾವ ನ್ಯಾಯ?. ನಿತ್ಯ ಜನರೊಡನೆ ಬೆರೆಯುವವರು ನಾವು, ಶಾಸಕರಲ್ಲ. ಅಲ್ಲದೇ, ಎಲ್ಲಪರಿಹಾರ ಕಾಮಗಾರಿಗಳನ್ನು ಇದೀಗ ಶಾಸಕರ ಮೂಲಕ ಮಾಡುತ್ತಿದ್ದು ಪರಸೆಂಟೇಜ್‌ ಅವರಿಗೆ ಹೋಗಲಿದೆಯೇ? ಎಂದು ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ