ಆ್ಯಪ್ನಗರ

ಸ್ವಚ್ಛತೆ ಅರಿವು ಮೂಡಿಸುವ ತರಬೇತಿ

ಧಾರವಾಡ : ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವಕೇಂದ್ರ, ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಸಹಯೋಗದೊಂದಿಗೆ ಪ್ರಧಾನ ಮಂತ್ರಿಗಳ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಸ್ವಚ್ಛ ಭಾರತ ಪ್ರಾಯೋಜಿತ (ಬೇಸಿಗೆ) ಸ್ವಚ್ಛತಾ ಕಾರ್ಯಕ್ರಮ ಯುವಜನರ ಮೂಲಕ ಮಾಡಿಸಲು ನಿರ್ಣಯಿಸಲಾಗಿದೆ.

Vijaya Karnataka 11 Jul 2019, 5:00 am
ಧಾರವಾಡ : ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವಕೇಂದ್ರ, ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಸಹಯೋಗದೊಂದಿಗೆ ಪ್ರಧಾನ ಮಂತ್ರಿಗಳ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಸ್ವಚ್ಛ ಭಾರತ ಪ್ರಾಯೋಜಿತ (ಬೇಸಿಗೆ) ಸ್ವಚ್ಛತಾ ಕಾರ್ಯಕ್ರಮ ಯುವಜನರ ಮೂಲಕ ಮಾಡಿಸಲು ನಿರ್ಣಯಿಸಲಾಗಿದೆ.
Vijaya Karnataka Web cleanliness awareness training
ಸ್ವಚ್ಛತೆ ಅರಿವು ಮೂಡಿಸುವ ತರಬೇತಿ


ಸ್ವಚ್ಛತಾ ಕಾರ್ಯಕ್ರಮ ಜುಲೈನಲ್ಲಿ 50 ಗಂಟೆಗಳ ಕಾಲ ಮಾಡಬೇಕಾಗಿದೆ. ನೆಹರು ಯುವ ಕೇಂದ್ರ ಧಾರವಾಡದ ಜತೆ ಸಂಯೋಜನೆಗೊಂಡಿರುವ ಯುವಕ ಮಂಡಳ ಹಾಗೂ ಯುವತಿ ಮಂಡಳಗಳು ಹಾಗೂ ಸದಸ್ಯರು ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಭಾಗವಹಿಸುವವರು ನೆಹರು ಯುವಕೇಂದ್ರ ಧಾರವಾಡದಲ್ಲಿ ನೋಂದಣಿ ಮಾಡಬೇಕು. ಸ್ವಚ್ಛತಾ ಕಾರ್ಯಕ್ರಮ ಅಂಗವಾಗಿ ಗ್ರಾಮೀಣ ಜನರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ತರಬೇತಿ ಹಮ್ಮಿಕೊಳ್ಳುವುದು, ಆರೋಗ್ಯ ದೃಷ್ಟಿಯಿಂದ ಮುನ್ನೆಚ್ಚರಿಗೆ ಮಾಹಿತಿ ನೀಡುವುದು, ಸ್ವಚ್ಛತೆ ಅರಿವು ಮೂಡಿಸುವ ಬೀದಿ ನಾಟಕ, ಸ್ವಚ್ಛತೆ ಅರಿವು ಮೂಡಿಸುವ ರಾರ‍ಯಲಿ, ಸ್ವಚ್ಛತೆ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮ, ನೈರ್ಮಲ್ಯ ಸಂಬಂಧಿತ ಸಮಸ್ಯೆ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಿಸುವ ಶೌಚಾಲಯ, ಕೈತೊಳೆಯುವಿಕೆ, ನೈರ್ಮಲ್ಯ ಅರಿವು ಹಮ್ಮಿಕೊಳ್ಳಲಾಗಿದೆ.

ಎಲ್ಲಾ ಕಾರ್ಯಕ್ರಮ ಜು. 31ರೊಳಗೆ 50ಗಂಟೆಗಳ ಕಾರ್ಯಕ್ರಮ ಮಾಡಿ ಅದಕ್ಕೆ ಸಂಬಂಧಪಟ್ಟಂತೆ ಕಾರ್ಯಕ್ರಮ ವರದಿ, ಫೋಟೊ, ಪೇಪರ್‌ ಕಟ್ಟಿಂಗ್‌, ವೀಡಿಯೊ, ಕ್ಲಿಪಿಂಗ್‌ https://nyks.nic.in/NewInitiatives/SwachhBharatIntership/SwachhBharatInternship.html ವೆಬ್‌ಸೈಟ್‌ನಲ್ಲಿ ವರದಿ ಕಳುಹಿಸಬೇಕು. ಉತ್ತಮ ಸಾಧನೆ ಮಾಡಿದ ಯುವಕ ಮತ್ತು ಯುವತಿ ಮಂಡಳಿಗಳಿಗೆ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಬಹುಮಾನ ವಿತರಿಸಲಾಗುವುದು.

ಮಾಹಿತಿಗೆ ನೆಹರು ಯುವಕೇಂದ್ರ, ವಿನಿ ವಿಧಾನಸಾಧ, ಧಾರವಾಡ ದೂ. 0836-2444676 ಹಾಗೂ ನೆಹರು ಯುವಕೇಂದ್ರದ ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿ ನಿಂಗರಾಜ ನಿಡವಣಿ ಮೊ.8050501377 ಸಂಪರ್ಕಿಸಬೇಕು ಎಂದು ಜಿಲ್ಲಾ ಸಮನ್ವಯ ಅಧಿಕಾರಿ ವಿಲ್‌ಫರ್ಡ್‌ ಡಿಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ