ಧಾರವಾಡ : ಹು- ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ, ಫುಟ್ಪಾತ್ ಸೇರಿದಂತೆ ಒತ್ತುವರಿಯಾದ ಒಟ್ಟು ಆಸ್ತಿಗಳ ಬಗ್ಗೆ 48 ಗಂಟೆಯೊಳಗೆ ಸಭೆ ನಡೆಸಿ ಪಟ್ಟಿ ಮಾಡುವ ಜತೆಗೆ 15 ದಿನಗಳೊಳಗಾಗಿ ಅವೆಲ್ಲವುಗಳನ್ನು ತೆರವು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅಧಿಕಾರಿಗಳಿಗೆ ಗಡವು ನೀಡಿದ್ದಾರೆ.
ಜಿಪಂ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ 2018-19 ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ 4ನೇ ತೈ್ರಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.
ಒತ್ತುವರಿ ಗುರುತಿಸಿದ್ದೀರಾ?
ಸಭೆಯಲ್ಲಿ ಒತ್ತುವರಿ ವಿಷಯ ಪ್ರಸ್ತಾಪಿಸಿದ ಮಾಜಿ ಸಿಎಂ ಜಗದೀಶ ಶೆಟ್ಟರ್ ಪಾಲಿಕೆ ಆಯುಕ್ತ ಪ್ರಶಾಂತಕುಮಾರ ಮಿಶ್ರಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಒತ್ತುವರಿ ಕುರಿತಾದ ನಕ್ಷೆಯೊಂದು ಸಭೆಯಲ್ಲಿ ಪ್ರದರ್ಶಿಸಿದ ಶೆಟ್ಟರ್ ಅವಳಿ ನಗರದಲ್ಲಿ ಎಷ್ಟು ಆಸ್ತಿ ಒತ್ತುವರಿ ಆಗಿವೆ ಎಂಬುದನ್ನು ಗುರುತಿಸಿದ್ದೀರಾ? ಅವುಗಳ ತೆರವು ಏಕೆ ಆಗಿಲ್ಲ? ಕೇಶ್ವಾಪುರ ಹನುಮಂತದೇವರ ದೇವಸ್ಥಾನದ ಕಮಾನನ್ನು ಪಾಲಿಕೆ ಆಸ್ತಿಯಲ್ಲಿ ಪಿಲ್ಲರ್ ಹಾಕಿ ನಿರ್ಮಿಸಲಾಗುತ್ತಿದೆ. ಹುಬ್ಬಳ್ಳಿ ಯಲ್ಲಿ ದರ್ಗಾವೊಂದು ಆಸ್ತಿ ಒತ್ತುವರಿ ಮಾಡಿಕೊಂಡಿದೆ. ಇಂತಹ ಹಲವು ನಿದರ್ಶನಗಳು ಇವೆ. ಈ ಬಗ್ಗೆ ಪಾಲಿಕೆ ಸದಸ್ಯರು ನಿಮ್ಮನ್ನು ಕೇಳಿದರೆ ನೀವು ಎಲೆಕ್ಷನ್ ನಿಮಿತ್ತ ಇಲ್ಲಿಗೆ ಬಂದಿರುವುದಾಗಿ ಹೇಳುತ್ತೀರಿ. ಇದೇನು ನಿಮ್ಮ ವರ್ತನೆ ?ಎಂದು ಆಯುಕ್ತರ ವಿರುದ್ಧ ಹರಿಹಾಯ್ದರು.
ಕೂಡಲೇ ಕ್ರಮದ ಭರವಸೆ
ಇದಕ್ಕೆ ಉತ್ತರಿಸಿದ ಆಯುಕ್ತ ಮಿಶ್ರಾ, ನಾನು ಯಾವುದೋ ಸಂದರ್ಭದಲ್ಲಿ ಹೀಗೆ ಹೇಳಿರಬಹುದು. ಇನ್ನು ಹಾಗೆ ಆಗುವುದಿಲ್ಲ. ಕೂಡಲೇ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು. ಆಗ ಮಧ್ಯ ಪ್ರವೇಶಿಸಿದ ಸಚಿವ ದೇಶಪಾಂಡೆ, ನೀವು ಎಲೆಕ್ಷನ್ಗಷ್ಟೇ ಬಂದಿರುವುದಾಗಿ ಹೇಳುವುದು ಸರಿಯಲ್ಲ. 48 ಗಂಟೆಯೊಳಗೆ ಸಭೆ ನಡೆಸಿ ಒತ್ತುವರಿ ತೆರವುಗೊಳಿಸಬೇಕು. ಧಾರ್ಮಿಕ ಸ್ಥಳಗಳು ಇದ್ದರೆ ಸಂಬಂಧಿಸಿದವರನ್ನು ಕರೆಯಿಸಿ ಮಾತನಾಡಿ. ಸ್ಥಳಾಂತರಕ್ಕೆ ಮನವೊಲಿಸಬೇಕು. ಬಡವರು ನೆಲೆಸಿದ್ದರೆ ಬೇರೆಡೆ ವಸತಿ ಕಲ್ಪಿಸಿ ಪರ್ಯಾಯ ಸೌಕರ್ಯಗಳನ್ನು ಒದಗಿಸಬೇಕು. ಒಟ್ಟಾರೆಯಾಗಿ ಅವಳಿನಗರಗಳ ಅಭಿವೃದ್ಧಿ ಮುಖ್ಯ. ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸುವುದು ಅಗತ್ಯ ಎಂದು ಸೂಚನೆ ನೀಡಿದರು.
ಪರಿಶೀಲನೆ ನಡೆಸಿ
ಪ್ರತಿ ವಾರ ನೀವು ವಲಯ ಅಧಿಕಾರಿಗಳಿಂದ ಪರಿಶೀಲನೆ ನಡೆಸಬೇಕು. ಮಾತ್ರವಲ್ಲ ನಮ್ಮ ವ್ಯಾಪ್ತಿಯಲ್ಲಿ ಯಾವುದೇ ಒತ್ತುವರಿ ಆಗಿಲ್ಲ ಎಂಬ ಪ್ರಮಾಣಪತ್ರ ಪಡೆಯಬೇಕು. ಆ ನಂತರವೂ ಅಲ್ಲಿ ಒತ್ತುವರಿ ಆಗಿದ್ದರೆ ಅದಕ್ಕೆ ವಲಯ ಅಧಿಕಾರಿಗಳನ್ನೇ ಹೊಣೆ ಮಾಡಿ. ಇನ್ನು ಫುಟಪಾತ್ ತೆರವು ಕೂಡ ಆಗಬೇಕು. ಇಲ್ಲಿ ಬಡವರು ಇದ್ದರೆ ಅವರಿಗೆ ಪಯಾರ್ಯ ವ್ಯವಸ್ಥೆ ಕಲ್ಪಿಸಿ. ಆದರೆ ಒತ್ತುವರಿ ಸಹಿಸಲಾಗದು. 15 ದಿನಗಳೊಳಗಾಗಿ ಫಲಿತಾಂಶ ಬರಬೇಕು ಎಂದು ಆರ್ವಿಡಿ ಆದೇಶ ನೀಡಿದರು.
ಯೋಜನೆ ಹಾಕಿಕೊಳ್ಳಿ
ಶೆಟ್ಟರ್ ಮಾತನಾಡಿ, ಕಮರಿಪೇಟೆ ಪೊಲೀಸ್ ಠಾಣೆಯಿಂದ ಉಣಕಲ್ ಕ್ರಾಸ್ವರೆಗೆ 60 ಅಡಿ ಅಗಲದ ರಸ್ತೆ ನಿರ್ಮಾಣ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು. ಇದಕ್ಕೆ ಉತ್ತರಿಸಿದ ಆರ್ವಿಡಿ, ಎಲ್ಲದಕ್ಕೂ ಪಾಲಿಕೆ ಸರಕಾರದ ಮೇಲೆ ಅವಲಂಬನೆ ಆಗಬಾರದು. ಯುಜಿಡಿ, ವಾಟರ್ಲೈನ್ ಸ್ಥಳಾಂತರಕ್ಕೆ ಬಜೆಟ್ನಲ್ಲಿ ಹಣ ಮೀಸಲಿಡಿ. ನಗರಾಭಿವೃದ್ಧಿಗೆ ಯೋಜನೆ ಹಾಕಿಕೊಳ್ಳಿ ಎಂದು ಸೂಚಿಸಿದರು.
ಕೃಷಿ ಚಟುವಟಿಕೆ ಉತ್ತೇಜಿಸಿ
ಮುಂಗಾರು ವಿಳಂಬವಾಗಿರುವುದರಿಂದ ರೈತರಿಗೆ ಪರ್ಯಾಯ ಬೆಳೆ ಯೋಜನೆ ಅಳವಡಿಸಿಕೊಂಡು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಉತ್ತೇಜನ ನೀಡಿ. ಅಗತ್ಯವಿರುವ ಬೀಜ, ರಸಗೊಬ್ಬರ, ಕೀಟನಾಶಕಗಳಿಗೆ ಕೊರತೆಯಾಗದಂತೆ ರೈತರಿಗೆ ಪೂರೈಸಲು ಸಮರ್ಪಕ ಸಿದ್ಧತೆ ಮಾಡಿಕೊಳ್ಳಿ ಎಂದು ಸಚಿವರು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಬಾಕಿ ಇರುವ ಬೆಳೆ ವಿಮೆ, ಬೆಳೆ ಪರಿಹಾರ ವಿತರಣೆಗೆ ತ್ವರಿತ ಕ್ರಮ ಕೈಗೊಳ್ಳಬೇಕು. ಕಳೆದ ಸಾಲಿನಲ್ಲಿ ಜಿಲ್ಲೆಗೆ 3 ಸಾವಿರ ಕೃಷಿಹೊಂಡಗಳ ಗುರಿ ನಿಗದಿಪಡಿಸಲಾಗಿತ್ತು. ಹೆಚ್ಚುವರಿಯಾಗಿ ಬೇಡಿಕೆ ಸಲ್ಲಿಸಿದ 1300 ರೈತರಿಗೂ ಕೃಷಿಹೊಂಡಗಳನ್ನು ಮಂಜೂರು ಮಾಡಿ ,ನಿರ್ಮಿಸಿ ಕೊಡಲಾಗಿದೆ. ಜಿಲ್ಲೆಯಲ್ಲಿ ಮೇವು ಬ್ಯಾಂಕುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಕುಂದಗೋಳ ತಾಲೂಕಿನ ಗುಡಗೇರಿಯಲ್ಲಿ ಬರುವ ಜೂನ್ 18 ರೊಳಗಾಗಿ ಮತ್ತೊಂದು ಮೇವು ಬ್ಯಾಂಕ್ ಆರಂಭಿಸಬೇಕು ಎಂದು ಸಚಿವರು ಸೂಚಿಸಿದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಹಿರೇಪೇಟೆ,ಅಕ್ಕಿಹೊಂಡ ಮತ್ತಿತರ ಪ್ರದೇಶಗಳಲ್ಲಿ ಲಾರಿಗಳನ್ನು ಅನಿಯತವಾಗಿ ಬಿಡುವುದು ಅವೈಜ್ಞಾನಿಕವಾಗಿ ನಿಲುಗಡೆ ಮಾಡುವುದರಿಂದ ಸಂಚಾರ ವ್ಯವಸ್ಥೆಗೆ ಅಡಚಣೆಯಾಗುತ್ತಿದೆ. ಇದರ ಪರಿಹಾರಕ್ಕೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಇನ್ನು ನವಲಗುಂದ ಪಟ್ಟಣದ ಮೂಲಕ ಹಾಯ್ದುಹೋಗುವ ರಾಜ್ಯ ಹೆದ್ದಾರಿಗೆ ಬೈಪಾಸ್ ರಸ್ತೆ ನಿರ್ಮಿಸುವ ಕಾರ್ಯ ಕುಂಠಿತವಾಗಿರುವ ಬಗ್ಗೆ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ವಿವರಣೆ ಕೇಳಿದರು.
ಇದಕ್ಕೆ ಉತ್ತರಿಸಿದ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎನ್.ಎಂ.ಕುಲಕರ್ಣಿ, ನವಲಗುಂದ,ನರಗುಂದ ಪಟ್ಟಣಗಳಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ವಿಸ್ತೃತ ಯೋಜನಾ ವರದಿ ತಯಾರಿಸಿ, ಪ್ರಸ್ತಾವನೆ ಸಲ್ಲಿಸಲಾಗಿದೆ.ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಮಂಜೂರಾತಿ ಸಿಗಬೇಕಾಗಿದೆ ಎಂದರು.
ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಕೆಂಪೇಗೌಡ ಪಾಟೀಲ, ಉಪಾಧ್ಯಕ್ಷ ಶಿವಾನಂದ ಕರಿಗಾರ, ಜಿಲ್ಲಾಧಿಕಾರಿ ಎಂ.ದೀಪಾ , ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತ ಮತ್ತಿತರರು ಇದ್ದರು.
ಎಪಿಎಂಸಿಗಳಿಗೆ ವರ್ತಕರ ಸ್ಥಳಾಂತರಕ್ಕೆ ಗಡವು
ಹು-ಧಾ ಅವಳಿ ನಗರಗಳ ವರ್ತಕರಿಗೆ ನೂತನ ಎಪಿಎಂಸಿ ಪ್ರಾಂಗಣಗಳಲ್ಲಿ ಸೌಲಭ್ಯಗಳಿದ್ದರೂ ಕೆಲವು ವ್ಯಾಪಾರಿಗಳು ಚಿಲ್ಲರೆ ವ್ಯಾಪಾರದ ಅನುಮತಿ ಪಡೆದು ಹಳೆಯ ಮಾರುಕಟ್ಟೆಗಳಲ್ಲಿ ವಹಿವಾಟು ಮುಂದುವರಿಸಿದ್ದಾರೆ. ವಾಸ್ತವವಾಗಿ ಅವರು ಸಗಟು ವ್ಯಾಪಾರ ಮಾಡುತ್ತಿದ್ದಾರೆ. ಅವರಿಗೆಲ್ಲ 30 ದಿನ ಕಾಲಾವಕಾಶ ನೀಡಿ ವ್ಯಾಪಾರವನ್ನು ಸ್ಥಳಾಂತರಿಸಲು ಸೂಚಿಸಬೇಕು. ಇಲ್ಲದಿದ್ದರೆ ಜಿಲ್ಲಾಡಳಿತ ಹಾಗೂ ಪೊಲೀಸರ ನೆರವು ಪಡೆದು ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಸಚಿವ ದೇಶಪಾಂಡೆ ಅವರು ಕೃಷಿ ಮಾರುಕಟ್ಟೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಹುಬ್ಬಳ್ಳಿ ಅಮರಗೋಳದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣವು ಏಷ್ಯಾದಲ್ಲಿಯೇ ಅತಿದೊಡ್ಡದಾಗಿದೆ, ಆದರೆ ನಗರದ ಹಳೆ ಮಾರುಕಟ್ಟೆಯಲ್ಲಿ ಇರುವ ವರ್ತಕರನ್ನು ಸ್ಥಳಾಂತರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದರು. ಇನ್ನು ಧಾರವಾಡ ಎಪಿಎಂಸಿಗೂ ತರಕಾರಿ ಮಾರುಕಟ್ಟೆ ಸ್ಥಳಾಂತರಗೊಳ್ಳುತ್ತಿಲ್ಲ ಎಂದು ಜನಪ್ರತಿನಿಧಿಗಳು ಹೇಳಿದರು. ಆಗ 30 ದಿನಗಳ ಗಡವು ನೀಡಿದ ಆರ್ವಿಡಿ ಇದು ತುರ್ತಾಗಿ ಆಗಲೇಬೇಕು ಎಂದು ಸೂಚನೆ ನೀಡಿದರು.
ಜಿಪಂ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ 2018-19 ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ 4ನೇ ತೈ್ರಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.
ಒತ್ತುವರಿ ಗುರುತಿಸಿದ್ದೀರಾ?
ಸಭೆಯಲ್ಲಿ ಒತ್ತುವರಿ ವಿಷಯ ಪ್ರಸ್ತಾಪಿಸಿದ ಮಾಜಿ ಸಿಎಂ ಜಗದೀಶ ಶೆಟ್ಟರ್ ಪಾಲಿಕೆ ಆಯುಕ್ತ ಪ್ರಶಾಂತಕುಮಾರ ಮಿಶ್ರಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಒತ್ತುವರಿ ಕುರಿತಾದ ನಕ್ಷೆಯೊಂದು ಸಭೆಯಲ್ಲಿ ಪ್ರದರ್ಶಿಸಿದ ಶೆಟ್ಟರ್ ಅವಳಿ ನಗರದಲ್ಲಿ ಎಷ್ಟು ಆಸ್ತಿ ಒತ್ತುವರಿ ಆಗಿವೆ ಎಂಬುದನ್ನು ಗುರುತಿಸಿದ್ದೀರಾ? ಅವುಗಳ ತೆರವು ಏಕೆ ಆಗಿಲ್ಲ? ಕೇಶ್ವಾಪುರ ಹನುಮಂತದೇವರ ದೇವಸ್ಥಾನದ ಕಮಾನನ್ನು ಪಾಲಿಕೆ ಆಸ್ತಿಯಲ್ಲಿ ಪಿಲ್ಲರ್ ಹಾಕಿ ನಿರ್ಮಿಸಲಾಗುತ್ತಿದೆ. ಹುಬ್ಬಳ್ಳಿ ಯಲ್ಲಿ ದರ್ಗಾವೊಂದು ಆಸ್ತಿ ಒತ್ತುವರಿ ಮಾಡಿಕೊಂಡಿದೆ. ಇಂತಹ ಹಲವು ನಿದರ್ಶನಗಳು ಇವೆ. ಈ ಬಗ್ಗೆ ಪಾಲಿಕೆ ಸದಸ್ಯರು ನಿಮ್ಮನ್ನು ಕೇಳಿದರೆ ನೀವು ಎಲೆಕ್ಷನ್ ನಿಮಿತ್ತ ಇಲ್ಲಿಗೆ ಬಂದಿರುವುದಾಗಿ ಹೇಳುತ್ತೀರಿ. ಇದೇನು ನಿಮ್ಮ ವರ್ತನೆ ?ಎಂದು ಆಯುಕ್ತರ ವಿರುದ್ಧ ಹರಿಹಾಯ್ದರು.
ಕೂಡಲೇ ಕ್ರಮದ ಭರವಸೆ
ಇದಕ್ಕೆ ಉತ್ತರಿಸಿದ ಆಯುಕ್ತ ಮಿಶ್ರಾ, ನಾನು ಯಾವುದೋ ಸಂದರ್ಭದಲ್ಲಿ ಹೀಗೆ ಹೇಳಿರಬಹುದು. ಇನ್ನು ಹಾಗೆ ಆಗುವುದಿಲ್ಲ. ಕೂಡಲೇ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು. ಆಗ ಮಧ್ಯ ಪ್ರವೇಶಿಸಿದ ಸಚಿವ ದೇಶಪಾಂಡೆ, ನೀವು ಎಲೆಕ್ಷನ್ಗಷ್ಟೇ ಬಂದಿರುವುದಾಗಿ ಹೇಳುವುದು ಸರಿಯಲ್ಲ. 48 ಗಂಟೆಯೊಳಗೆ ಸಭೆ ನಡೆಸಿ ಒತ್ತುವರಿ ತೆರವುಗೊಳಿಸಬೇಕು. ಧಾರ್ಮಿಕ ಸ್ಥಳಗಳು ಇದ್ದರೆ ಸಂಬಂಧಿಸಿದವರನ್ನು ಕರೆಯಿಸಿ ಮಾತನಾಡಿ. ಸ್ಥಳಾಂತರಕ್ಕೆ ಮನವೊಲಿಸಬೇಕು. ಬಡವರು ನೆಲೆಸಿದ್ದರೆ ಬೇರೆಡೆ ವಸತಿ ಕಲ್ಪಿಸಿ ಪರ್ಯಾಯ ಸೌಕರ್ಯಗಳನ್ನು ಒದಗಿಸಬೇಕು. ಒಟ್ಟಾರೆಯಾಗಿ ಅವಳಿನಗರಗಳ ಅಭಿವೃದ್ಧಿ ಮುಖ್ಯ. ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸುವುದು ಅಗತ್ಯ ಎಂದು ಸೂಚನೆ ನೀಡಿದರು.
ಪರಿಶೀಲನೆ ನಡೆಸಿ
ಪ್ರತಿ ವಾರ ನೀವು ವಲಯ ಅಧಿಕಾರಿಗಳಿಂದ ಪರಿಶೀಲನೆ ನಡೆಸಬೇಕು. ಮಾತ್ರವಲ್ಲ ನಮ್ಮ ವ್ಯಾಪ್ತಿಯಲ್ಲಿ ಯಾವುದೇ ಒತ್ತುವರಿ ಆಗಿಲ್ಲ ಎಂಬ ಪ್ರಮಾಣಪತ್ರ ಪಡೆಯಬೇಕು. ಆ ನಂತರವೂ ಅಲ್ಲಿ ಒತ್ತುವರಿ ಆಗಿದ್ದರೆ ಅದಕ್ಕೆ ವಲಯ ಅಧಿಕಾರಿಗಳನ್ನೇ ಹೊಣೆ ಮಾಡಿ. ಇನ್ನು ಫುಟಪಾತ್ ತೆರವು ಕೂಡ ಆಗಬೇಕು. ಇಲ್ಲಿ ಬಡವರು ಇದ್ದರೆ ಅವರಿಗೆ ಪಯಾರ್ಯ ವ್ಯವಸ್ಥೆ ಕಲ್ಪಿಸಿ. ಆದರೆ ಒತ್ತುವರಿ ಸಹಿಸಲಾಗದು. 15 ದಿನಗಳೊಳಗಾಗಿ ಫಲಿತಾಂಶ ಬರಬೇಕು ಎಂದು ಆರ್ವಿಡಿ ಆದೇಶ ನೀಡಿದರು.
ಯೋಜನೆ ಹಾಕಿಕೊಳ್ಳಿ
ಶೆಟ್ಟರ್ ಮಾತನಾಡಿ, ಕಮರಿಪೇಟೆ ಪೊಲೀಸ್ ಠಾಣೆಯಿಂದ ಉಣಕಲ್ ಕ್ರಾಸ್ವರೆಗೆ 60 ಅಡಿ ಅಗಲದ ರಸ್ತೆ ನಿರ್ಮಾಣ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು. ಇದಕ್ಕೆ ಉತ್ತರಿಸಿದ ಆರ್ವಿಡಿ, ಎಲ್ಲದಕ್ಕೂ ಪಾಲಿಕೆ ಸರಕಾರದ ಮೇಲೆ ಅವಲಂಬನೆ ಆಗಬಾರದು. ಯುಜಿಡಿ, ವಾಟರ್ಲೈನ್ ಸ್ಥಳಾಂತರಕ್ಕೆ ಬಜೆಟ್ನಲ್ಲಿ ಹಣ ಮೀಸಲಿಡಿ. ನಗರಾಭಿವೃದ್ಧಿಗೆ ಯೋಜನೆ ಹಾಕಿಕೊಳ್ಳಿ ಎಂದು ಸೂಚಿಸಿದರು.
ಕೃಷಿ ಚಟುವಟಿಕೆ ಉತ್ತೇಜಿಸಿ
ಮುಂಗಾರು ವಿಳಂಬವಾಗಿರುವುದರಿಂದ ರೈತರಿಗೆ ಪರ್ಯಾಯ ಬೆಳೆ ಯೋಜನೆ ಅಳವಡಿಸಿಕೊಂಡು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಉತ್ತೇಜನ ನೀಡಿ. ಅಗತ್ಯವಿರುವ ಬೀಜ, ರಸಗೊಬ್ಬರ, ಕೀಟನಾಶಕಗಳಿಗೆ ಕೊರತೆಯಾಗದಂತೆ ರೈತರಿಗೆ ಪೂರೈಸಲು ಸಮರ್ಪಕ ಸಿದ್ಧತೆ ಮಾಡಿಕೊಳ್ಳಿ ಎಂದು ಸಚಿವರು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಬಾಕಿ ಇರುವ ಬೆಳೆ ವಿಮೆ, ಬೆಳೆ ಪರಿಹಾರ ವಿತರಣೆಗೆ ತ್ವರಿತ ಕ್ರಮ ಕೈಗೊಳ್ಳಬೇಕು. ಕಳೆದ ಸಾಲಿನಲ್ಲಿ ಜಿಲ್ಲೆಗೆ 3 ಸಾವಿರ ಕೃಷಿಹೊಂಡಗಳ ಗುರಿ ನಿಗದಿಪಡಿಸಲಾಗಿತ್ತು. ಹೆಚ್ಚುವರಿಯಾಗಿ ಬೇಡಿಕೆ ಸಲ್ಲಿಸಿದ 1300 ರೈತರಿಗೂ ಕೃಷಿಹೊಂಡಗಳನ್ನು ಮಂಜೂರು ಮಾಡಿ ,ನಿರ್ಮಿಸಿ ಕೊಡಲಾಗಿದೆ. ಜಿಲ್ಲೆಯಲ್ಲಿ ಮೇವು ಬ್ಯಾಂಕುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಕುಂದಗೋಳ ತಾಲೂಕಿನ ಗುಡಗೇರಿಯಲ್ಲಿ ಬರುವ ಜೂನ್ 18 ರೊಳಗಾಗಿ ಮತ್ತೊಂದು ಮೇವು ಬ್ಯಾಂಕ್ ಆರಂಭಿಸಬೇಕು ಎಂದು ಸಚಿವರು ಸೂಚಿಸಿದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಹಿರೇಪೇಟೆ,ಅಕ್ಕಿಹೊಂಡ ಮತ್ತಿತರ ಪ್ರದೇಶಗಳಲ್ಲಿ ಲಾರಿಗಳನ್ನು ಅನಿಯತವಾಗಿ ಬಿಡುವುದು ಅವೈಜ್ಞಾನಿಕವಾಗಿ ನಿಲುಗಡೆ ಮಾಡುವುದರಿಂದ ಸಂಚಾರ ವ್ಯವಸ್ಥೆಗೆ ಅಡಚಣೆಯಾಗುತ್ತಿದೆ. ಇದರ ಪರಿಹಾರಕ್ಕೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಇನ್ನು ನವಲಗುಂದ ಪಟ್ಟಣದ ಮೂಲಕ ಹಾಯ್ದುಹೋಗುವ ರಾಜ್ಯ ಹೆದ್ದಾರಿಗೆ ಬೈಪಾಸ್ ರಸ್ತೆ ನಿರ್ಮಿಸುವ ಕಾರ್ಯ ಕುಂಠಿತವಾಗಿರುವ ಬಗ್ಗೆ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ವಿವರಣೆ ಕೇಳಿದರು.
ಇದಕ್ಕೆ ಉತ್ತರಿಸಿದ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎನ್.ಎಂ.ಕುಲಕರ್ಣಿ, ನವಲಗುಂದ,ನರಗುಂದ ಪಟ್ಟಣಗಳಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ವಿಸ್ತೃತ ಯೋಜನಾ ವರದಿ ತಯಾರಿಸಿ, ಪ್ರಸ್ತಾವನೆ ಸಲ್ಲಿಸಲಾಗಿದೆ.ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಮಂಜೂರಾತಿ ಸಿಗಬೇಕಾಗಿದೆ ಎಂದರು.
ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಕೆಂಪೇಗೌಡ ಪಾಟೀಲ, ಉಪಾಧ್ಯಕ್ಷ ಶಿವಾನಂದ ಕರಿಗಾರ, ಜಿಲ್ಲಾಧಿಕಾರಿ ಎಂ.ದೀಪಾ , ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತ ಮತ್ತಿತರರು ಇದ್ದರು.
ಎಪಿಎಂಸಿಗಳಿಗೆ ವರ್ತಕರ ಸ್ಥಳಾಂತರಕ್ಕೆ ಗಡವು
ಹು-ಧಾ ಅವಳಿ ನಗರಗಳ ವರ್ತಕರಿಗೆ ನೂತನ ಎಪಿಎಂಸಿ ಪ್ರಾಂಗಣಗಳಲ್ಲಿ ಸೌಲಭ್ಯಗಳಿದ್ದರೂ ಕೆಲವು ವ್ಯಾಪಾರಿಗಳು ಚಿಲ್ಲರೆ ವ್ಯಾಪಾರದ ಅನುಮತಿ ಪಡೆದು ಹಳೆಯ ಮಾರುಕಟ್ಟೆಗಳಲ್ಲಿ ವಹಿವಾಟು ಮುಂದುವರಿಸಿದ್ದಾರೆ. ವಾಸ್ತವವಾಗಿ ಅವರು ಸಗಟು ವ್ಯಾಪಾರ ಮಾಡುತ್ತಿದ್ದಾರೆ. ಅವರಿಗೆಲ್ಲ 30 ದಿನ ಕಾಲಾವಕಾಶ ನೀಡಿ ವ್ಯಾಪಾರವನ್ನು ಸ್ಥಳಾಂತರಿಸಲು ಸೂಚಿಸಬೇಕು. ಇಲ್ಲದಿದ್ದರೆ ಜಿಲ್ಲಾಡಳಿತ ಹಾಗೂ ಪೊಲೀಸರ ನೆರವು ಪಡೆದು ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಸಚಿವ ದೇಶಪಾಂಡೆ ಅವರು ಕೃಷಿ ಮಾರುಕಟ್ಟೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಹುಬ್ಬಳ್ಳಿ ಅಮರಗೋಳದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣವು ಏಷ್ಯಾದಲ್ಲಿಯೇ ಅತಿದೊಡ್ಡದಾಗಿದೆ, ಆದರೆ ನಗರದ ಹಳೆ ಮಾರುಕಟ್ಟೆಯಲ್ಲಿ ಇರುವ ವರ್ತಕರನ್ನು ಸ್ಥಳಾಂತರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದರು. ಇನ್ನು ಧಾರವಾಡ ಎಪಿಎಂಸಿಗೂ ತರಕಾರಿ ಮಾರುಕಟ್ಟೆ ಸ್ಥಳಾಂತರಗೊಳ್ಳುತ್ತಿಲ್ಲ ಎಂದು ಜನಪ್ರತಿನಿಧಿಗಳು ಹೇಳಿದರು. ಆಗ 30 ದಿನಗಳ ಗಡವು ನೀಡಿದ ಆರ್ವಿಡಿ ಇದು ತುರ್ತಾಗಿ ಆಗಲೇಬೇಕು ಎಂದು ಸೂಚನೆ ನೀಡಿದರು.