ಆ್ಯಪ್ನಗರ

ಯೋಗೇಶ್‌ ಗೌಡ ಹತ್ಯೆ ಮುಚ್ಚಿಹಾಕುವ ಹುನ್ನಾರ: ಶೆಟ್ಟರ್‌

ಯೋಗಿಶ್ ಗೌಡ ಕೊಲೆ‌ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ. ಅವರ ಪತ್ನಿ ಮಲ್ಲಮ್ಮ ಮೇಲೆ‌ ಒತ್ತಡ ಹಾಕಿ ಹೇಳಿಕೆ‌ ಕೊಡಿಸುತ್ತಿದ್ದಾರೆ. ಆಕೆಯುನ್ನು ಅಪಹರಿಸಿ, 14 ದಿನ ಗೌಪ್ಯ ಸ್ಥಳದಲ್ಲಿ ಇಟ್ಟು ಒತ್ತಡ ಹಾಕಿದ್ದಾರೆ ಎಂದು ಬಿಜೆಪಿ ಮುಖಂಡ ಜಗದೀಶ್‌ ಶೆಟ್ಟರ್‌ ದೂರಿದ್ದಾರೆ.

Vijaya Karnataka Web 16 Dec 2017, 3:40 pm
ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗಿಶ್ ಗೌಡ ಕೊಲೆ‌ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ. ಅವರ ಪತ್ನಿ ಮಲ್ಲಮ್ಮ ಮೇಲೆ‌ ಒತ್ತಡ ಹಾಕಿ ಹೇಳಿಕೆ‌ ಕೊಡಿಸುತ್ತಿದ್ದಾರೆ. ಆಕೆಯುನ್ನು ಅಪಹರಿಸಿ, 14 ದಿನ ಗೌಪ್ಯ ಸ್ಥಳದಲ್ಲಿ ಇಟ್ಟು ಒತ್ತಡ ಹಾಕಿದ್ದಾರೆ ಎಂದು ಬಿಜೆಪಿ ಮುಖಂಡ ಜಗದೀಶ್‌ ಶೆಟ್ಟರ್‌ ದೂರಿದ್ದಾರೆ.
Vijaya Karnataka Web cm try to close yogesh gowda murder case
ಯೋಗೇಶ್‌ ಗೌಡ ಹತ್ಯೆ ಮುಚ್ಚಿಹಾಕುವ ಹುನ್ನಾರ: ಶೆಟ್ಟರ್‌


ಹತ್ಯೆಯ ಕುರಿತು ಸೋದರ ಗುರುನಾಥ ಗೌಡ ದೂರು ಕೊಟ್ಟೂರು ಪೊಲೀಸರು ಎಐಆರ್‌ ದಾಖಲಿಸಿಲ್ಲ. ಮಲ್ಲಮ್ಮ ಯಾವ ಒತ್ತಡಕ್ಕೆ ಮಣಿದು ಹೇಳಿಕೆ ನೀಡುತ್ತಿದ್ದಾರೆ ಎಂಬುದು ಬಯಲಾಗಬೇಕು ಎಂದರು. ಈ ಹಿಂದೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ, ಸಚಿವರ ವಿನಯ್ ಕುಲಕರ್ಣಿ ಮೇಲೆ ಸಂಶಯ ವ್ಯಕ್ತಪಡಿಸಿ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು. ಸಿದ್ದರಾಮಯ್ಯ ಅವರಿಗೆ ಅಂತ್ಯಕಾಲ‌ ಬಂದಿದೆ.ಇದು ಅವರ ಕೊನೆಯ ಚುನಾವಣೆ. ಮಂದೆ ಅಧಿಕಾರಕ್ಕೆ‌ ಬರುವುದಿಲ್ಲ. ಭಂಡತನದಿಂದ, ಸೊಕ್ಕಿನಿಂದ ಮಾತನಾಡುತ್ತಿದ್ದಾರೆ. ಇದು ಅಂತ್ಯವಾಗಲಿದೆ ಎಂದು ಶೆಟ್ಟರ್‌ ಹೇಳಿದರು.

ಐಜಿಪಿ ನಿಂಬಾಳ್ಕರ್ ಹೆಂಡಿತಿ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿ. ನಿಂಬಾಳ್ಕರ್ ಮನೆಮನೆಗೆ ಕಾಂಗ್ರೆಸ್ ಪ್ರಚಾರ ಮಾಡುತ್ತಿದ್ದಾರೆ ಎಂದರು. ಪರಿವರ್ತನಾ ಯಾತ್ರೆರಾಜ್ಯದಾದ್ಯಂತ ಯಶಸ್ವಿಯಾಗಿ ನಡೆದಿದೆ. 'ನವ ಕರ್ನಾಟಕ ನಿರ್ಮಾಣ' ಯಾತ್ರೆ ನಾವು ಹೇಳಿದ್ದು, ಈಗ ಸಿಎಂ ಅದನ್ನೇ ಬಳಸಿಕೋಂಡು ಯಾತ್ರೆ ಮಾಡುತ್ತಿದ್ದಾರೆ. ಮೊದಲು ಯಾತ್ರೆ ಮಾಡುವುದಿಲ್ಲ ಎಂದು ಹೇಳಿದ್ದರು.

ನಮ್ಮ ಯಾತ್ರೆ, ಬಳಿಕ ವಿಚಲಿತರಾಗಿ ಸಿಎಂ ಯಾತ್ರೆ ಮಾಡುತ್ತಿದ್ದಾರೆ. ಈಗ ನವ ಕರ್ನಾಟಕ ನಿರ್ಮಾಣ ಮಾಡುವುದಾದರೆ ನಾಲ್ಕೂವರೆ ವರ್ಷ ಮಾಡಿದ್ದು ಏನು ಎಂದು ಪ್ರಶ್ನಿಸಿದರು. ನಮ್ಮ ಅವಧಿಯಲ್ಲಿ ನೀಡಿದ ಅನುದಾನದ ಕಾರ್ಯಕ್ರಮ ಉದ್ಘಾಟಿಸಲು ಈಗ ಬರುತ್ತಿದ್ದಾರೆ. ಪಾಲಿಕೆ ನಿವೃತ್ತ ನೌಕರ ಪಿಂಚಣಿ ನೀಡಲು ಸರಕಾರದ ಬಳಿ ಹಣ ಇಲ್ಲ. ಖಜಾನೆ ದಿವಾಳಿಯಾಗಿದೆ. ಮುಖ್ಯಮಂತ್ರಿ ಜಿಲ್ಲೆಗೆ ಬರುವ ತಿಳಿದು ಅರೆ ಬರೆ ಕಾಮಗಾರಿ ಮಾಡಲಾಗುತ್ತಿದೆ. ಹುಬ್ಬಳ್ಳಿ ಧಾರವಾಡ ಕುಡಿಯವ ನೀರಿನ ಸಮಸ್ಯೆ ಪರಿಹರಿಸುವ ಯೋಜನೆಗೆ ಇಪ್ಪತ್ತನಾಲ್ಕು ಕೋಟಿ ನೀಡಲು ಗತಿ ಇಲ್ಲ. ಇದೊಂದು ಬೋಗಸ್, ಸುಳ್ಳು ಹೇಳುವ ಸಿದ್ದರಾಮಯ್ಯ ಸರಕಾರ ಎಂದು ಶೆಟ್ಟರ್‌ ಟೀಕಿಸಿದರು.

ಬೆಳೆ ವಿಮೆ ಹಣ ಬಿಡುಗಡೆ ಮಾಡದೆ ರೈತರಿಗೆ ಮೋಸ ಮಾಡುತ್ತಿದ್ದಾರೆ. ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿಗೆ ಬಿಡುಗಡೆ ಮಾಡಿದ‌ ಹಣ ಬಗ್ಗೆ ಶ್ವೇತ ಪತ್ರ ಹೊರಡಿಸಿ. ಎಷ್ಟು ಜನರ ನಿರುದ್ಯೋಗಿ ಯುವಕರ ಉದ್ಯೋಗ ಕೊಟ್ಟಿದ್ದೀರಿ ಎಂಬುದನ್ನು ರಾಜ್ಯದ ಜನರ‌ ಮುಂದಿಡಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪರೇಶ್ ಮೆಸ್ತಾ ಹತ್ಯೆಯ ಬಳಿಕ‌ ನಡೆದ ಹಿಂಸಾಚಾರ ನಿಯಂತ್ರಣ ಮಾಡಲು ಆಗಲಿಲ್ಲ. ಪ್ರತಿಭಟನೆ ನಿರತರ ಮೇಲೆ‌ ಕಲ್ಲು ತೂರಿ, ಲಾಠ ಚಾರ್ಜ್ ಮಾಡಿ ಜನರನ್ನು ಕೆರಳಿಸಲಾಗಿದೆ. ಮನೆಯಲ್ಲಿ ಕುಳಿತವರನ್ನು ಕರೆತಂದು ಪ್ರಕರಣ ದಾಖಲಿಸಲಾಗಿದೆ.ಜೈಲಿನಲ್ಲಿ ಇರುವವರ ವಿರುದ್ಧ ಮತ್ತೆ ಕೇಸ್ ಹಾಕಲಾಗುತ್ತಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ