ಆ್ಯಪ್ನಗರ

ಡಿವೈಡರ್‌ಗೆ ಡಿಕ್ಕಿ: ಚಿಗರಿ ಬಸ್‌ ಜಖಂ

ಹುಬ್ಬಳ್ಳಿ : ಬಿಆರ್‌ಟಿಎಸ್‌ ಚಿಗರಿ ಬಸ್‌ಗಳ ಆವಾಂತರಗಳು ಮುಂದುವರಿದಿದ್ದು, ಓವರ್‌ಟೆಕ್‌ ಮಾಡಲು ಹೋಗಿ ವಿಭಜಕದ ಮೇಲೆ ಹತ್ತಿದ ಬಸ್‌ನ ಎಡಭಾಗ ಬಹುತೇಕ ಜಖಂಗೊಂಡಿದೆ. ಬಸ್ಸಿನ ವೇಗದ ರಭಸಕ್ಕೆ ಕಬ್ಬಿಣದ ಗ್ರಿಲ್‌ ಕವಚ ಭೇದಿಸಿ ಒಳ ನುಗ್ಗಿದೆ. ಅದೃಷ್ಟವಶಾತ್‌ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

Vijaya Karnataka 19 Feb 2019, 5:00 am
ಹುಬ್ಬಳ್ಳಿ : ಬಿಆರ್‌ಟಿಎಸ್‌ ಚಿಗರಿ ಬಸ್‌ಗಳ ಆವಾಂತರಗಳು ಮುಂದುವರಿದಿದ್ದು, ಓವರ್‌ಟೆಕ್‌ ಮಾಡಲು ಹೋಗಿ ವಿಭಜಕದ ಮೇಲೆ ಹತ್ತಿದ ಬಸ್‌ನ ಎಡಭಾಗ ಬಹುತೇಕ ಜಖಂಗೊಂಡಿದೆ. ಬಸ್ಸಿನ ವೇಗದ ರಭಸಕ್ಕೆ ಕಬ್ಬಿಣದ ಗ್ರಿಲ್‌ ಕವಚ ಭೇದಿಸಿ ಒಳ ನುಗ್ಗಿದೆ. ಅದೃಷ್ಟವಶಾತ್‌ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
Vijaya Karnataka Web DRW-18SM-5
ಧಾರವಾಡ ಕೆಎಂಎಫ್‌ ಎದುರಿನ ಬಿಆರ್‌ಟಿಎಸ್‌ ಬಸ್‌ನಿಲ್ದಾಣದಲ್ಲಿ ಸೋಮವಾರ ಚಿಗರಿ ಬಸ್‌ ಕಬ್ಬಿಣದ ಗ್ರಿಲ್‌ಗೆ ಡಿಕ್ಕಿ ಹೊಡೆದಿರುವುದು.


ಈ ಘಟನೆ ಧಾರವಾಡ ಕೆಎಂಎಫ್‌ ಬಿಆರ್‌ಟಿಎಸ್‌ ಬಸ್‌ ನಿಲ್ದಾಣದಲ್ಲಿ ಸೋಮವಾರ ನಡೆದಿದೆ. ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ. ಆದರೆ ಹೊಸ ಎಸಿ ಬಸ್‌ಗಳ ಕವಚಗಳು ಕಿತ್ತು ಹೋಗಿವೆ.

ಧಾರವಾಡದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಚಿಗರಿ ಬಸ್‌ ಕೆಎಂಎಫ್‌ ಬಸ್‌ ನಿಲ್ದಾಣದಿಂದ ಹೊರಟಿತ್ತು. ಇದೇ ವೇಳೆ ಹಿಂದಿನಿಂದ ರಭಸವಾಗಿ ಬಂದ ಮತ್ತೊಂದು ಬಸ್‌ ಮೊದಲಿನ ಬಸ್‌ನ್ನು ಹಿಂದಿಕ್ಕುವ ಯತ್ನಿಸಿತು. ಇದನ್ನು ಗ್ರಹಿಸದ ಮೊದಲಿನ ಬಸ್‌ ತನ್ನ ಪಾಡಿಗೆ ಹೊರಟಿತ್ತು. ಹಿಂದಿನಿಂದ ಬಸ್‌ಗೆ ಜಾಗ ಸಿಗದೇ ಮತ್ತು ವೇಗ ನಿಯಂತ್ರಿಸಲಾಗದೇ ವಿಭಜಕದ ಮೇಲೆ ಹತ್ತಿತು. ಈ ರಭಸಕ್ಕೆ ಮುರಿದ ಕಬ್ಬಿಣ ಗ್ರಿಲ್‌ ಬಸ್‌ನ ಮುಂಭಾಗವನ್ನು ಛೇದಿಸಿ 7-8 ಅಡಿಯಷ್ಟು ಒಳಸೇರಿದೆ. ಆದರೆ, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಬಿಆರ್‌ಟಿಎಸ್‌ ಬಸ್‌ಗಳ ಅಹಿತಕರ ಘಟನೆಗಳಿಂದ ಜನರು ಆತಂಕಗೊಳ್ಳುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ