ಆ್ಯಪ್ನಗರ

ಬನ್ನಿ ತಗೊಂಡು ಬಂಗಾರವಾಗಿರೋಣ..!

ಹುಬ್ಬಳ್ಳಿ/ ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿಸಡಗರ ಸಂಭ್ರಮದಿಂದ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬ ಆಚರಣೆಗೊಂಡವು.

Vijaya Karnataka 9 Oct 2019, 5:00 am
ಹುಬ್ಬಳ್ಳಿ/ ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿಸಡಗರ ಸಂಭ್ರಮದಿಂದ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬ ಆಚರಣೆಗೊಂಡವು.
Vijaya Karnataka Web come on come on gold
ಬನ್ನಿ ತಗೊಂಡು ಬಂಗಾರವಾಗಿರೋಣ..!


ನವರಾತ್ರಿ ಅಂಗವಾಗಿ 9 ದಿನ ದೇವಿ ಆರಾಧನೆ ಮತ್ತು ಉಪಾಸನೆ ಮಾಡಿದ ಭಕ್ತರು, ವಿಜಯದಶಮಿ ದಿನದಂದು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಮನೆ ಮತ್ತು ದೇವಸ್ಥಾನಗಳಲ್ಲಿಯೂ ನವರಾತ್ರಿಯ ಅಂಗವಾಗಿ ನಡೆದ ವಿಶೇಷ ಪೂಜೆ, ಪುರಾಣ, ದಾಸವಾಣಿ, ಪಾರಾಯಣ ಸೇರಿದಂತೆ ಹತ್ತಾರು ಕಾರ್ಯಗಳು ಮಂಗಳವಾರ ಸಂಪನ್ನಗೊಂಡವು.

ಸೋಮವಾರ ಆಯುಧ ಪೂಜೆ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಸಡಗರದಿಂದಲೇ ಮನೆಯಲ್ಲಿಆಯುಧ ಮತ್ತು ವಾಹನಗಳ ಪೂಜೆ ನೆರವೇರಿಸಿದರೆ, ಕಚೇರಿ ಮತ್ತು ವಸ್ತುಗಳ ಪೂಜೆ ನಡೆಯಿತು. ವಿಶೇಷವಾಗಿ ಇಲ್ಲಿಯ ಸಿಎಆರ್‌ ಮೈದಾನದಲ್ಲಿಪೊಲೀಸರು ಸಾಮೂಹಿಕವಾಗಿ ವಾಹನ ಮತ್ತು ಆಯುಧ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿಕುಟುಂಬ ಸಮೇತರಾಗಿ ಬಂದ ಸಿಬ್ಬಂದಿ ಸಾಮೂಹಿಕ ಪೂಜೆ ಸಲ್ಲಿಸಿದರು.

ವಿಜಯದಶಮಿ ಅಂಗವಾಗಿ ಮಂಗಳವಾರ ಎಲ್ಲದೇವಸ್ಥಾನಗಳ ಅಲಂಕಾರಗೊಂಡಿದ್ದವು. ವಿಶೇಷವಾಗಿ ಗಣೇಶಪೇಟ್‌ ಕರೆಮ್ಮ ದೇವಸ್ಥಾನ, ಜನತಾ ಬಜಾರ್‌ನಲ್ಲಿರುವ ಲಕ್ಷ್ಮೇ ದೇವಿ ದೇವಸ್ಥಾನ, ತುಳಜಾಭವಾನಿ ದೇವಸ್ಥಾನ, ಕಾಳಿಕಾ ದೇವಿ, ಕರೆಯಮ್ಮ ದೇವಿ ದೇವಸ್ಥಾನ ಹಾಗೂ ಧಾರವಾಡದ ಲಕ್ಷ್ಮೇ ನಾರಾಯಣ ಮಂದಿರ, ನಗರೇಶ್ವರ ದೇವಸ್ಥಾನ, ಕರಿಯಮ್ಮ , ಗಾಳಿದುರ್ಗಮ್ಮ ದೇವಸ್ಥಾನ ಸೇರಿದಂತೆ ಬಹುತೇಕ ದೇವಸ್ಥಾನಗಳಲ್ಲಿವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಕೆಲವೆಡೆ ಸದ್ಭಕ್ತರ ನೇತೃತ್ವದಲ್ಲಿಪಲ್ಲಕ್ಕಿ ಉತ್ಸವ ಜತೆಗೆ ಅನ್ನ ಸಂತರ್ಪಣೆ ನಡೆಯಿತು.

ವಿಶೇಷವಾಗಿ ಇಲ್ಲಿಯ ತುಳಜಾಭವಾನಿ ದೇವಸ್ಥಾನ ಬಳಿ ವೃತ್ತದ ಬನ್ನಿ ಗಿಡಕ್ಕೆ, ಬನ್ನಿ ಮಾಹಾಕಾಳಿ ದೇವಸ್ಥಾನ ಮತ್ತು ಹಳೇಹುಬ್ಬಳ್ಳಿಯ ಚನ್ನಪೇಟ್‌ನಲ್ಲಿರುವ ಬನ್ನಿ ದೇವಸ್ಥಾನ, ಗೋಕುಲ್‌ ರಸ್ತೆಯ ಬನ್ನಿ ದೇವಸ್ಥಾನ ಜನ ಸಾಗರವೇ ಹರಿದು ಬಂದಿತ್ತು. ಬೆಳಗ್ಗೆ ಬನ್ನಿ ಗಿಡದತ್ತ ಭಕ್ತರು ಬನ್ನಿ ಮೂಡಿದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಪರಸ್ಪರ ಬನ್ನಿ ನೀಡಿ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮದಿಂದ ಹಬ್ಬ ಆಚರಣೆ ಮಾಡಿದರು. ಉತ್ತರ ಕರ್ನಾಟಕದಲ್ಲಿಭೀಕರ ಪ್ರವಾಹ ಹಿನ್ನೆಲೆಯಲ್ಲಿಮೂರು ಸಾವಿರ ಮಠದಿಂದ ನಡೆಯುತ್ತಿದ್ದ ಮೆಣೆ ಮೆರೆವಣಿಗೆ ರದ್ದುಪಡಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ