ಆ್ಯಪ್ನಗರ

ಮೆರವಣಿಗೆ ಮೂಲಕ ಹಾಸ್ಯ ಜಾಗೃತಿ

ಹುಬ್ಬಳ್ಳಿ :ನಗರದ ಹು-ಧಾ ಸುಹಾಸ್ಯ ಪರಿವಾರಗಳ ಒಕ್ಕೂಟ ವತಿಯಿಂದ ಇತ್ತೀಚೆಗೆ ವಿಶ್ವ ಹಾಸ್ಯ ದಿನದ ಅಂಗವಾಗಿ ಇಂದಿರಾ ಗ್ಲಾಸ್‌ ಹೌಸ್‌ದಿಂದ ಮೆರವಣಿಗೆ ಹೊರಟು ಬಸವವನದ ಮುಖಾಂತರ ಚನ್ನಮ್ಮ ವೃತ್ತದಿಂದ ಮರಳಿ ಇಂದಿರಾ ಗ್ಲಾಸ್‌ ಹೌಸ್‌ ತಲುಪಿತು.

Vijaya Karnataka 10 Jun 2018, 5:00 am
ಹುಬ್ಬಳ್ಳಿ :ನಗರದ ಹು-ಧಾ ಸುಹಾಸ್ಯ ಪರಿವಾರಗಳ ಒಕ್ಕೂಟ ವತಿಯಿಂದ ಇತ್ತೀಚೆಗೆ ವಿಶ್ವ ಹಾಸ್ಯ ದಿನದ ಅಂಗವಾಗಿ ಇಂದಿರಾ ಗ್ಲಾಸ್‌ ಹೌಸ್‌ದಿಂದ ಮೆರವಣಿಗೆ ಹೊರಟು ಬಸವವನದ ಮುಖಾಂತರ ಚನ್ನಮ್ಮ ವೃತ್ತದಿಂದ ಮರಳಿ ಇಂದಿರಾ ಗ್ಲಾಸ್‌ ಹೌಸ್‌ ತಲುಪಿತು.
Vijaya Karnataka Web comedy awareness through parade
ಮೆರವಣಿಗೆ ಮೂಲಕ ಹಾಸ್ಯ ಜಾಗೃತಿ


ಇದೇ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ವಿಶ್ವಹಾಸ್ಯ ಘೋಷಣೆಗಳನ್ನು ಕೂಗಿದರು. ನಗು ಮುಖದಿಂದ ಇದ್ದರೆ ಮನುಷ್ಯನ ಆರೋಗ್ಯ ಎಲ್ಲಾ ರೀತಿಯಲ್ಲಿ ಚೆನ್ನಾಗಿರುತ್ತದೆ. ಅದಲ್ಲದೆ ಮನುಷ್ಯಗೆ ಇದ್ದ ಬಿಪಿ, ಶುಗರ್‌, ಕಾಲು ನೋವುಗಳು ಮಾಯವಾಗುತ್ತವೆ ಆವರು ಶೀಘ್ರವಾಗಿ ಗುಣಮುಖರಾಗುತ್ತಾರೆ ಎಂಬುದು ಸಾಬೀತಾಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿದರು.

ನಂತರ ನಗರದ ಹೆಬಸೂರ ಭವನದಲ್ಲಿ ಸಾಂಸ್ಕೃತಿಕ ಹಾಗೂ ಮನರಂಜನೆ ಕಾರ್ಯಕ್ರಮ ಮಾಡುವ ಮೂಲಕ ಸಾರ್ವಜನಿಕರನ್ನು ಮನರಂಜಿಸಿದರು. ಸುಹಾಸ್ಯ ಪರಿವಾರಗಳ ಅಧ್ಯಕ್ಷ ಬಸವರಾಜ ಹೆಬಸೂರ, ಎಂ.ಎಸ್‌. ಗರಗ, ಡಾ.ಹಿರೇಗೌಡ್ರ, ಗಂಗಾಧರ ಮಾರಶಿಳ್ಳಿ, ಎಸ್‌.ಪಿ.ಹಿರೇಮಠ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ