ಆ್ಯಪ್ನಗರ

9ರಂದು ಪುಟ್ಟರಾಜ ಗವಾಯಿಗಳ ಪುಣ್ಯ ಸ್ಮರಣೋತ್ಸವ

ಹುಬ್ಬಳ್ಳಿ : ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಭಕ್ತ ಕಲಾ ವೃಂದ ಹಾಗೂ ಹುಬ್ಬಳ್ಳಿ ರಂಗಭೂಮಿ ಕಲಾವಿದರ ಸಹಯೋಗದಲ್ಲಿ ಸೆ.9ರಂದು ಮಧ್ಯಾಹ್ನ 12ಕ್ಕೆ ಜೆಸಿನಗರದ ಎಂಪ್ಲಾಯಿಸ್‌ ಹಾಲ್‌ನಲ್ಲಿ ಡಾ. ಪಂಡಿತ ಪುಟ್ಟರಾಜ ಗವಾಯಿಗಳ 9ನೇ ವರ್ಷದ ಪುಣ್ಯ ಸ್ಮರಣೋತ್ಸವವನ್ನು ಆಯೋಜಿಸಲಾಗಿದೆ ಎಂದು ಕಲಾ ವೃಂದದ ಅಧ್ಯಕ್ಷ ಚಂದ್ರಶೇಖರ ಜೆ ಹೇಳಿದರು.

Vijaya Karnataka 5 Sep 2019, 5:00 am
ಹುಬ್ಬಳ್ಳಿ : ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಭಕ್ತ ಕಲಾ ವೃಂದ ಹಾಗೂ ಹುಬ್ಬಳ್ಳಿ ರಂಗಭೂಮಿ ಕಲಾವಿದರ ಸಹಯೋಗದಲ್ಲಿ ಸೆ.9ರಂದು ಮಧ್ಯಾಹ್ನ 12ಕ್ಕೆ ಜೆಸಿನಗರದ ಎಂಪ್ಲಾಯಿಸ್‌ ಹಾಲ್‌ನಲ್ಲಿ ಡಾ. ಪಂಡಿತ ಪುಟ್ಟರಾಜ ಗವಾಯಿಗಳ 9ನೇ ವರ್ಷದ ಪುಣ್ಯ ಸ್ಮರಣೋತ್ಸವವನ್ನು ಆಯೋಜಿಸಲಾಗಿದೆ ಎಂದು ಕಲಾ ವೃಂದದ ಅಧ್ಯಕ್ಷ ಚಂದ್ರಶೇಖರ ಜೆ ಹೇಳಿದರು.
Vijaya Karnataka Web commemoration of the puttaraja gawaii on 9th
9ರಂದು ಪುಟ್ಟರಾಜ ಗವಾಯಿಗಳ ಪುಣ್ಯ ಸ್ಮರಣೋತ್ಸವ


ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಹದಿಂದಾಗಿ ಈ ಬಾರಿ ಪುಟ್ಟರಾಜ ಗವಾಯಿಗಳ ವೈಭವದ ಮೆರವಣಿಗೆ ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು. ಅಂದು ಬೆಳಗ್ಗೆ 9 ಗಂಟೆಗೆ ಶ್ರೀಗಳ ಭಾವಚಿತ್ರ ಹಾಗೂ ಪಾದುಕೆ ಪೂಜೆ, 10 ಗಂಟೆಗೆ ಸುಮಾರು 10 ಜನ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಹಾಗೂ ಕಲಾವಿದರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 12ಕ್ಕೆ ಮಣಕವಾಡದ ಶ್ರೀ ಗುರು ಅನ್ನದಾನೇಶ್ವರ ದೇವಮಂದಿರ ಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಹಾಗೂ ಕುಂದಗೋಳದ ಶ್ರೀ ಬಸವಣ್ಣ ಅಜ್ಜನವರಿಂದ ಆಶೀರ್ವಚನ ಜರುಗಲಿದೆ ಎಂದರು. ಕಲಾ ವೃಂದದ ಉಪಾಧ್ಯಕ್ಷ ಮಂಜುನಾಥ ಸಾಗರ, ಈರಣ್ಣ ಶಾನಭೋಗ, ಗುರುರಾಜ ರಾಜಂಗಳ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ