ಆ್ಯಪ್ನಗರ

ಗ್ರಾಮೀಣ ಅಭಿವೃದ್ಧಿಗೆ ಬದ್ಧ

ಧಾರವಾಡ: ರಾಷ್ಟ್ರದ ಪ್ರಮುಖ ಗ್ರಾಮೀಣ ಬ್ಯಾಂಕ್‌ಗಳ ಸಾಲಿನಲ್ಲಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಮತ್ತು ಭಾರತೀಯ ಜೀವ ವಿಮಾ ನಿಗಮವೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಮೂಲಕ ಜೀವ ವಿಮಾ ಯೋಜನೆಗಳ ಮಾರಾಟಕ್ಕೆ ಸಂಬಂಧಿಸಿದ ಒಡಂಬಡಿಕೆಯನ್ನು ನವೀಕರಿಸಿಕೊಂಡಿವೆ.

Vijaya Karnataka 16 Sep 2019, 5:00 am
ಧಾರವಾಡ: ರಾಷ್ಟ್ರದ ಪ್ರಮುಖ ಗ್ರಾಮೀಣ ಬ್ಯಾಂಕ್‌ಗಳ ಸಾಲಿನಲ್ಲಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಮತ್ತು ಭಾರತೀಯ ಜೀವ ವಿಮಾ ನಿಗಮವೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಮೂಲಕ ಜೀವ ವಿಮಾ ಯೋಜನೆಗಳ ಮಾರಾಟಕ್ಕೆ ಸಂಬಂಧಿಸಿದ ಒಡಂಬಡಿಕೆಯನ್ನು ನವೀಕರಿಸಿಕೊಂಡಿವೆ.
Vijaya Karnataka Web committed to rural development
ಗ್ರಾಮೀಣ ಅಭಿವೃದ್ಧಿಗೆ ಬದ್ಧ


ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಅಧ್ಯಕ್ಷ ಪಿ.ಗೋಪಿ ಕೃಷ್ಣ ಮಾತನಾಡಿ, ವ್ಯವಹಾರಿಕ ಉದ್ದೇಶ ಹೊರತು ಪಡಿಸಿ ಕರ್ನಾಟಕ ವಿಕಾಸ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಬದ್ಧವಾಗಿದೆ ಎಂದರು.

ಭಾರತೀಯ ಜೀವ ವಿಮಾ ನಿಗಮದ ಪ್ರಾದೇಶಿಕ ವೃತ್ತದ ಪ್ರಾದೇಶಿಕ ವ್ಯವಸ್ಥಾಪಕ ಸಂಜಯ ಭಾರ್ಗವ್‌ ಮಾತನಾಡಿ, ರಾಷ್ಟ್ರದಲ್ಲಿಜೀವ ವಿಮಾ ವ್ಯವಹಾರಕ್ಕೆ ವಿಫುಲ ಅವಕಾಶವಿದೆ ಎಂದರು.

ಭಾರತೀಯ ಜೀವ ವಿಮಾ ನಿಗಮದ ಹಿರಿಯ ವಿಭಾಗೀಯ ವ್ಯವಸ್ಥಾಪಕ ಎಚ್‌. ಕೆ.ರವಿಕಿರಣ ಮಾತನಾಡಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಗ್ರಾಮೀಣ ಪ್ರದೇಶದಲ್ಲಿಹೊಂದಿರುವ ಬಲಿಷ್ಠ ಜಾಲದಿಂದ ಉತ್ಕೃಷ್ಯ ಲಾಭದಾಯಕ ಪಾಲಿಸಿಗಳು ಜನರಿಗೆ ದೊರಕುವಂತಾಗಲಿದೆ ಎಂದರು.

ಇದೇ ವೇಳೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಮಹಾಪ್ರಬಂಧಕ ಐ.ಜಿ.ಕುಮಾರಗೌಡ ಮತ್ತು ಭಾರತೀಯ ಜೀವ ವಿಮಾ ನಿಗಮದ ಹಿರಿಯ ವಿಭಾಗೀಯ ವ್ಯವಸ್ಥಾಪಕ ಎಚ್‌.ಕೆ.ರವಿಕಿರಣ ಸಹಿ ಮಾಡಿ ಪರಸ್ಪರ ಹಸ್ತಾಂತರಿಸಿಕೊಂಡರು.

ಕೆ.ಟಿ.ಭಟ್‌, ಉಲ್ಲಾಸ ಗುನಗಾ, ಗಣಪತಿ ಭಟ್‌, ರಾಜೇಶ್‌ ಮುಧೋಳ, ಏ.ವಿ.ಕುಲಕರ್ಣಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ