ಆ್ಯಪ್ನಗರ

ಕೇಂದ್ರ ಸರಕಾರದ ಟ್ರಾಯ್‌ ನೀತಿಗೆ ಖಂಡನೆ

ಅಣ್ಣಿಗೇರಿ : ಕೇಂದ್ರ ಸರಕಾರದ ಭಾರತೀಯ ದೂರ ಸಂಚಾರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್‌ ನೀತಿಯನ್ನು ಜಾರಿ ಹಿನ್ನಲೆ ಅಣ್ಣಿಗೇರಿ ತಾಲೂಕಿನ ಕೇಬಲ್‌ ಟಿವಿ ಆಪರೇಟರ್‌ಗಳು ಟ್ರಾಯ್‌ ನೀತಿಯನ್ನು ಖಂಡಿಸಿ ಸ್ಥಳಿಯ ಗ್ರೇಡ್‌ 2 ತಹಸೀಲ್ದಾರ ಸಂತೋಷ ಅಸ್ಕಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Vijaya Karnataka 30 Dec 2018, 5:00 am
ಅಣ್ಣಿಗೇರಿ : ಕೇಂದ್ರ ಸರಕಾರದ ಭಾರತೀಯ ದೂರ ಸಂಚಾರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್‌ ನೀತಿಯನ್ನು ಜಾರಿ ಹಿನ್ನಲೆ ಅಣ್ಣಿಗೇರಿ ತಾಲೂಕಿನ ಕೇಬಲ್‌ ಟಿವಿ ಆಪರೇಟರ್‌ಗಳು ಟ್ರಾಯ್‌ ನೀತಿಯನ್ನು ಖಂಡಿಸಿ ಸ್ಥಳಿಯ ಗ್ರೇಡ್‌ 2 ತಹಸೀಲ್ದಾರ ಸಂತೋಷ ಅಸ್ಕಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
Vijaya Karnataka Web condemnation of the central governments troy policy
ಕೇಂದ್ರ ಸರಕಾರದ ಟ್ರಾಯ್‌ ನೀತಿಗೆ ಖಂಡನೆ


ಈ ಸಂಧರ್ಭದಲ್ಲಿ ಸಂಘದ ಅದ್ಯಕ್ಷ ಅಶೋಕ ಮರಕುಂಬಿ ಮಾತನಾಡಿ ಕೇಂದ್ರ ಸರಕಾರದ ಟ್ರಾಯ್‌ ನೀತಿಯಿಂದ ರಾಜ್ಯದಲ್ಲಿ ಸ್ವಯಂ ಉದ್ಯೋಗಿಗಳು ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಕೇಬಲ ಆಪರೇಟ್‌ ನಿಯಮದಿಂದ ಬದಕು ಕಟ್ಟಿಕೊಂಡು ಕುಟುಂಬದ ಜವಾಬ್ದಾರಿ ನಡೆಸುವ ವ್ಯಕ್ತಿ ಜೀವನ ಸಾಗಿಸಲು ಕಷ್ಟಕರವಾಗುತ್ತದೆ ಎಂದರು. ಅಲ್ಲದೆ ಗ್ರಾಹಕರಿಗೂ ಹೆಚ್ಚಿನ ಹೊರೆ ಆಗಲಿದೆ ಇದರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮದ್ಯ ಪ್ರವೇಶಿಸಿ ಈ ನೀತಿ ಹಿಂಪಡೆದು ಕೇಬಲ್‌ ಟಿವಿ ಆಪರೇಟ್‌ರಗಳಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಮಾಡಬೇಕೆಂದು ಮನವಿ ಪತ್ರದ ಮೂಲಕ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಟ್ರಾಯ್‌ ನೀತಿಯನ್ನು ಹಿಂಪಡೆಯದೆ ಹೋದರೆ ಮುಂಬರುವ ದಿನಗಳಲ್ಲಿ ವಿವಿಧ ಸಂಘ ಸಂಸ್ಥೆಗಳೊಂದಿಗೆ ಉಪವಾಸ ಸತ್ಯಾಗ್ರಹ ಹಾಗೂ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಸೋಮಶೇಖರ ನರಗುಂದಮಠ, ಅಜ್ಜು ಕಾಗದಗಾರ, ಪ್ರಕಾಶ ಮೇಟಿ, ಮಂಜುನಾಥ ಬಸಾಪೂರ, ಮಹೇಶ ಅಂಗಡಿ, ಖಾದರ ನಧಾಪ, ನಾಗರಾಜ ಕಟ್ಟಿ ತಾಲೂಕಿನಿಂದ ಹಲವಾರು ಕೇಬಲ್‌ ಆಪರೇಟ್‌ರ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ