ಧಾರವಾಡ : ಕುಮಾರೇಶ್ವರ ನಗರದ ಬಹುಮಹಡಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ನಾಲ್ವರು ಕಟ್ಟಡ ಮಾಲೀಕರಿಗೆ ಬುಧವಾರ ಷರತ್ತುಬದ್ಧ ಜಾಮೀನು ನೀಡಿರುವ ನಗರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಟ್ಟಡದ ಆರ್ಕೆಟಿಕ್ ಎಂಜನಿಯರ್ ಅವರ ಜಾಮೀನು ಅರ್ಜಿ ತಿರಸ್ಕರಿಸಿದೆ.
19 ಜನರನ್ನು ಬಲಿ ಪಡೆದ ಕಟ್ಟಡ ಕುಸಿತ ಪ್ರಕರಣ ಗಂಭೀರವಾಗಿತ್ತು. ಹೀಗಾಗಿ ಇದರ ಮಾಲೀಕರು ಹಾಗೂ ಎಂಜನಿಯರ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದರು. ಹೀಗಾಗಿ ಬಂಧಿತ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ 1ನೇ ಆರೋಪಿ ಗಂಗಣ್ಣ ಶಿಂತ್ರಿ, 2ನೇ ಆರೋಪಿ ಬಸವರಾಜ ನಿಗದಿ, 3ನೇ ಆರೋಪಿ ಮಹಾಬಲೇಶ್ವರ ಪುರದನಗುಡಿ, 4ನೇ ಆರೋಪಿ ರವಿ ಸಬರದ ಅವರಿಗೆ ಜಾಮೀನು ನೀಡಿದೆ. ಉಳಿದಂತೆ 5ನೇ ಆರೋಪಿ ಕಟ್ಟಡದ ಎಂಜನಿಯರ್ ವಿವೇಕ ಪವಾರ ಅವರ ಜಾಮೀನು ಅರ್ಜಿ ತಿರಸ್ಕರಿಸಿದೆ.
ಜಾಮೀನು ಪಡೆದ 4 ಆರೋಪಿಗಳಿಗೆ 10ಲಕ್ಷ ರೂ.ಶ್ಯುರಿಟಿ, ಇಬ್ಬರು ಜಾಮೀನುದಾರರು ಜಾಮೀನು ನೀಡಬೇಕು. ಧಾರವಾಡ , ಬೆಳಗಾವಿ ಜಿಲ್ಲೆ ವ್ಯಾಪ್ತಿಬಿಟ್ಟು ಹೋರಗೆ ಹೋಗುವಂತಿಲ್ಲ ಎಂದು ನ್ಯಾಯಾಧೀಶ ಎಚ್. ಸಿ.ಶ್ಯಾಮ್ಪ್ರಸಾದ ಷರತ್ತುಗಳನ್ನು ವಿಧಿಸಿದ್ದಾರೆ. ನಾಲ್ವರು ಆರೋಪಿಗಳಿಗೆ ಆರೋಗ್ಯ ಹಿನ್ನೆಲೆಯಲ್ಲಿ ಜಾಮೀನು ದೊರೆತಿದೆ ಎಂದು ನ್ಯಾಯವಾದಿಗಳು ವಿಕ ಕ್ಕೆ ತಿಳಿಸಿದ್ದಾರೆ.
ಮಾ.19ರಂದು ಕುಮಾರೇಶ್ವರ ನಗರದ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿದು 19 ಜನರು ಸಾವಿಗೀಡಾಗಿದ್ದರು. 54 ಜನರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದ ಪರವಾಗಿ ಗಿರಿಜಾ ತಮ್ಮಿನಾಳ, ಆರೋಪಿಗಳ ಪರವಾಗಿ ರಾಜಾವೆಂಕಟಪ್ಪನಾಯಕ, ಕೆ.ಎಸ್.ಪಾಟೀಲ, ಕೆ.ಎಲ್. ಪಾಟೀಲ,ಯಲಿಗಾರ ವಾದ ಮಂಡಿಸಿದ್ದರು.
19 ಜನರನ್ನು ಬಲಿ ಪಡೆದ ಕಟ್ಟಡ ಕುಸಿತ ಪ್ರಕರಣ ಗಂಭೀರವಾಗಿತ್ತು. ಹೀಗಾಗಿ ಇದರ ಮಾಲೀಕರು ಹಾಗೂ ಎಂಜನಿಯರ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದರು. ಹೀಗಾಗಿ ಬಂಧಿತ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ 1ನೇ ಆರೋಪಿ ಗಂಗಣ್ಣ ಶಿಂತ್ರಿ, 2ನೇ ಆರೋಪಿ ಬಸವರಾಜ ನಿಗದಿ, 3ನೇ ಆರೋಪಿ ಮಹಾಬಲೇಶ್ವರ ಪುರದನಗುಡಿ, 4ನೇ ಆರೋಪಿ ರವಿ ಸಬರದ ಅವರಿಗೆ ಜಾಮೀನು ನೀಡಿದೆ. ಉಳಿದಂತೆ 5ನೇ ಆರೋಪಿ ಕಟ್ಟಡದ ಎಂಜನಿಯರ್ ವಿವೇಕ ಪವಾರ ಅವರ ಜಾಮೀನು ಅರ್ಜಿ ತಿರಸ್ಕರಿಸಿದೆ.
ಜಾಮೀನು ಪಡೆದ 4 ಆರೋಪಿಗಳಿಗೆ 10ಲಕ್ಷ ರೂ.ಶ್ಯುರಿಟಿ, ಇಬ್ಬರು ಜಾಮೀನುದಾರರು ಜಾಮೀನು ನೀಡಬೇಕು. ಧಾರವಾಡ , ಬೆಳಗಾವಿ ಜಿಲ್ಲೆ ವ್ಯಾಪ್ತಿಬಿಟ್ಟು ಹೋರಗೆ ಹೋಗುವಂತಿಲ್ಲ ಎಂದು ನ್ಯಾಯಾಧೀಶ ಎಚ್. ಸಿ.ಶ್ಯಾಮ್ಪ್ರಸಾದ ಷರತ್ತುಗಳನ್ನು ವಿಧಿಸಿದ್ದಾರೆ. ನಾಲ್ವರು ಆರೋಪಿಗಳಿಗೆ ಆರೋಗ್ಯ ಹಿನ್ನೆಲೆಯಲ್ಲಿ ಜಾಮೀನು ದೊರೆತಿದೆ ಎಂದು ನ್ಯಾಯವಾದಿಗಳು ವಿಕ ಕ್ಕೆ ತಿಳಿಸಿದ್ದಾರೆ.
ಮಾ.19ರಂದು ಕುಮಾರೇಶ್ವರ ನಗರದ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿದು 19 ಜನರು ಸಾವಿಗೀಡಾಗಿದ್ದರು. 54 ಜನರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದ ಪರವಾಗಿ ಗಿರಿಜಾ ತಮ್ಮಿನಾಳ, ಆರೋಪಿಗಳ ಪರವಾಗಿ ರಾಜಾವೆಂಕಟಪ್ಪನಾಯಕ, ಕೆ.ಎಸ್.ಪಾಟೀಲ, ಕೆ.ಎಲ್. ಪಾಟೀಲ,ಯಲಿಗಾರ ವಾದ ಮಂಡಿಸಿದ್ದರು.