ಆ್ಯಪ್ನಗರ

ಬಿಎಸ್‌ವೈ ರಾರ‍ಯಲಿಯಲ್ಲಿ ಕಾಂಗ್ರೆಸ್‌ಗೆ ಜೈಕಾರ!

ಹುಬ್ಬಳ್ಳಿ : ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ಬಿ.ಎಸ್‌. ಯಡಿಯೂರಪ್ಪ ಪ್ರಚಾರ ರಾರ‍ಯಲಿ ಪ್ರಾರಂಭದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಪರಸ್ಪರ ಕಿತ್ತಾಡಿಕೊಂಡ ಪ್ರಸಂಗ ಭಾನುವಾರ ನಡೆಯಿತು.

Vijaya Karnataka 14 May 2019, 5:00 am
ಹುಬ್ಬಳ್ಳಿ : ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ಬಿ.ಎಸ್‌. ಯಡಿಯೂರಪ್ಪ ಪ್ರಚಾರ ರಾರ‍ಯಲಿ ಪ್ರಾರಂಭದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಪರಸ್ಪರ ಕಿತ್ತಾಡಿಕೊಂಡ ಪ್ರಸಂಗ ಭಾನುವಾರ ನಡೆಯಿತು.
Vijaya Karnataka Web congratulates congress in bsp rally
ಬಿಎಸ್‌ವೈ ರಾರ‍ಯಲಿಯಲ್ಲಿ ಕಾಂಗ್ರೆಸ್‌ಗೆ ಜೈಕಾರ!


ಯಡಿಯೂರಪ್ಪ ಅವರ ಪ್ರಚಾರ ರಾರ‍ಯಲಿ ಪ್ರಾರಂಭವಾದ ಬಳಿಕ ಬಡಿಗೇರ ಓಣಿ ಮಾರ್ಗವಾಗಿ ಹೋಗಬೇಕೆಂದು ಕೆಲ ಕಾರ‍್ಯಕರ್ತರು ಒತ್ತಾಯಿಸಿದರು. ಆದರೆ ಇದಕ್ಕೆ ಒಪ್ಪದ ಇತರ ಕಾರ್ಯಕರ್ತರು ಕಾಮನಬೈಲು ಮಾರ್ಗವಾಗಿ ತೆರಳುವಂತೆ ಪಟ್ಟು ಹಿಡಿದರು. ಈ ಸಂದರ್ಭ ಗೊಂದಲದ ವಾತವರಣ ನಿರ್ಮಾಣವಾಗಿತ್ತು.

ಒಂದು ವೇಳೆ ರಾರ‍ಯಲಿ ಕಾಮನಬೈಲಿಗೆ ತೆರಳಿದರೆ ಕಾಂಗ್ರೆಸ್‌ಗೆ ಜೈಕಾರ ಹೇಳುವುದಾಗಿ ಕೆಲ ಕಾರ್ಯಕರ್ತರು ತಮ್ಮ ಮುಖಂಡರಿಗೆ ಬೆದರಿಕೆ ಹಾಕಿದರು. ಹೀಗಾಗಿ ಕಾಮನಬೈಲಿಗೆ ಹೋಗಬೇಕಾದ ರಾರ‍ಯಲಿ ಮ್ಯಾಗೇರಿ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ವೇಳೆಯೂ ಕೆಲ ಕಾರ್ಯಕರ್ತರು ಕಾಂಗ್ರೆಸ್‌ಗೆ ಜೈಕಾರ ಹಾಕಿದ ಘಟನೆ ಪಕ್ಷದ ಮುಖಂಡರಿಗೆ ಮುಜುಗರ ಉಂಟು ಮಾಡಿತು.

ಪ್ರಚಾರ ರಾರ‍ಯಲಿ ಸಭೆ ನಂತರ ಯಡಿಯೂರಪ್ಪ, ಸಂಸದ ಪ್ರಹ್ಲಾದ ಜೋಶಿ, ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ಶಾಸಕರು ಮತ್ತು ಮುಖಂಡರು ಬಿಎಸ್‌ವೈ ಅಭಿಮಾನಿ ಮಂಜುನಾಥ ಈಟಿ ಮನೆಯಲ್ಲಿ ಮಧ್ಯಾಹ್ನದ ಭೋಜನ ಸವಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ