ಆ್ಯಪ್ನಗರ

ಕಾಂಗ್ರೆಸ್‌ ಜಗಳದಿಂದ ರಾಜ್ಯದ ಮಾನ ಹರಾಜು: ಮಾಜಿ ಸಿಎಂ ಶೆಟ್ಟರ್‌

ಹುಬ್ಬಳ್ಳಿ :ಕಾಂಗ್ರೆಸ್‌ನ ಮನೆ ಜಗಳದಿಂದ ರಾಜ್ಯದ ಮಾನ ಮರ್ಯಾದೆ ಹರಾಜಾಗುತ್ತಿದೆ. ಕಿತ್ತಾಟ ಬಿಟ್ಟು ರಾಜ್ಯದ ಅಭಿವೃದ್ಧಿ ಮಾಡಲಿ ಇಲ್ಲವೇ ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಗುಡುಗಿದರು.

Vijaya Karnataka 8 Sep 2018, 4:45 pm
ಹುಬ್ಬಳ್ಳಿ :ಕಾಂಗ್ರೆಸ್‌ನ ಮನೆ ಜಗಳದಿಂದ ರಾಜ್ಯದ ಮಾನ ಮರ್ಯಾದೆ ಹರಾಜಾಗುತ್ತಿದೆ. ಕಿತ್ತಾಟ ಬಿಟ್ಟು ರಾಜ್ಯದ ಅಭಿವೃದ್ಧಿ ಮಾಡಲಿ ಇಲ್ಲವೇ ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಗುಡುಗಿದರು.
Vijaya Karnataka Web congress auctions state auction former cm shettar
ಕಾಂಗ್ರೆಸ್‌ ಜಗಳದಿಂದ ರಾಜ್ಯದ ಮಾನ ಹರಾಜು: ಮಾಜಿ ಸಿಎಂ ಶೆಟ್ಟರ್‌


ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಜನಾದೇಶ ಧಿಕ್ಕರಿಸಿ ಸರಕಾರ ರಚಿಸಿದ ಕಾಂಗ್ರೆಸ್‌-ಜೆಡಿಎಸ್‌ ಅಧಿಕಾರಕ್ಕಾಗಿ ಕಿತ್ತಾಟ ನಡೆಸುತ್ತಿದೆ. ದಿನವಿಡೀ ಮಾಧ್ಯಮಗಳಲ್ಲಿ ಇವರ ಕಿತ್ತಾಟದ ಸುದ್ದಿಯೇ ನೋಡುವಂತಾಗಿದ್ದು, ಇದರಿಂದ ಜನರು ರೋಸಿ ಹೋಗಿದ್ದಾರೆ. ಲಕ್ಷ್ಮೇ ಹೆಬ್ಬಾಳ್ಕರ್‌ ಹಾಗೂ ಜಾರಕಿಹೊಳಿ ಸಹೋದರರು ಒಂದೇ ಪಕ್ಷದವರಾಗಿದ್ದು, ಅಧಿಕಾರಕ್ಕಾಗಿ ಪರಸ್ಪರ ಕಿತ್ತಾಟ ನಡೆಸಿ ಎರಡು ಬಣಗಳಾಗಿರುವುದು ವಿಪರ್ಯಾಸ. ಅವರ ಮನೆ ಜಗಳವನ್ನು ಬೀದಿಗೆ ತಂದು, ಸಾರ್ವಜನಿಕ ಸಂಸ್ಥೆಯ ಮರ್ಯಾದೆ ಹಾಳು ಮಾಡುತ್ತಿರುವುದು ಸರಿಯಲ್ಲ. ಇವರಿಗೆ ಹೇಳುವವರು, ಕೇಳುವವರು ಯಾರೂ ಇಲ್ಲವಾಗಿದ್ದಾರೆ. ತಾವು ಮಾಡಿದ್ದೇ ಅಂತಿಮ ಎಂದು ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ'' ಎಂದು ಆರೋಪಿಸಿದರು.

''ಈ ನಡುವೆ ರಾಜ್ಯ ಅಭಿವೃದ್ಧಿಯಾಗುತ್ತಿಲ್ಲ. ಅಲ್ಲದೆ, ಒಂದು ಇಲಾಖೆಗೆ ಬಿಡುಗಡೆಗೊಂಡ ಅನುದಾನವನ್ನು ಸರಕಾರ ಯಾರಿಗೂ ಗೊತ್ತಾಗದೆ ಮತ್ತೊಂದು ಇಲಾಖೆಗೆ ವರ್ಗಾವಣೆ ಮಾಡುತ್ತಿರುವುದು ಸರಿಯಲ್ಲ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ