ಧಾರವಾಡ: ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ದಿ.ರಾಜೀವ ಗಾಂಧಿ ಪುಣ್ಯಸ್ಮರಣೆ ಅಂಗವಾಗಿ ಅವಳಿನಗರದ ಕೂಲಿ ಕಾರ್ಮಿಕರಿಗೆ ದಿನಸಿ ಪದಾರ್ಥಗಳ ಕಿಟ್ಗಳ ಜತೆಗೆ ಪ್ರತಿಯೊಬ್ಬ ಕಾರ್ಮಿಕರಿಗೆ 200 ರೂ. ಧನಸಹಾಯ ಮಾಡಲಾಯಿತು.
ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸ್ವಾತಿ ಮಾಳಗಿ ಮಾತನಾಡಿ, ದಿ.ರಾಜೀವ ಗಾಂಧಿ ಅವರ 29ನೇ ಪುಣ್ಯಸ್ಮರಣೆ ಅಂಗವಾಗಿ 29 ಕೂಲಿ ಕಾರ್ಮಿಕರಿಗೆ 200 ರೂ. ಧನಸಹಾಯ ಮಾಡಲಾಯಿತು. ರಾಜೀವ ಗಾಂಧಿಯವರ ಸಾಧನೆಗಳು ದೇಶಕ್ಕೆ ಮಾದರಿಯಾಗಿವೆ. ಅವರ ಅಧಿಕಾರ ಅವಧಿಯಲ್ಲಿನ ಕಾರ್ಯಗಳನ್ನು ಜನರು ಮೆಚ್ಚಿಕೊಂಡಿದ್ದಾರೆ ಎಂದು.
ಜಿಲ್ಲಾಯುವ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ್ ಯಲಿಗಾರ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರ ನ್ಯಾಯ ಯೋಜನೆಯನ್ನು ದೇಶದ ಎಲ್ಲಕಾರ್ಮಿಕರಿಗೆ 6 ತಿಂಗಳವರೆಗೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ ಶಲವಡಿ, ಮೈಲಾರಿ ಹೊಸಮನಿ, ಫೈಯಾಜ ಮುದಗಲ್, ಅಭಿಮನ್ಯು ರೆಡ್ಡಿ, ಇತರರು ಪಾಲ್ಗೊಂಡಿದ್ದರು.
ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸ್ವಾತಿ ಮಾಳಗಿ ಮಾತನಾಡಿ, ದಿ.ರಾಜೀವ ಗಾಂಧಿ ಅವರ 29ನೇ ಪುಣ್ಯಸ್ಮರಣೆ ಅಂಗವಾಗಿ 29 ಕೂಲಿ ಕಾರ್ಮಿಕರಿಗೆ 200 ರೂ. ಧನಸಹಾಯ ಮಾಡಲಾಯಿತು. ರಾಜೀವ ಗಾಂಧಿಯವರ ಸಾಧನೆಗಳು ದೇಶಕ್ಕೆ ಮಾದರಿಯಾಗಿವೆ. ಅವರ ಅಧಿಕಾರ ಅವಧಿಯಲ್ಲಿನ ಕಾರ್ಯಗಳನ್ನು ಜನರು ಮೆಚ್ಚಿಕೊಂಡಿದ್ದಾರೆ ಎಂದು.
ಜಿಲ್ಲಾಯುವ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ್ ಯಲಿಗಾರ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರ ನ್ಯಾಯ ಯೋಜನೆಯನ್ನು ದೇಶದ ಎಲ್ಲಕಾರ್ಮಿಕರಿಗೆ 6 ತಿಂಗಳವರೆಗೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ ಶಲವಡಿ, ಮೈಲಾರಿ ಹೊಸಮನಿ, ಫೈಯಾಜ ಮುದಗಲ್, ಅಭಿಮನ್ಯು ರೆಡ್ಡಿ, ಇತರರು ಪಾಲ್ಗೊಂಡಿದ್ದರು.