ಧಾರವಾಡ : ಧಾರವಾಡ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ಸ್ಪರ್ಧೆ ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಈ ಮಧ್ಯೆ ಕಾಂಗ್ರೆಸ್ ಪ್ರಬಲ ಅಭ್ಯರ್ಥಿ ಹುಡುಕಾಟವನ್ನು ತೆರೆಮರೆಯಲ್ಲೇ ಆರಂಭಿಸಿದೆ.
ಬಿಜೆಪಿ ತೆಕ್ಕೆಯಲ್ಲಿರುವ ಧಾರವಾಡ ಕ್ಷೇತ್ರವನ್ನು ಕಸಿಯಲು ಕೈ ಪಕ್ಷ ತಂತ್ರ ರೂಪಿಸುತ್ತಿದೆ. ಅಭ್ಯರ್ಥಿಗಳ ಆಯ್ಕೆ ಹಿತದೃಷ್ಟಿಯಿಂದ ಶಾಸಕ ಸಿ.ಎಸ್. ಶಿವಳ್ಳಿ ಅವರನ್ನು ಕೋಆಡಿನೇಟರ್ ಎಂದು ಕೆಪಿಸಿಸಿ ನೇಮಿಸಿದ್ದು, ಅವರ ನೇತೃತ್ವದಲ್ಲಿ ಆಗಲೇ ಎರಡು ಸಭೆಗಳಾಗಿವೆ. ಇನ್ನೊಂದು ವಾರದಲ್ಲಿ ಆಕಾಂಕ್ಷಿಗಳ ಪಟ್ಟಿ ಅಂತಿಮಗೊಳಿಸಲು ನಿರ್ಧರಿಸಲಾಗಿದ್ದು, ಆ ನಂತರವೇ ಹಾಲಿ ಸಂಸದ ಪ್ರಹ್ಲಾದ ಜೋಶಿ ವಿರುದ್ಧ ಸ್ಪರ್ಧಿಸುವ ಕೈ ಅಭ್ಯರ್ಥಿ ಯಾರು ಎಂಬುದು ಸ್ಪಷ್ಟವಾಗಲಿದೆ.
ಜಾತಿ, ವರ್ಸಸ್ಸು ಮಾನದಂಡ: ದಶಕಗಳಿಂದ ಕ್ಷೇತ್ರ ಕಳೆದುಕೊಂಡಿರುವ ಕಾಂಗ್ರೆಸ್ ಈ ಬಾರಿ ಶತಾಯಗತಾಯ ಇಲ್ಲಿ ಗೆಲ್ಲಲೇಬೇಕೆಂಬ ಸಂಕಲ್ಪ ತೊಟ್ಟಿದೆ. ಕೇಸರಿ ಪಡೆ ಅಭ್ಯರ್ಥಿಗೆ ತೊಡೆ ತಟ್ಟಲು ಕೈ ಪಾಳೆಯದ ಮಾಜಿ ಸಚಿವ ವಿನಯ ಕುಲಕರ್ಣಿ, ಸಂತೋಷ ಲಾಡ್, ವೀರಣ್ಣ ಮತ್ತಿಕಟ್ಟಿ, ಡಾ.ಮಹೇಶ ನಾಲವಾಡ, ನಾಗರಾಜ ಛಬ್ಬಿ, ಅನೀಲಕುಮಾರ ಪಾಟೀಲ, ಯುವ ಮುಖಂಡರಾದ ವಿಜಯ ಕುಲಕರ್ಣಿ, ಸದಾನಂದ ಡಂಗನವರ, ಶಾಕೀರ ಸನದಿ, ಲೋಹಿತ್ ನಾಯ್ಕರ್, ರಾಜಶೇಖರ ಮೆಣಸಿನಕಾಯಿ ಉತ್ಸುಕರಾಗಿದ್ದಾರೆ. ಇವರಲ್ಲಿ ಜಾತಿ ಲೆಕ್ಕಾಚಾರ ಹಾಗೂ ವೈಯಕ್ತಿಕ ವರ್ಚಸ್ಸನ್ನು ಪರಿಗಣಿಸಿ ಟಿಕೆಟ್ ನೀಡಲು ಪಕ್ಷ ತೀರ್ಮಾನಿಸಿದ್ದು, ಚಳಿಗಾಲ ಅಧಿವೇಶನ ಮುಗಿದ ಬಳಿಕ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಚುರುಕುಗೊಳ್ಳಲಿದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ರಾಜ್ಯದ ಎಲ್ಲ 28 ಕ್ಷೇತ್ರಗಳ ತಲಾ ಇಬ್ಬರು ಆಕಾಂಕ್ಷಿಗಳ ಪಟ್ಟಿ ಸಲ್ಲಿಕೆ ಆಗಿತ್ತು. ಈ ಪೈಕಿ 13 ಕ್ಷೇತ್ರಗಳಲ್ಲಿ ಕಳೆದ ಎಂಎಲ್ಎ, ಎಂಪಿ ಚುನಾವಣೆ ಸೋತವರೇ ಇದ್ದರು. ಧಾರವಾಡ ಕ್ಷೇತ್ರದಿಂದ ಮಾಜಿ ಸಚಿವ ವಿನಯ ಕುಲಕರ್ಣಿ, ಸಂತೋಷ ಲಾಡ್ ಹೆಸರು ಶಿಫಾರಸುಗೊಂಡಿತ್ತು. ಆದರೆ ಆ ಪಟ್ಟಿ ಒಪ್ಪದ ಕೆಪಿಸಿಸಿ ಪುನರ್ ಪರಿಶೀಲನೆಗೆ ಸೂಚಿಸಿತ್ತು. ಈಗ ಮತ್ತೆ ಹೊಸ ಪಟ್ಟಿ ಸಿದ್ಧಗೊಳ್ಳುತ್ತಿದ್ದು, ಆಕಾಂಕ್ಷಿಗಳ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಕೈಗೆ ಬಲ ತುಂಬುವ ಶಕ್ತಿ ಯಾರಲ್ಲಿದೆ ಎಂಬ ಹುಡುಕಾಟ ನಡೆದಿದೆ.
ಸರ್ವೆ ನಡೆಸುತ್ತಿದೆ ಎಐಸಿಸಿ: ಪ್ರತಿ ಕ್ಷೇತ್ರದಲ್ಲೂ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಸ್ಪಷ್ಟ ಸೂಚನೆ ಕೊಟ್ಟಿರುವ ಎಐಸಿಸಿ ಈ ಬಗ್ಗೆ ಎಲ್ಲ ಜಿಲ್ಲೆಗಳಲ್ಲೂ ಸರ್ವೆ ಆರಂಭಿಸಿದೆ. ರಾಜ್ಯದಲ್ಲಿ ಗುಪ್ತಚರ ಇಲಾಖೆ ನೀಡುವ ವರದಿಯನ್ನೂ ಪರಿಗಣಿಸಲಾಗುತ್ತಿದೆ. ಈ ಮಧ್ಯೆ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಬಲ್ಲವರ ಪೈಕಿ ಒಬ್ಬರಾದ ವಿನಯ ಕುಲಕರ್ಣಿ ಸ್ಪರ್ಧೆ ಬೇಡ ಎನ್ನುತ್ತಿದ್ದಾರೆ. ಹೀಗಾಗಿ ಅವರ ಸಹೋದರ ವಿಜಯ ಕುಲಕರ್ಣಿ ಆಕಾಂಕ್ಷಿಗಳಲ್ಲೊಬ್ಬರಾಗಿದ್ದಾರೆ. ಆದರೆ, ಅವರಿಗೇ ಟಿಕೆಟ್ ಕೊಟ್ಟರೆ ಉತ್ತಮ ಎಂಬ ಅಭಿಪ್ರಾಯ ಪಕ್ಷದ ಕೆಲವರದ್ದಾಗಿದ್ದರಿಂದ ವಿನಯ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿ ಹಾಗೆಯೇ ಉಳಿದುಕೊಂಡಿದೆ. ಇದರೊಟ್ಟಿಗೆ ಹಿರಿಯ ನಾಯಕ ವೀರಣ್ಣ ಮತ್ತಿಕಟ್ಟಿ ಟಿಕೆಟ್ಗೆ ಪೈಪೋಟಿ ನೀಡುತ್ತಿದ್ದಾರೆ. ಸಂತೋಷ ಲಾಡ್ ಅವರು ಟಿಕೆಟ್ ಸ್ಪರ್ಧೆಗೆ ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ಯುವ ನಾಯಕರಾದ ಸದಾನಂದ ಡಂಗನವರ ತಾವೂ ಕೂಡ ಸ್ಪರ್ಧಿಸಿ ಗೆಲ್ಲುವ ಇಂಗಿತದಲ್ಲಿದ್ದಾರೆ. ಮುಸ್ಲಿಂ ಕೋಟಾದಡಿ ಟಿಕೆಟ್ ಕೊಡುವುದಾದರೆ ಸಿ.ಎಂ. ಇಬ್ರಾಹಿಂ ಅವರಿಗೆ ಕೊಡಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ವಿಕ ಕ್ಕೆ ತಿಳಿಸಿದ್ದಾರೆ.
ರಾಜ್ಯಸಭೆ, ಎಂಎಲ್ಸಿ ಬೇಡಿಕೆ
ಧಾರವಾಡ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನೇ ಸ್ಪರ್ಧೆಗೆ ಇಳಿಸುವ ಬಗ್ಗೆ ಕೆಲವರು ಪ್ರಸ್ತಾಪಿಸಿದ್ದರು. ಆದರೆ ಇದಕ್ಕೆ ಮುಸ್ಲಿಂ ನಾಯಕರು ಒಪ್ಪಿಗೆ ನೀಡಿಲ್ಲ. ಲೋಕಸಭೆ ಚುನಾವಣೆಗೆ ಧಾರವಾಡ ಕ್ಷೇತ್ರದಿಂದ ಮುಸ್ಲಿಂರಿಗೆ ಟಿಕೆಟ್ ನೀಡುವ ಬದಲಾಗಿ ಬೇರೆ ಸಮುದಾಯದವರಿಗೆ ಕೊಡಿ. ಅವರ ಗೆಲುವಿಗೆ ನಾವು ಶ್ರಮಿಸುತ್ತೇವೆ. ಇದಕ್ಕೆ ಪರ್ಯಾಯವಾಗಿ ಮುಸ್ಲಿಂ ಸಮುದಾಯದ ಒಬ್ಬರನ್ನು ಎಂಎಲ್ಸಿ ಇಲ್ಲವೆ ರಾಜ್ಯಸಭೆಗೆ ನೇಮಿಸಿ ಎಂಬ ಬೇಡಿಕೆಯನ್ನು ಕಾಂಗ್ರೆಸ್ ವರಿಷ್ಠರ ಮುಂದಿಡಲಾಗಿದೆ ಎಂದು ಪಕ್ಷದ ಮುಸ್ಲಿಂ ನಾಯಕರೊಬ್ಬರು ವಿಕ ಕ್ಕೆ ತಿಳಿಸಿದ್ದಾರೆ.
ಹೊರಟ್ಟಿಗೆ ಟಿಕೆಟ್ ನೀಡುವ ಪ್ರಸ್ತಾವ
ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, 28 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳನ್ನು ಬಿಟ್ಟುಕೊಡಲು ಜೆಡಿಎಸ್ ಪ್ರಸ್ತಾವನೆ ಮುಂದಿಟ್ಟಿದೆ. ಮೈಸೂರ ಭಾಗದ ಕ್ಷೇತ್ರಗಳ ಮೇಲೆಯೇ ಜೆಡಿಎಸ್ ಕಣ್ಣಿದೆ. ಆದರೆ, ಅಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿರುವ ಕಾಂಗ್ರೆಸ್ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ 1ಹಾಗೂ ಬೆಳಗಾವಿ ವಿಭಾಗದ ಕಾರವಾರ, ಬೆಳಗಾವಿ, ಧಾರವಾಡ ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಡಲು ಪ್ರಸ್ತಾಪ ಮುಂದಿಟ್ಟಿದೆ. ಹೀಗಾಗಿ ಬೆಳಗಾವಿ ಇಲ್ಲವೆ ಕಾರವಾರದಲ್ಲಿ ಬಾಬಾಗೌಡ ಪಾಟೀಲ ಹಾಗೂ ಧಾರವಾಡದಲ್ಲಿ ಬಸವರಾಜ ಹೊರಟ್ಟಿ ಅವರಿಗೆ ಟಿಕೆಟ್ ನೀಡುವ ಲೆಕ್ಕಾಚಾರ ಜೆಡಿಎಸ್ನದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ತೆಕ್ಕೆಯಲ್ಲಿರುವ ಧಾರವಾಡ ಕ್ಷೇತ್ರವನ್ನು ಕಸಿಯಲು ಕೈ ಪಕ್ಷ ತಂತ್ರ ರೂಪಿಸುತ್ತಿದೆ. ಅಭ್ಯರ್ಥಿಗಳ ಆಯ್ಕೆ ಹಿತದೃಷ್ಟಿಯಿಂದ ಶಾಸಕ ಸಿ.ಎಸ್. ಶಿವಳ್ಳಿ ಅವರನ್ನು ಕೋಆಡಿನೇಟರ್ ಎಂದು ಕೆಪಿಸಿಸಿ ನೇಮಿಸಿದ್ದು, ಅವರ ನೇತೃತ್ವದಲ್ಲಿ ಆಗಲೇ ಎರಡು ಸಭೆಗಳಾಗಿವೆ. ಇನ್ನೊಂದು ವಾರದಲ್ಲಿ ಆಕಾಂಕ್ಷಿಗಳ ಪಟ್ಟಿ ಅಂತಿಮಗೊಳಿಸಲು ನಿರ್ಧರಿಸಲಾಗಿದ್ದು, ಆ ನಂತರವೇ ಹಾಲಿ ಸಂಸದ ಪ್ರಹ್ಲಾದ ಜೋಶಿ ವಿರುದ್ಧ ಸ್ಪರ್ಧಿಸುವ ಕೈ ಅಭ್ಯರ್ಥಿ ಯಾರು ಎಂಬುದು ಸ್ಪಷ್ಟವಾಗಲಿದೆ.
ಜಾತಿ, ವರ್ಸಸ್ಸು ಮಾನದಂಡ: ದಶಕಗಳಿಂದ ಕ್ಷೇತ್ರ ಕಳೆದುಕೊಂಡಿರುವ ಕಾಂಗ್ರೆಸ್ ಈ ಬಾರಿ ಶತಾಯಗತಾಯ ಇಲ್ಲಿ ಗೆಲ್ಲಲೇಬೇಕೆಂಬ ಸಂಕಲ್ಪ ತೊಟ್ಟಿದೆ. ಕೇಸರಿ ಪಡೆ ಅಭ್ಯರ್ಥಿಗೆ ತೊಡೆ ತಟ್ಟಲು ಕೈ ಪಾಳೆಯದ ಮಾಜಿ ಸಚಿವ ವಿನಯ ಕುಲಕರ್ಣಿ, ಸಂತೋಷ ಲಾಡ್, ವೀರಣ್ಣ ಮತ್ತಿಕಟ್ಟಿ, ಡಾ.ಮಹೇಶ ನಾಲವಾಡ, ನಾಗರಾಜ ಛಬ್ಬಿ, ಅನೀಲಕುಮಾರ ಪಾಟೀಲ, ಯುವ ಮುಖಂಡರಾದ ವಿಜಯ ಕುಲಕರ್ಣಿ, ಸದಾನಂದ ಡಂಗನವರ, ಶಾಕೀರ ಸನದಿ, ಲೋಹಿತ್ ನಾಯ್ಕರ್, ರಾಜಶೇಖರ ಮೆಣಸಿನಕಾಯಿ ಉತ್ಸುಕರಾಗಿದ್ದಾರೆ. ಇವರಲ್ಲಿ ಜಾತಿ ಲೆಕ್ಕಾಚಾರ ಹಾಗೂ ವೈಯಕ್ತಿಕ ವರ್ಚಸ್ಸನ್ನು ಪರಿಗಣಿಸಿ ಟಿಕೆಟ್ ನೀಡಲು ಪಕ್ಷ ತೀರ್ಮಾನಿಸಿದ್ದು, ಚಳಿಗಾಲ ಅಧಿವೇಶನ ಮುಗಿದ ಬಳಿಕ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಚುರುಕುಗೊಳ್ಳಲಿದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ರಾಜ್ಯದ ಎಲ್ಲ 28 ಕ್ಷೇತ್ರಗಳ ತಲಾ ಇಬ್ಬರು ಆಕಾಂಕ್ಷಿಗಳ ಪಟ್ಟಿ ಸಲ್ಲಿಕೆ ಆಗಿತ್ತು. ಈ ಪೈಕಿ 13 ಕ್ಷೇತ್ರಗಳಲ್ಲಿ ಕಳೆದ ಎಂಎಲ್ಎ, ಎಂಪಿ ಚುನಾವಣೆ ಸೋತವರೇ ಇದ್ದರು. ಧಾರವಾಡ ಕ್ಷೇತ್ರದಿಂದ ಮಾಜಿ ಸಚಿವ ವಿನಯ ಕುಲಕರ್ಣಿ, ಸಂತೋಷ ಲಾಡ್ ಹೆಸರು ಶಿಫಾರಸುಗೊಂಡಿತ್ತು. ಆದರೆ ಆ ಪಟ್ಟಿ ಒಪ್ಪದ ಕೆಪಿಸಿಸಿ ಪುನರ್ ಪರಿಶೀಲನೆಗೆ ಸೂಚಿಸಿತ್ತು. ಈಗ ಮತ್ತೆ ಹೊಸ ಪಟ್ಟಿ ಸಿದ್ಧಗೊಳ್ಳುತ್ತಿದ್ದು, ಆಕಾಂಕ್ಷಿಗಳ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಕೈಗೆ ಬಲ ತುಂಬುವ ಶಕ್ತಿ ಯಾರಲ್ಲಿದೆ ಎಂಬ ಹುಡುಕಾಟ ನಡೆದಿದೆ.
ಸರ್ವೆ ನಡೆಸುತ್ತಿದೆ ಎಐಸಿಸಿ: ಪ್ರತಿ ಕ್ಷೇತ್ರದಲ್ಲೂ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಸ್ಪಷ್ಟ ಸೂಚನೆ ಕೊಟ್ಟಿರುವ ಎಐಸಿಸಿ ಈ ಬಗ್ಗೆ ಎಲ್ಲ ಜಿಲ್ಲೆಗಳಲ್ಲೂ ಸರ್ವೆ ಆರಂಭಿಸಿದೆ. ರಾಜ್ಯದಲ್ಲಿ ಗುಪ್ತಚರ ಇಲಾಖೆ ನೀಡುವ ವರದಿಯನ್ನೂ ಪರಿಗಣಿಸಲಾಗುತ್ತಿದೆ. ಈ ಮಧ್ಯೆ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಬಲ್ಲವರ ಪೈಕಿ ಒಬ್ಬರಾದ ವಿನಯ ಕುಲಕರ್ಣಿ ಸ್ಪರ್ಧೆ ಬೇಡ ಎನ್ನುತ್ತಿದ್ದಾರೆ. ಹೀಗಾಗಿ ಅವರ ಸಹೋದರ ವಿಜಯ ಕುಲಕರ್ಣಿ ಆಕಾಂಕ್ಷಿಗಳಲ್ಲೊಬ್ಬರಾಗಿದ್ದಾರೆ. ಆದರೆ, ಅವರಿಗೇ ಟಿಕೆಟ್ ಕೊಟ್ಟರೆ ಉತ್ತಮ ಎಂಬ ಅಭಿಪ್ರಾಯ ಪಕ್ಷದ ಕೆಲವರದ್ದಾಗಿದ್ದರಿಂದ ವಿನಯ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿ ಹಾಗೆಯೇ ಉಳಿದುಕೊಂಡಿದೆ. ಇದರೊಟ್ಟಿಗೆ ಹಿರಿಯ ನಾಯಕ ವೀರಣ್ಣ ಮತ್ತಿಕಟ್ಟಿ ಟಿಕೆಟ್ಗೆ ಪೈಪೋಟಿ ನೀಡುತ್ತಿದ್ದಾರೆ. ಸಂತೋಷ ಲಾಡ್ ಅವರು ಟಿಕೆಟ್ ಸ್ಪರ್ಧೆಗೆ ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ಯುವ ನಾಯಕರಾದ ಸದಾನಂದ ಡಂಗನವರ ತಾವೂ ಕೂಡ ಸ್ಪರ್ಧಿಸಿ ಗೆಲ್ಲುವ ಇಂಗಿತದಲ್ಲಿದ್ದಾರೆ. ಮುಸ್ಲಿಂ ಕೋಟಾದಡಿ ಟಿಕೆಟ್ ಕೊಡುವುದಾದರೆ ಸಿ.ಎಂ. ಇಬ್ರಾಹಿಂ ಅವರಿಗೆ ಕೊಡಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ವಿಕ ಕ್ಕೆ ತಿಳಿಸಿದ್ದಾರೆ.
ರಾಜ್ಯಸಭೆ, ಎಂಎಲ್ಸಿ ಬೇಡಿಕೆ
ಧಾರವಾಡ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನೇ ಸ್ಪರ್ಧೆಗೆ ಇಳಿಸುವ ಬಗ್ಗೆ ಕೆಲವರು ಪ್ರಸ್ತಾಪಿಸಿದ್ದರು. ಆದರೆ ಇದಕ್ಕೆ ಮುಸ್ಲಿಂ ನಾಯಕರು ಒಪ್ಪಿಗೆ ನೀಡಿಲ್ಲ. ಲೋಕಸಭೆ ಚುನಾವಣೆಗೆ ಧಾರವಾಡ ಕ್ಷೇತ್ರದಿಂದ ಮುಸ್ಲಿಂರಿಗೆ ಟಿಕೆಟ್ ನೀಡುವ ಬದಲಾಗಿ ಬೇರೆ ಸಮುದಾಯದವರಿಗೆ ಕೊಡಿ. ಅವರ ಗೆಲುವಿಗೆ ನಾವು ಶ್ರಮಿಸುತ್ತೇವೆ. ಇದಕ್ಕೆ ಪರ್ಯಾಯವಾಗಿ ಮುಸ್ಲಿಂ ಸಮುದಾಯದ ಒಬ್ಬರನ್ನು ಎಂಎಲ್ಸಿ ಇಲ್ಲವೆ ರಾಜ್ಯಸಭೆಗೆ ನೇಮಿಸಿ ಎಂಬ ಬೇಡಿಕೆಯನ್ನು ಕಾಂಗ್ರೆಸ್ ವರಿಷ್ಠರ ಮುಂದಿಡಲಾಗಿದೆ ಎಂದು ಪಕ್ಷದ ಮುಸ್ಲಿಂ ನಾಯಕರೊಬ್ಬರು ವಿಕ ಕ್ಕೆ ತಿಳಿಸಿದ್ದಾರೆ.
ಹೊರಟ್ಟಿಗೆ ಟಿಕೆಟ್ ನೀಡುವ ಪ್ರಸ್ತಾವ
ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, 28 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳನ್ನು ಬಿಟ್ಟುಕೊಡಲು ಜೆಡಿಎಸ್ ಪ್ರಸ್ತಾವನೆ ಮುಂದಿಟ್ಟಿದೆ. ಮೈಸೂರ ಭಾಗದ ಕ್ಷೇತ್ರಗಳ ಮೇಲೆಯೇ ಜೆಡಿಎಸ್ ಕಣ್ಣಿದೆ. ಆದರೆ, ಅಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿರುವ ಕಾಂಗ್ರೆಸ್ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ 1ಹಾಗೂ ಬೆಳಗಾವಿ ವಿಭಾಗದ ಕಾರವಾರ, ಬೆಳಗಾವಿ, ಧಾರವಾಡ ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಡಲು ಪ್ರಸ್ತಾಪ ಮುಂದಿಟ್ಟಿದೆ. ಹೀಗಾಗಿ ಬೆಳಗಾವಿ ಇಲ್ಲವೆ ಕಾರವಾರದಲ್ಲಿ ಬಾಬಾಗೌಡ ಪಾಟೀಲ ಹಾಗೂ ಧಾರವಾಡದಲ್ಲಿ ಬಸವರಾಜ ಹೊರಟ್ಟಿ ಅವರಿಗೆ ಟಿಕೆಟ್ ನೀಡುವ ಲೆಕ್ಕಾಚಾರ ಜೆಡಿಎಸ್ನದ್ದಾಗಿದೆ ಎಂದು ಮೂಲಗಳು ತಿಳಿಸಿವೆ.