ಹುಬ್ಬಳ್ಳಿ: ನಗರದ ಕಿಮ್ಸ್ ಗೇಟ್ ಮುಂಭಾಗದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆ ನಿರ್ವಹಣೆ ವಿಚಾರದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಪದವೀಧರ ಮತಕ್ಷೇತ್ರದ ಚುನಾವಣೆ; 8 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ
ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಸಾಂಕೇತಿಕ ಧರಣಿ ಆರಂಭಿಸಿ ಕಿಮ್ಸ್ ಗೇಟ್ ಮುಂಭಾಗದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆ ನಿರ್ವಹಣೆಯಲ್ಲಿ ಪಾಲಿಕೆ ವಿಫಲವಾಗಿದೆ ಎಂದು ಆರೋಪಿಸಿ ಸಾಂಕೇತಿಕ ಪ್ರತಿಭಟನೆ ಆರಂಭಿಸಿದ್ದು, ಎಂಎಲ್ಸಿ ಶ್ರೀನಿವಾಸ ಮಾನೆ, ಆಹಾರ ನಿಗಮದ ಮಾಜಿ ಉಪಾಧ್ಯಕ್ಷ ಮೋಹನ ಅಸುಂಡಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಸಂಜೆತನಕ ನಡೆಯಲಿದೆ.
ಡಾ.ಕಣವಿಗೆ ಕರ್ನಾಟಕ ಕೇಂದ್ರೀಯ ವಿವಿ ಗೌರವ ಡಾಕ್ಟರೇಟ್ ಪ್ರದಾನ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮೂರ್ತಿಯನ್ನು ಸಮರ್ಪಕ ನಿರ್ವಹಣೆ ಮಾಡುವೆಂತೆ ಕಾಂಗ್ರೆಸ್ ಹಲವು ಬಾರಿ ಮನವಿ ಮಾಡಿಕೊಂಡರೂ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಗಾಂಧಿ ಜಯಂತಿ ಬಂದಿದೆ ಎಂದು ಇವತ್ತು ಸುಣ್ಣ ಬಣ್ಣ ಬಳಿಯುತ್ತಿದ್ದಾರೆ. ನಿರಂತರ ನಿರ್ವಹಣೆ ಮಾಡುವುದರ ಮೂಲಕ ರಾಷ್ಟ್ರಪಿತನಿಗೆ ಗೌರವ ಸಲ್ಲಿಸಬೇಕಾಗಿದ್ದು ಪಾಲಿಕೆ ಜವಾಬ್ದಾರಿಯಾಗಿದೆ ಪ್ರತಿಭಟನಾಕಾರರು ಹೇಳಿದರು.
ವಿಧಾನ ಪರಿಷತ್ ಪದವೀಧರ ಕ್ಷೇತ್ರ ಚುನಾವಣೆ ಅ.28ಕ್ಕೆ: ನ.2ಕ್ಕೆ ಮತ ಎಣಿಕೆ
ಇನ್ನು ನಿರ್ವಹಣೆ ಕೊರತೆಯಿಂದ ಮೂರ್ತಿ ಪ್ಲಾಟ್ಫಾರ್ಮ್ ಕುಸಿಯುತ್ತಿದೆ. ಈ ಕುರಿತು ಎರಡು ವರ್ಷಗಳಿಂದ ಮನವಿ ಮಾಡಿದರೂ ಪಾಲಿಕೆ ನಿರ್ಲಕ್ಷ್ಯ ತೋರಿದೆ ಎಂದು ಪ್ರತಿಭಟನಾಕಾರರು ದೂರಿದರು. ನವೀದ್ ಮುಲ್ಲಾ, ಅಬ್ದುಲ್ ಗನಿವಲಿ ಅಹ್ಮದ್, ಪ್ರಕಾಶ ಬುರಬುರೆ, ಸಾಗರ ಹಿರೆಮನಿ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ.
ಪದವೀಧರ ಮತಕ್ಷೇತ್ರದ ಚುನಾವಣೆ; 8 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ
ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಸಾಂಕೇತಿಕ ಧರಣಿ ಆರಂಭಿಸಿ ಕಿಮ್ಸ್ ಗೇಟ್ ಮುಂಭಾಗದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆ ನಿರ್ವಹಣೆಯಲ್ಲಿ ಪಾಲಿಕೆ ವಿಫಲವಾಗಿದೆ ಎಂದು ಆರೋಪಿಸಿ ಸಾಂಕೇತಿಕ ಪ್ರತಿಭಟನೆ ಆರಂಭಿಸಿದ್ದು, ಎಂಎಲ್ಸಿ ಶ್ರೀನಿವಾಸ ಮಾನೆ, ಆಹಾರ ನಿಗಮದ ಮಾಜಿ ಉಪಾಧ್ಯಕ್ಷ ಮೋಹನ ಅಸುಂಡಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಸಂಜೆತನಕ ನಡೆಯಲಿದೆ.
ಡಾ.ಕಣವಿಗೆ ಕರ್ನಾಟಕ ಕೇಂದ್ರೀಯ ವಿವಿ ಗೌರವ ಡಾಕ್ಟರೇಟ್ ಪ್ರದಾನ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮೂರ್ತಿಯನ್ನು ಸಮರ್ಪಕ ನಿರ್ವಹಣೆ ಮಾಡುವೆಂತೆ ಕಾಂಗ್ರೆಸ್ ಹಲವು ಬಾರಿ ಮನವಿ ಮಾಡಿಕೊಂಡರೂ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಗಾಂಧಿ ಜಯಂತಿ ಬಂದಿದೆ ಎಂದು ಇವತ್ತು ಸುಣ್ಣ ಬಣ್ಣ ಬಳಿಯುತ್ತಿದ್ದಾರೆ. ನಿರಂತರ ನಿರ್ವಹಣೆ ಮಾಡುವುದರ ಮೂಲಕ ರಾಷ್ಟ್ರಪಿತನಿಗೆ ಗೌರವ ಸಲ್ಲಿಸಬೇಕಾಗಿದ್ದು ಪಾಲಿಕೆ ಜವಾಬ್ದಾರಿಯಾಗಿದೆ ಪ್ರತಿಭಟನಾಕಾರರು ಹೇಳಿದರು.
ವಿಧಾನ ಪರಿಷತ್ ಪದವೀಧರ ಕ್ಷೇತ್ರ ಚುನಾವಣೆ ಅ.28ಕ್ಕೆ: ನ.2ಕ್ಕೆ ಮತ ಎಣಿಕೆ
ಇನ್ನು ನಿರ್ವಹಣೆ ಕೊರತೆಯಿಂದ ಮೂರ್ತಿ ಪ್ಲಾಟ್ಫಾರ್ಮ್ ಕುಸಿಯುತ್ತಿದೆ. ಈ ಕುರಿತು ಎರಡು ವರ್ಷಗಳಿಂದ ಮನವಿ ಮಾಡಿದರೂ ಪಾಲಿಕೆ ನಿರ್ಲಕ್ಷ್ಯ ತೋರಿದೆ ಎಂದು ಪ್ರತಿಭಟನಾಕಾರರು ದೂರಿದರು. ನವೀದ್ ಮುಲ್ಲಾ, ಅಬ್ದುಲ್ ಗನಿವಲಿ ಅಹ್ಮದ್, ಪ್ರಕಾಶ ಬುರಬುರೆ, ಸಾಗರ ಹಿರೆಮನಿ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ.