ಆ್ಯಪ್ನಗರ

ಪಾಲಿಕೆ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ

ಹುಬ್ಬಳ್ಳಿ : ಮಹಾನಗರ ಪಾಲಿಕೆಯು ಗುತ್ತಿಗೆದಾರರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹು-ಧಾ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಸದಸ್ಯರು ಮಂಗಳವಾರ ಅನಿರ್ಧಿಷ್ಟ ಮುಷ್ಕರ ಆರಂಭಿಸಿದರು.

Vijaya Karnataka 2 Jan 2019, 5:23 pm
ಹುಬ್ಬಳ್ಳಿ : ಮಹಾನಗರ ಪಾಲಿಕೆಯು ಗುತ್ತಿಗೆದಾರರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹು-ಧಾ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಸದಸ್ಯರು ಮಂಗಳವಾರ ಅನಿರ್ಧಿಷ್ಟ ಮುಷ್ಕರ ಆರಂಭಿಸಿದರು.
Vijaya Karnataka Web contrary to the contractors protest against the stake
ಪಾಲಿಕೆ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ


ಮೂರು ತಿಂಗಳಿಂದ ಪಾಲಿಸಿ ಬಿಲ್‌ ಪಾವತಿಸಿಲ್ಲ, ಗುತ್ತಿಗೆದಾರರ ಮೂಲ ಬಿಲ್‌ದಲ್ಲಿ ಜಿಎಸ್‌ಟಿ ಕಡಿತಗೊಳಿಸುವುದನ್ನು ರದ್ದುಗೊಳಿಸಿದರೂ ಪಾಲಿಕೆ, ಜಿಎಸ್‌ಟಿ ಪಡೆಯುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಪಿಡಬ್ಲುಡಿ ಇಲಾಖೆ ಹೊಸ ದರ ಪಟ್ಟಿ ಪ್ರಕಟಗೊಂಡು ಮೂರು ತಿಂಗಳಾದರೂ ಅನುಷ್ಠಾನಗೊಳಿಸಲು ಮೀನಮೇಷ ಎಣಿಸುತ್ತಿರುವುದು ಏಕೆ ಎಂದು ಪ್ರತಿಭಟನಕಾರರು ಪ್ರಶ್ನಿಸಿದರು. 2018-19ಕ್ಕಿಂತ ಪೂರ್ವದಲ್ಲಿ ಜಾರಿಯಲ್ಲಿದ್ದ ಎಸ್‌ಆರ್‌ ದರಗಳು ಇತಿಹಾಸದ ಪುಟ ಸೇರಿದರೂ ಹಳೆ ಪದ್ಧತಿಯ ಎಸ್‌ಆರ್‌ ದರಗಳನ್ನೇ ಪಡೆಯುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿರುವ ಹಿಂದಿರುವ ಉದ್ದೇಶ ಎಂದು ಪ್ರಶ್ನಿಸಿದರು.

ಬೆಂಗಳೂರು ವೃತ್ತಕ್ಕೆ ಮಾತ್ರ ತಡೆಯಾಜ್ಞೆ ಹೊಂದಿರುವ ಕಟ್ಟಡ ವಿಭಾಗದ ಐಟಂ ಗಳನ್ನು 18-19ರ ದರ ಪಟ್ಟಿಗೆ ಅನುಗುಣವಾಗಿ ಮೌಖಿಕ ಆದೇಶ ಇದೆ ಎಂದು ಹೇಳಿ ಅಧಿಕಾರಿಗಳು ಗುತ್ತಿಗೆದಾರರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರು ವೃತ್ತಕ್ಕೆ ಸಂಬಂಧಿಸಿದ ಆದೇಶ ಧಾರವಾಡ ಪಿಡಬ್ಲುಡಿ ವೃತ್ತಕ್ಕೆ ಅನ್ವಯಿಸುತ್ತದೆಯೇ ಅಥವಾ ಸಂಬಂಧಿಸಿದ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆಯೇ ಎಂದು ಪ್ರತಿಭಟನಾಕಾರರು ಕೇಳಿದರು.

ವಿನಾಕಾರಣ ಪಾಲಿಕೆಯು ಗುತ್ತಿಗೆದಾರರನ್ನು ಶೋಷಿಸುತ್ತಿದ್ದು, ಈ ನೀತಿಯನ್ನು ಖಂಡಿಸಿ ಹುಬ್ಬಳ್ಳಿ ಧಾರವಾಡ ವಿಭಾಗದ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದ್ದೇವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶರದ ದೊಡ್ಡಮನಿ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ