ಆ್ಯಪ್ನಗರ

ಬಳ್ಳಾರಿ ಜೋಳದ ಅಬ್ಬರ: ಸ್ಥಳೀಯ ರೈತ ತತ್ತರ

ತಾಲೂಕಿನ ರೆತರಿಗೆ ನೆರವಾಗಲೆಂಬ ಉದ್ದೇಶದಿಂದ ಸರಕಾರದಿಂದ ಇತ್ತೀಚೆಗೆ ಇಲ್ಲಿನ ಎಪಿಎಂಸಿಯಲ್ಲಿ ಆರಂಭಗೊಂಡ ಬೆಂಬಲ ಬೆಲೆಯ ಜೋಳ ಖರೀದಿ ಕೇಂದ್ರದಲ್ಲಿ

ವಿಕ ಸುದ್ದಿಲೋಕ 20 Mar 2016, 5:00 am
ಹುಚ್ಚಪ್ಪ ಭೋವಿ ,ನವಲಗುಂದ ತಾಲೂಕಿನ ರೆತರಿಗೆ ನೆರವಾಗಲೆಂಬ ಉದ್ದೇಶದಿಂದ ಸರಕಾರದಿಂದ ಇತ್ತೀಚೆಗೆ ಇಲ್ಲಿನ ಎಪಿಎಂಸಿಯಲ್ಲಿ ಆರಂಭಗೊಂಡ ಬೆಂಬಲ ಬೆಲೆಯ ಜೋಳ ಖರೀದಿ ಕೇಂದ್ರದಲ್ಲಿ ಬೇರೆ ಜಿಲ್ಲೆಗಳ ದಲಾಲರದ್ದೇ ದರಬಾರು ನಡೆದಿದೆ. ಇದರಿಂದ ತಾಲೂಕಿನ ರೆತರು ಪರದಾಡುವಂತಾಗಿದೆ.
Vijaya Karnataka Web corn bellary brothers a local farmer in the lurch
ಬಳ್ಳಾರಿ ಜೋಳದ ಅಬ್ಬರ: ಸ್ಥಳೀಯ ರೈತ ತತ್ತರ


ಸರಕಾರ ಪ್ರತಿಕ್ವಿಂಟಲ್ ಬಿಳಿಜೋಳ(ಮಾಲ್ದಂಡಿ)ಗೆ 2100ದರದ ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿದ್ದು ಖರೀದಿ ಉಸ್ತುವಾರಿಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳ ವಹಿಸಿಕೊಂಡಿದೆ. ಫೆ.26ರಂದೇ ಖರೀದಿ ಆರಂಭಗೊಂಡಿದ್ದು ಈಗಾಗಲೇ 32804 ಕ್ವಿಂಟಲ್ ಜೋಳ ಖರೀದಿಸಲಾಗಿದ್ದು ಇದರಲ್ಲಿ ಹೆಚ್ಚಿನ ಪಾಲು ಬೇರೆ ಜಿಲ್ಲೆಗಳಿಂದ ಬಂದ ಎಚ್‌ಎಫ್‌ಸಿ ಜೋಳವೇ ಹೆಚ್ಚು ಖರೀದಿಯಾಗಿದೆ. ಖರೀದಿ ಮುನ್ನ ಜೋಳ ಪರೀಕ್ಷೆಗಾಗಿ ಗ್ರೇಡರ್‌ರೊಬ್ಬರನ್ನು ನೇಮಿಸಿದ್ದರೂ ಬೇರೆ ಜಿಲ್ಲೆಯ ಎಚ್‌ಎಫ್‌ಸಿ ಜೋಳ ಖರೀದಿಯಾಗಿದೆ ಎಂಬುದು ಇಲ್ಲಿನ ರೆತರ ಅಭಿಪ್ರಾಯವಾಗಿದ್ದು ಗ್ರೇಡರೊಬ್ಬರು ದಲಾಲರೊಂದಿಗೆ ಶಾಮೀಲಾಗಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.

ಎಚ್‌ಎಫ್‌ಸಿ ಎಲ್ಲಿಯದು? ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುವ ಈ ಎಚ್‌ಎಫ್‌ಸಿ ತಳಿಯ ಜೋಳ ಇಲ್ಲಿನ ಮಾಲ್ದಂಡಿ ಬಿಳಿಜೋಳಕ್ಕೆ ಸ್ವಲ್ಪ ಹೋಲಿಕೆಯಾಗುತ್ತದೆ. ಈ ಜೋಳದ ದರ ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ 1350 ರಿಂದ 1400ರ ದರದಲ್ಲಿ ಲಭ್ಯವಾಗುತ್ತದೆ.ಅಕ್ಕ ಪಕ್ಕದ ಜಿಲ್ಲೆಯ ದಲಾಲರು ಅಲ್ಲಿಂದ ಕಡಿಮೆ ದರದಲ್ಲಿ ಖರೀದಿ ಮಾಡಿ ಇದೇ ತಾಲೂಕಿನ ರೆತರ ಪಿಟಿಸಿ ಉತಾರ ಪಡೆದು 2100ರೂಗೆ ಇದೇ ಸರಕಾರಿ ಖರೀದಿ ಕೇಂದ್ರದಲ್ಲಿ ಮಾರಿ ಪ್ರತಿ ಕ್ವಿಂಟಾಲ್‌ಗೆ 600ರಕ್ಕೂ ಹೆಚ್ಚು ಲಾಭ ಪಡೆಯುತ್ತಿದ್ದಾರೆ. ಇದರಿಂದ ತಾಲೂಕಿನ ರೆತರಿಗೆ ಮುಂದಿನ ದಿನಗಳಲ್ಲಿ ಸರಕಾರದಿಂದ ಪರಿಹಾರ ಪಡೆಯುವಾಗ ತೊಂದರೆಯಾಗಲಿದೆ.

2 ದಿನ ಕಾಯಲೇಬೇಕು ಹಮಾಲರಿಂದಲೇ ಇಲೆಕ್ಟ್ರಾನಿಕ್ ತೂಕದ ಮಶಿನ್‌ನಿಂದ ಕ್ವಿಂಟಾಲಗಟ್ಟಲೇ ತೂಕ ಮಾಡುವ ವ್ಯವಸ್ಥೆ ಇರುವುದರಿಂದ ಖರೀದಿ ನೀಡಲು ಬರುವ ತಾಲೂಕಿನ ರೆತರು ಎರೆಡೆರೆಡು ದಿನಗಳ ವರೆಗೆ ಕಾಯಬೇಕಾದ ಪರಿಸ್ಥಿತಿ ಬಂದೊದಗಿದೆ. ಜತೆಗೆ ಕ್ವಿಂಟಾಲ್ ಭರ್ತಿ ಚೀಲ ತಂದರೆ 50ಕೆಜಿ ಪಾಕೆಟ್‌ಮಾಡಿ ತಂದರೆ ಮಾತ್ರ ಖರೀದಿಗೆ ಅವಕಾಶ ಹಮಾಲರ ಕೊರತೆ, ವೇಬ್ರಿಡ್ಜ ತೂಕದ ವ್ಯವಸ್ಥೆ ಇಲ್ಲದ್ದರಿಂದ ರೆತರು ಕಾಯುವುದು ಅನಿವಾರ್ಯ. ಇನ್ನು ಬೇರೆ ಜಿಲ್ಲೆಗಳಿಂದ ಲಾರಿಗಟ್ಟಲೇ ಬರುವ ಜೋಳವನ್ನು ಮಾತ್ರ ವೇಬ್ರಿಜ್‌ನಲ್ಲಿಯೇ ತೂಕ ಮಾಡಿ ಅದೇ ಲಾರಿಯನ್ನು ವೇರ್‌ಹೌಸ್‌ಗೆ ರವಾನಿಸಲಾಗುತ್ತಿದೆ . ಶುಕ್ರವಾರವಷ್ಟೆ 4 ಲಾರಿಗಳನ್ನು ಕಳುಹಿಸಲಾಗಿದೆ ಎಂದು ಸ್ಥಳೀಯ ರೆತರು ಹೇಳುತ್ತಾರೆ.

ತಾಲೂಕಿನ ರೆತರಿಗೇಕೆ ತೊಂದರೆ? 2014-15ರಲ್ಲಿ ಬೆಳೆಹಾನಿ ಸಂದರ್ಭದಲ್ಲಿ ತಾಲೂಕಿನ ಬಿತ್ತನೆ ಪ್ರದೇಶದ ಶೇ80ಕ್ಕೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಉಳ್ಳಾಗಡ್ಡಿ ಬೆಳೆ ಸಕಾಲದಲ್ಲಿ ಮಳೆಯಾಗದ್ದರಿಂದ ಹಾನಿಗೊಳಗಾಗಿತ್ತು. ಸರಕಾರ ಪರಿಹಾರ ನೀಡುವ ಸಂದರ್ಭದಲ್ಲಿ ಉಳ್ಳಾಗಡ್ಡಿ ಬೆಳೆಗೆ ಪರಿಹಾರ ನೀಸಲಿಲ್ಲ ಈ ಕುರಿತು ರೆತ ಹೋರಾಟಗಾರರು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದಾಗ ಸರಕಾರ ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ದಾಖಲಾದ ಮಾಹಿತಿಯಂತೆ ಅತೀ ಹೆಚ್ಚು ಉಳ್ಳಾಗಡ್ಡಿ ಮಾರಾಟವಾಗಿದ್ದರಿಂದ ಪರಿಹಾರ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆಗ ನಡೆದಿದ್ದೂ ಇದೇ ವ್ಯವಹಾರ .ಅಂದರೆ ಬೆರೆ ಜಿಲ್ಲೆಯ ಖರೀದಿದಾರರು ಸ್ಥಳೀಯ ರೆತರ ಹೆಸರಿನಲ್ಲಿ ಉಳ್ಳಾಗಡ್ಡಿಯನ್ನು ಸರಕಾರಿ ಬೆಂಬಲ ಬೆಲೆ ಕೇಂದ್ರದಲ್ಲಿ ಮಾರಾಟ ಮಾಡಿದ್ದರ ಮರಿಣಾಮ ಇಲ್ಲಿನ ರೆತರಿಗೆ ಪರಿಹಾರದಲ್ಲಿ ಅನ್ಯಾಯವಾಗಿದ್ದು ಸ್ಪಷ್ಟವಾಗಿತ್ತು. ಈಗಲೂ ಅಷ್ಟೇ ಕೃಷಿ ಇಲಾಖೆಯ ಅಧಿಕತ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಹಿಂಗಾರಿಯಲ್ಲಿ ಒಟ್ಟು 12500 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಲಾಗಿದ್ದು ಮಳೆ ಅಭಾವದಿಂದ ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 3ಕ್ವಿಂಟಾಲ್ ಜೋಳ ಬೆಳೆಯಲಾಗಿದೆ. ಒಟ್ಟಾರೆ 468010 ಕ್ವಿಂಟಾಲ್ ಜೋಳ ರೆತ ಕೆಸೇರಿದೆ ಎನ್ನಲಾಗುತ್ತಿದ್ದು, ಖರೀದಿ ಕೇಂದ್ರದಲ್ಲಿ ಈಗಾಗಲೇ 32804 ಸಾವಿರ ಕ್ವಿಂಟಾಲ್ ಜೋಳ ಖರೀದಿಯಾಗಿದ್ದು ಆಶ್ಚರ್ಯವೇ ಸರಿ.

ಯಾಕೆಂದರೆ ಜೋಳ ಬೆಳೆದವರೆಲ್ಲ ಖರೀದಿ ಕೊಟ್ಟಿಲ್ಲ. ಕೆಲವರು ವರ್ಷ ಪೂರ್ತಿ ಮನೆಯ ಬಳಕೆಗೆ ಇಟ್ಟರೆ. ಇನ್ನು ಕೆಲವರು ಹೆಚ್ಚು ದರ ನೀಡುವ ಹೊರಗಿನ ದಲಾಲರಿಗೆ ಖರೀದಿ ಕೊಟ್ಟಿದ್ದಾರೆ. ಇನ್ನು ಕೆಲ ದೊಡ್ಡ ರೆತರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ದರ ಬರಬಹುದೆಂಬ ಆಸೆಯಿಂದ ಸ್ಟಾಕ್ ಇಟ್ಟುಕೊಂಡಿದ್ದಾರೆ. ಇಷ್ಟಾಗಿಯೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜೋಳ ಖರೀದಿ ಕೇಂದ್ರದಲ್ಲಿ ಖರೀದಿಯಾಗಿರುವುದು ಸಂಶಯಕ್ಕೀಡು ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ