ಹುಬ್ಬಳ್ಳಿ : ಕೊರೊನಾ ಸೋಂಕಿತ ವ್ಯಕ್ತಿ ಎಂದು ಆರೋಗ್ಯವಂತ ವ್ಯಕ್ತಿಯ ಭಾವಚಿತ್ರವನ್ನು ವಾಟ್ಸ್ಆ್ಯಪ್ನಲ್ಲಿಹರಿಬಿಟ್ಟು ಸಾರ್ವಜನಿಕರಲ್ಲಿಭೀತಿ ಮೂಡಿಸಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಇಲ್ಲಿಯ ಹೊಸಯಲ್ಲಾಪೂರದ ನಿವಾಸಿ ಅಭಿಷೇಕ ಜೋಶಿ(19)ಹಾಗೂ ಯಾಲಕ್ಕಿ ಶೆಟ್ಟರ್ ಕಾಲೊನಿಯ ಪ್ರಮೋದ ಶೇಟ್ (26) ಬಂಧಿತ ಆರೋಪಿಗಳು.
ಹೊಸಯಲ್ಲಾಪುರ ಪ್ರದೇಶದ ಒಬ್ಬ ವ್ಯಕ್ತಿಗೆ ಕೋವಿಡ…-19 ಪಾಸಿಟಿವ್ ವರದಿ ಬಂದಿದ್ದ ವೇಳೆ, ಈ ಇಬ್ಬರು ಆರೋಪಿಗಳು ಆರೋಗ್ಯವಂತ ವ್ಯಕ್ತಿ ಹಾಗೂ ಪತ್ರಕರ್ತ ಅರುಣ ಎಂಬವರ ಪೋಟೊ ದುರ್ಬಳಕೆ ಮಾಡಿದ್ದರು. ಅವರ ಭಾವಚಿತ್ರವನ್ನು ವಾಟ್ಸ…ಆ್ಯಪ್ನಲ್ಲಿಹರಿಬಿಟ್ಟು ಸಾರ್ವಜನಿಕರಲ್ಲಿಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿ ದೂರು ನೀಡಲಾಗಿತ್ತು. ಅದರಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಧಿಕಾರಿ ಎಂ. ದೀಪಾ ಅವರು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಹು-ಧಾ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸುಳ್ಳು ಸುದ್ದಿಗಳನ್ನು ಸೃಷ್ಟಿಸಿದ ಮತ್ತು ಫಾರ್ವರ್ಡ್ ಮಾಡಿದ ಇಬ್ಬರು ಕಿಡಿಗೇಡಿಗಳನ್ನು ಬಂಧಿಸುವಲ್ಲಿಯಶಸ್ವಿಯಾಗಿದ್ದಾರೆ.
ಆಗಿದ್ದು ಹೇಗೆ? : ಧಾರವಾಡದ ವ್ಯಕ್ತಿಗೆ ಕೋವಿಡ…-19 ವೈರಸ್ ಇರುವುದು ಧೃಡಪಟ್ಟಿತ್ತು. ಇದರ ಬೆನ್ನಲ್ಲೆ ಪ್ರಕರಣ ಪತ್ತೆಯಾದ ಬಗ್ಗೆ ಅರುಣ ತಮ್ಮ ಟ್ವಿಟರ್ ಖಾತೆಯಲ್ಲಿಪೋಸ್ಟ್ ಹಾಕಿದ್ದರು. ಇದನ್ನು ಪಾಲೋ ಮಾಡಿದ ಅಭಿಷೇಕ ಸ್ಕ್ರೀನ್ ಶಾಟ್ ಹೊಡೆದು ಕೊಂಡು ಪತ್ರಕರ್ತ ಅರುಣ ಅವರ ಪೋಟೋವನ್ನು ಡೌನಲೊಡ್ ಮಾಡಿಕೊಂಡು ವ್ಯಾಟ್ಸ… ಆ್ಯಪನಲ್ಲಿಹರಿಬಿಟ್ಟಿದ್ದಾನೆ.
ನಂತರ ಈ ಪೋಟೋದ ಜತೆಗೆ ಕೋವಿಡ್-19 ವೈರಸ್ ಹೊಂದಿರುವ ವ್ಯಕ್ತಿ ಎಂದು ವ್ಯಾಟ್ಸ ಆ್ಯಪ್ ಸೇರಿದಂತೆ ಸೇರಿದಂತೆ ಎಲ್ಲಸಾಮಾಜಿಕ ಜಾಲತಾಣಗಳಲ್ಲಿಹರಿಬಿಟ್ಟಿದ್ದಾನೆ. ಈ ಮೂಲಕ ಅರುಣಗೆ ಕೊರೊನಾ ವೈರಸ್ ಇದೇ ಎಂಬಂತೆ ಬಿಂಬಿಸಿದ್ದರು.
ಸೈಬರ್ ಕ್ರೈಂ ಪೊಲೀಸ್ ಠಾಣೆ ಪಿಐ ಡಿ.ಕೆ. ಪ್ರಭುಗೌಡ ನೇತೃತ್ವದ ತಂಡ ಬಂಧಿಸಿದೆ. ಇಬ್ಬರು ಆರೋಪಿಗಳ ಕುರಿತು ಪ್ರತ್ಯೇಕವಾಗಿ ಧಾರವಾಡ ಶಹರ ಮತ್ತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ಇಲ್ಲಿಯ ಹೊಸಯಲ್ಲಾಪೂರದ ನಿವಾಸಿ ಅಭಿಷೇಕ ಜೋಶಿ(19)ಹಾಗೂ ಯಾಲಕ್ಕಿ ಶೆಟ್ಟರ್ ಕಾಲೊನಿಯ ಪ್ರಮೋದ ಶೇಟ್ (26) ಬಂಧಿತ ಆರೋಪಿಗಳು.
ಹೊಸಯಲ್ಲಾಪುರ ಪ್ರದೇಶದ ಒಬ್ಬ ವ್ಯಕ್ತಿಗೆ ಕೋವಿಡ…-19 ಪಾಸಿಟಿವ್ ವರದಿ ಬಂದಿದ್ದ ವೇಳೆ, ಈ ಇಬ್ಬರು ಆರೋಪಿಗಳು ಆರೋಗ್ಯವಂತ ವ್ಯಕ್ತಿ ಹಾಗೂ ಪತ್ರಕರ್ತ ಅರುಣ ಎಂಬವರ ಪೋಟೊ ದುರ್ಬಳಕೆ ಮಾಡಿದ್ದರು. ಅವರ ಭಾವಚಿತ್ರವನ್ನು ವಾಟ್ಸ…ಆ್ಯಪ್ನಲ್ಲಿಹರಿಬಿಟ್ಟು ಸಾರ್ವಜನಿಕರಲ್ಲಿಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿ ದೂರು ನೀಡಲಾಗಿತ್ತು. ಅದರಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಧಿಕಾರಿ ಎಂ. ದೀಪಾ ಅವರು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಹು-ಧಾ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸುಳ್ಳು ಸುದ್ದಿಗಳನ್ನು ಸೃಷ್ಟಿಸಿದ ಮತ್ತು ಫಾರ್ವರ್ಡ್ ಮಾಡಿದ ಇಬ್ಬರು ಕಿಡಿಗೇಡಿಗಳನ್ನು ಬಂಧಿಸುವಲ್ಲಿಯಶಸ್ವಿಯಾಗಿದ್ದಾರೆ.
ಆಗಿದ್ದು ಹೇಗೆ? : ಧಾರವಾಡದ ವ್ಯಕ್ತಿಗೆ ಕೋವಿಡ…-19 ವೈರಸ್ ಇರುವುದು ಧೃಡಪಟ್ಟಿತ್ತು. ಇದರ ಬೆನ್ನಲ್ಲೆ ಪ್ರಕರಣ ಪತ್ತೆಯಾದ ಬಗ್ಗೆ ಅರುಣ ತಮ್ಮ ಟ್ವಿಟರ್ ಖಾತೆಯಲ್ಲಿಪೋಸ್ಟ್ ಹಾಕಿದ್ದರು. ಇದನ್ನು ಪಾಲೋ ಮಾಡಿದ ಅಭಿಷೇಕ ಸ್ಕ್ರೀನ್ ಶಾಟ್ ಹೊಡೆದು ಕೊಂಡು ಪತ್ರಕರ್ತ ಅರುಣ ಅವರ ಪೋಟೋವನ್ನು ಡೌನಲೊಡ್ ಮಾಡಿಕೊಂಡು ವ್ಯಾಟ್ಸ… ಆ್ಯಪನಲ್ಲಿಹರಿಬಿಟ್ಟಿದ್ದಾನೆ.
ನಂತರ ಈ ಪೋಟೋದ ಜತೆಗೆ ಕೋವಿಡ್-19 ವೈರಸ್ ಹೊಂದಿರುವ ವ್ಯಕ್ತಿ ಎಂದು ವ್ಯಾಟ್ಸ ಆ್ಯಪ್ ಸೇರಿದಂತೆ ಸೇರಿದಂತೆ ಎಲ್ಲಸಾಮಾಜಿಕ ಜಾಲತಾಣಗಳಲ್ಲಿಹರಿಬಿಟ್ಟಿದ್ದಾನೆ. ಈ ಮೂಲಕ ಅರುಣಗೆ ಕೊರೊನಾ ವೈರಸ್ ಇದೇ ಎಂಬಂತೆ ಬಿಂಬಿಸಿದ್ದರು.
ಸೈಬರ್ ಕ್ರೈಂ ಪೊಲೀಸ್ ಠಾಣೆ ಪಿಐ ಡಿ.ಕೆ. ಪ್ರಭುಗೌಡ ನೇತೃತ್ವದ ತಂಡ ಬಂಧಿಸಿದೆ. ಇಬ್ಬರು ಆರೋಪಿಗಳ ಕುರಿತು ಪ್ರತ್ಯೇಕವಾಗಿ ಧಾರವಾಡ ಶಹರ ಮತ್ತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.